ETV Bharat / bharat

ಮೊಹರಂ ಮೆರವಣಿಗೆ ವೇಳೆ ಗಲಭೆ.. ಕಾರಿನ ಮೇಲೆ ಉದ್ರಿಕ್ತ ಗುಂಪಿನಿಂದ ದಾಳಿ.. Video

author img

By

Published : Aug 21, 2021, 5:18 PM IST

ಬಿಹಾರದ ಕತಿಹಾರ್​ನಲ್ಲಿ ಮೊಹರಂ ಮೆರವಣಿಗೆ ವೇಳೆ ಆಸ್ಪತ್ರೆಗೆ ತೆರಳಲು ದಾರಿ ಬಿಡುವಂತೆ ಕೇಳಿದ್ದಕ್ಕೆ, ಉದ್ರಿಕ್ತ ಗುಂಪೊಂದು ಕಾರಿನ ಮೇಲೆ ದಾಳಿ ನಡೆಸಿದೆ

katihar
katihar

ಕತಿಹಾರ್ (ಬಿಹಾರ): ಮೊಹರಂ ಮೆರವಣಿಗೆ ವೇಳೆ ಬಿಹಾರದಲ್ಲಿ ಗಲಭೆ ನಡೆದಿದ್ದು, ಕಾರಿನ ಮೇಲೆ ಉದ್ರಿಕ್ತ ಗುಂಪೊಂದು ದಾಳಿ ನಡೆಸಿದೆ. ಈ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕತಿಹಾರ್​ನ ಬರಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ಘಿಯಾ ಗ್ರಾಮದ ನಿವಾಸಿ ಅಮೀನಾ ಖಾತೂನ್​ ಅವರಿಗ ಚಿಕಿತ್ಸೆ ಕೊಡಿಸಿ ಪೂರ್ಣಿಯಾದಿಂದ ಕಾರಿನಲ್ಲಿ ಕರೆತರಲಾಗುತ್ತಿತ್ತು. ಈ ವೇಳೆ ಕತಿಹಾರ್​ನ ರಾಷ್ಟ್ರೀಯ ಹೆದ್ದಾರಿ-31 ರಲ್ಲಿ ಮುಸಾಪುರ ಚೌಕ್​ ಬಳಿ ಮೊಹರಂ ಮೆರವಣಿಗೆ ನಡೆಯುತ್ತಿತ್ತು.

ಕಾರಿನ ಮೇಲೆ ಉದ್ರಿಕ್ತ ಗುಂಪಿನಿಂದ ದಾಳಿ

ಕಾರು ಚಾಲಕನು ದಾರಿ ಬಿಡುವಂತೆ ಮೆರವಣಿಗೆ ಮಾಡುತ್ತಿದ್ದವರನ್ನು ಕೇಳಿದ್ದಕ್ಕೆ, ಉದ್ರಿಕ್ತ ಗುಂಪು ಕಾರಿನ ಮೇಲೆ ಕಲ್ಲು - ದೊಣ್ಣೆಗಳಿಂದ ದಾಳಿ ನಡೆಸಿದೆ ಎನ್ನಲಾಗಿದೆ. ಈ ಸಮಯದಲ್ಲಿ ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದ್ದು, ಕೆಲ ಸ್ಥಳೀಯ ಯುವಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಮೂರು ವರ್ಷದಿಂದ ಮಹಿಳೆಗೆ ನರಕ ದರ್ಶನ.. ವರದಕ್ಷಿಣೆಗಾಗಿ ದೇಹವೆಲ್ಲ ಸುಟ್ಟು ಚಿತ್ರಹಿಂಸೆ ನೀಡಿದ ಆರೋಪ..

ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್​​ ಕುಮಾರ್ ಈ ಸಂಬಂಧ ಮಾಹಿತಿ ಕಲೆ ಹಾಕಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ವಿಡಿಯೋ ಆಧರಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.