ಗಡಿಯಲ್ಲಿ ಪದೇ ಪದೆ ನಿಯಮ ಉಲ್ಲಂಘನೆ ಮಾಡಿದ್ರೆ, ಮತ್ತೊಂದು ಸರ್ಜಿಕಲ್​​ ಸ್ಟ್ರೈಕ್​​: ಪಾಕ್​ಗೆ ಅಮಿತ್ ಶಾ ಎಚ್ಚರಿಕೆ

author img

By

Published : Oct 14, 2021, 5:38 PM IST

Amit Shah

ಗಡಿಯಲ್ಲಿ ಪಾಕ್​​ ತನ್ನ ಕಳ್ಳಾಟ ನಿಲ್ಲಿಸದಿದ್ದರೆ ಮತ್ತೊಮ್ಮೆ ಸರ್ಜಿಕಲ್​ ಸ್ಟ್ರೈಕ್​ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ವಾರ್ನ್ ಮಾಡಿದ್ದಾರೆ.

ಪಣಜಿ(ಗೋವಾ): ಜಮ್ಮು- ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಪದೇ ಪದೆ ನಿಯಮ ಉಲ್ಲಂಘನೆ ಮಾಡಿದರೆ, ಮತ್ತೊಂದು ಸರ್ಜಿಕಲ್​​ ಸ್ಟ್ರೈಕ್​ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೆರೆಯ ದೇಶಕ್ಕೆ ನೇರವಾಗಿ ವಾರ್ನ್ ಮಾಡಿದ್ದಾರೆ.

  • #WATCH | "Another important step was surgical strike under PM Modi & former Defence Minister Manohar Parrikar. We sent out a message that one should not disrupt India's borders...There was a time when talks happened, but now is the time to reciprocate," says Home Min Amit Shah pic.twitter.com/BrMFUfzLRT

    — ANI (@ANI) October 14, 2021 " class="align-text-top noRightClick twitterSection" data=" ">

ಕಳೆದ ಕೆಲ ದಿನಗಳಿಂದ ಜಮ್ಮು - ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು, ಇದಕ್ಕೆ ಪಾಕ್​ ಕುಮ್ಮಕ್ಕು ನೀಡುತ್ತಿರುವ ಹಿನ್ನೆಲೆಯಲ್ಲಿ ನೇರವಾಗಿ ನೇರೆಯ ದೇಶದ​ ವಿರುದ್ಧ ವಾಗ್ದಾಳಿ ನಡೆಸಿದರು. ಗೋವಾದ ಧರ್‌ಬಂದೋರಾದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಗಡಿ ನಿಯಮ ಉಲ್ಲಂಘನೆ, ಕಾಶ್ಮೀರದಲ್ಲಿ ನಾಗರಿಕರ ಕೊಲೆಯಂತಹ ಕೃತ್ಯ ನಿರಂತರವಾಗಿ ಮುಂದುವರಿದರೆ ಮತ್ತೊಮ್ಮೆ ಸರ್ಜಿಕಲ್​ ಸ್ಟ್ರೈಕ್​ ನಡೆಸಲಾಗುವುದು ಎಂದರು.

ಗೋವಾ ಅಭಿವೃದ್ಧಿಗೆ ಪರಿಕ್ಕರ್​ ಕಾರಣ

ಗೋವಾದಲ್ಲಿ ಆರಂಭಗೊಳ್ಳಲಿರುವ ರಾಷ್ಟ್ರೀಯ ವಿಧಿ - ವಿಜ್ಞಾನ ವಿಶ್ವವಿದ್ಯಾಲಯ ಅನೇಕ ವಿದ್ಯಾರ್ಥಿಗಳಿಗೆ ಸಹಾಯವಾಗಲಿದ್ದು, ಫಾರೆನ್ಸಿಕ್​ ಸೈನ್ಸ್​​ ಅಭ್ಯಾಸ ಮಾಡಲು ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು. ಹಿಂದಿನ ಗೋವಾ ಸಿಎಂ ಮನೋಹರ್ ಪರಿಕ್ಕರ್​​​ ಈ ಚಿಕ್ಕ ರಾಜ್ಯ ಎಲ್ಲೆಡೆ ಗುರುತಿಸಿಕೊಳ್ಳುವಂತೆ ಮಾಡಿದ್ದರು. ಹೀಗಾಗಿ ಕಳೆದ 10 ವರ್ಷಗಳಿಂದ ಹೆಚ್ಚಿನ ಅಭಿವೃದ್ಧಿ ಕಂಡಿದ್ದು, ದೇಶದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡಿದೆ ಎಂದರು.

ಪರಿಕ್ಕರ್​ ಅವರು, ಕೇಂದ್ರ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ದೇಶದ ಯೋಧರಿಗೆ ಒನ್ ರ್‍ಯಾಂಕ್‌​ ಒನ್ ಪೆನ್ಶನ್ ಯೋಜನೆ ಜಾರಿಗೆ ತಂದರು. ಇದರಿಂದ ಅನೇಕ ನಿವೃತ್ತಿ ಯೋಧರಿಗೆ ಸಹಾಯವಾಗಿದೆ ಎಂದು ತಿಳಿಸಿದರು.

ಪರಿಕ್ಕರ್​ ಅವಧಿಯಲ್ಲೇ ನಡೆದಿತ್ತು ಸರ್ಜಿಕಲ್​ ಸ್ಟ್ರೈಕ್​

ಕೇಂದ್ರದಲ್ಲಿ ಮನೋಹರ್ ಪರಿಕ್ಕರ್​ ರಕ್ಷಣಾ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಜಿಕಲ್​​ ಸ್ಟ್ರೈಕ್​ ನಡೆಸಲಾಗಿತ್ತು. ಇದು ನಮ್ಮ ಸೈನ್ಯದ ಶಕ್ತಿ ಬಗ್ಗೆ ಜಗತ್ತಿಗೆ ತಿಳಿಸಿದೆ. ಇದೀಗ ಭಾರತದ ಗಡಿ ಪ್ರದೇಶದಲ್ಲಿ ತೊಂದರೆ ನೀಡುವ ಯಾರನ್ನೂ ನಾವು ಕೈಬಿಡಲ್ಲ ಎಂದಿದ್ದಾರೆ.

ಇದೇ ವೇಳೆ, ಆರು ವರ್ಷಗಳಿಗಿಂತಲೂ ಹೆಚ್ಚು ಜೈಲು ಶಿಕ್ಷೆಗೊಳಗಾಗುವ ಅಪರಾಧಗಳ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡುವುದು ಕಡ್ಡಾಯಗೊಳಿಸುವ ಗುರಿ ಕೇಂದ್ರ ಹೊಂದಿದ್ದು, ಆದಷ್ಟು ಬೇಗ ಈ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಮಿತ್ ಶಾ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.