ETV Bharat / bharat

'ಉಕ್ರೇನ್​​ನಲ್ಲಿ ಭಾರತೀಯರ ಕಷ್ಟ ನೋಡಿ ಹೃದಯ ಕರಗಿದೆ'.. ತಾಯ್ನಾಡಿಗೆ ಕರೆತರುವ ಪ್ರಕ್ರಿಯೆಯಲ್ಲಿ ರಾಜಕೀಯ ಬೇಡ ಎಂದ ಹೆಚ್​​ಡಿಡಿ!

author img

By

Published : Feb 28, 2022, 8:34 PM IST

ಉಕ್ರೇನ್​ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನ ತಾಯ್ನಾಡಿಗೆ ವಾಪಸ್ ಕರೆತರುವ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ ಮನವಿ ಮಾಡಿದ್ದಾರೆ.

Former Prime Minister HD Devegowda
Former Prime Minister HD Devegowda

ನವದೆಹಲಿ: ಉಕ್ರೇನ್​ ಮೇಲೆ ರಷ್ಯಾ ದಾಳಿ ನಡೆಸಿದಾಗಿನಿಂದಲೂ ಅಲ್ಲಿ ಸಿಲುಕಿಹಾಕಿಕೊಂಡಿರುವ ಭಾರತೀಯರ ಕರೆತರುವ ಕೆಲಸ ಜಾರಿಯಲ್ಲಿದೆ. ಇದೇ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿಗೆ ಕಳೆದ ಎರಡು ದಿನಗಳ ಹಿಂದೆ ಪತ್ರ ಬರೆದಿದ್ದ ಮಾಜಿ ಪ್ರಧಾನಿ ಹೆಚ್​​ಡಿಡಿ ಭಾರತೀಯ ವಿದ್ಯಾರ್ಥಿಗಳ ತ್ವರಿತ ಸ್ಥಳಾಂತರಕ್ಕೆ ಮನವಿ ಮಾಡಿದ್ದರು.

ಇದೀಗ ಸರಣಿ ಟ್ವೀಟ್ ಮಾಡಿರುವ ಹೆಚ್​ಡಿ ದೇವೇಗೌಡ ಅವರು, ಉಕ್ರೇನ್​​ನಲ್ಲಿ ಸಿಲುಕಿಕೊಂಡಿರುವ ನಮ್ಮ ಯುವಕರು, ನಾಗರಿಕರ ರಕ್ಷಣೆಗೋಸ್ಕರ ಮನವಿ ಮಾಡುತ್ತಿರುವ ವಿಡಿಯೋಗಳನ್ನ ನೋಡಿ, ಹೃದಯ ಕರಗಿದೆ. ಯುದ್ಧ ಪೀಡಿತ ದೇಶದಿಂದ ಅವರನ್ನ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಬೇಕಾಗಿದೆ.

  • It will demoralise those conducting the operation. Scoring points at this hour of crisis will make us look bad. Let us work together.3/3#Ukraine #Evacuation

    — H D Devegowda (@H_D_Devegowda) February 28, 2022 " class="align-text-top noRightClick twitterSection" data=" ">

ಯುದ್ಧದ ಸನ್ನಿವೇಶದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನ ವಾಪಸ್​ ಕರೆತರುವುದು ಕಷ್ಟ ಹಾಗೂ ಕಠಿಣ ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ. ಆದರೆ, ಈ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಮನವಿ ಮಾಡಿಕೊಂಡಿರುವ ಹೆಚ್​ಡಿಡಿ, ಬಿಕ್ಕಟ್ಟಿನ ಸಮಯದಲ್ಲಿ ಅವರೊಂದಿಗೆ ನಾವು ಕೈಜೋಡಿಸಿ, ಮನೋಸ್ಥೈರ್ಯ ಹೆಚ್ಚಿಸಬೇಕಾಗಿದೆ ಎಂದಿದ್ದಾರೆ.

  • I have been watching videos of our young citizens stranded in Ukraine making fervent pleas for evacuation. It is heart wrenching to see their plight. I can understand their desperation to get back home safely. But when a war is raging in that country and there is so much 1/3

    — H D Devegowda (@H_D_Devegowda) February 28, 2022 " class="align-text-top noRightClick twitterSection" data=" ">

ಇದನ್ನೂ ಓದಿರಿ: ಉಕ್ರೇನ್​​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆ 'ಅವಕಾಶವಾದವಲ್ಲ' ಜವಾಬ್ದಾರಿ: ಕೇಂದ್ರದ ವಿರುದ್ಧ ವರುಣ್​ ಕಿಡಿ!

ಉಕ್ರೇನ್​​ನಲ್ಲಿ ಸಿಲುಕೊಂಡಿರುವ 1400 ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಕರೆತರುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದ್ದು, ಉಳಿದ ನಾಗರಿಕರು ಹಾಗೂ ವಿದ್ಯಾರ್ಥಿಗಳನ್ನ ಕರೆತರುವ ಕಾರ್ಯಾಚರಣೆ ಮುಂದುವರೆದಿದೆ. ಇದರ ಬೆನ್ನಲ್ಲೇ ವಿವಿಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.