ETV Bharat / bharat

ಸುಪ್ರೀಂಕೋರ್ಟ್​​ಗೆ ಬಡ್ತಿ: ಕನ್ನಡತಿ ಬಿ.ವಿ.ನಾಗರತ್ನ ಸೇರಿ 9 ಮಂದಿಗೆ ಕೇಂದ್ರ ಅನುಮೋದನೆ

author img

By

Published : Aug 26, 2021, 9:48 AM IST

ಕರ್ನಾಟಕದಿಂದ ಇಬ್ಬರು ನ್ಯಾಯಾಧೀಶರು ಸೇರಿದಂತೆ ಸುಪ್ರೀಂಕೋರ್ಟ್​ಗೆ 9 ಮಂದಿಯನ್ನು ನೇಮಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

Government clears 9 names recommended by SC for elevation
ಸುಪ್ರೀಂಕೋರ್ಟ್​​ಗೆ ಕರ್ನಾಟಕದಿಂದ ಎ.ಎಸ್​.ಓಕಾ, ಬಿ.ವಿ.ನಾಗರತ್ನ ಸೇರಿ 9 ಮಂದಿಗೆ ಕೇಂದ್ರ ಅನುಮೋದನೆ

ನವದೆಹಲಿ: ಸುಪ್ರೀಂಕೋರ್ಟ್​​ಗೆ ಮೂವರು ಮಹಿಳಾ ನ್ಯಾಯಾಧೀಶರು ಸೇರಿದಂತೆ 9 ಮಂದಿ ನ್ಯಾಯಾಧೀಶರ ಹೆಸರುಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕೆಲವು ದಿನಗಳ ಹಿಂದೆ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಅವರ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂ ಈ ಹೆಸರುಗಳನ್ನು ಅಂತಿಮಗೊಳಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ಕರ್ನಾಟಕದ ಮುಖ್ಯ ನ್ಯಾಯಾಧೀಶರಾದ ಎ.ಎಸ್.ಓಕಾ, ಗುಜರಾತ್​ನ ಮುಖ್ಯ ನ್ಯಾಯಾಧೀಶರಾದ ವಿಕ್ರಮ್ ನಾಥ್, ತೆಲಂಗಾಣದ ಹಿಮ ಕೊಹ್ಲಿ, ಸಿಕ್ಕಿಂನ ಜೆ.ಕೆ.ಮಹೇಶ್ವರಿ ಮತ್ತು ನಾಲ್ವರು ಹೈಕೋರ್ಟ್ ನ್ಯಾಯಮೂರ್ತಿಗಳಾದ ಕರ್ನಾಟಕದ ಬಿ.ವಿ.ನಾಗರತ್ನ, ಮದ್ರಾಸ್​​ನ ಎಂ.ಎಂ.ಸುಂದರೇಶ್​​, ಕೇರಳದ ಸಿ.ಟಿ.ರವಿಕುಮಾರ್ ಮತ್ತು ಗುಜರಾತ್​​ನ ಬೇಲಾ ಎಂ.ತ್ರಿವೇದಿ ಮತ್ತು ಹಿರಿಯ ವಕೀಲ ಪಿ.ಎಸ್.ನರಸಿಂಹ ಅವರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡಿತ್ತು.

ಈ ಹಿಂದೆ ಸುಪ್ರೀಂಕೋರ್ಟ್​​ನಲ್ಲಿ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದಂತೆ ಕೊಲಿಜಿಯಂ ಸಭೆಯ ಕುರಿತು ಮಾಧ್ಯಮಗಳಲ್ಲಿ ಬಂದ ವರದಿಗಳು 'ಅತ್ಯಂತ ದುರದೃಷ್ಟಕರ' ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: ಇಂದು ಕೇಂದ್ರ ಸರ್ವಪಕ್ಷ ಸಭೆ: ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಜೈಶಂಕರ್​​ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.