ETV Bharat / bharat

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್​​ ವೀಕ್ಷಕರ ನೇಮಕ : ಮಹಾರಾಷ್ಟ್ರ ವೀಕ್ಷಕರಾಗಿ ಮಲ್ಲಿಕಾರ್ಜುನ್‌ ಖರ್ಗೆ

author img

By

Published : Jun 5, 2022, 7:33 PM IST

ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಹರಿಯಾಣ ಹಾಗೂ ರಾಜಸ್ಥಾನಕ್ಕೆ ಕಾಂಗ್ರೆಸ್​​ ತನ್ನ ವೀಕ್ಷಕರನ್ನು ನೇಮಿಸಿದೆ..

Fearing poaching, Congress appoints observers for RS polls
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್​​ ವೀಕ್ಷಕರ ನೇಮಕ: ಮಹಾರಾಷ್ಟ್ರ ವೀಕ್ಷಕರಾಗಿ ಖರ್ಗೆ

ನವದೆಹಲಿ : ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೂರು ರಾಜ್ಯಗಳಿಗೆ ಕಾಂಗ್ರೆಸ್​ ತನ್ನ ವೀಕ್ಷಕರನ್ನು ನೇಮಿಸಿದೆ. ಮಹಾರಾಷ್ಟ್ರ ವೀಕ್ಷಕರಾಗಿ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಹರಿಯಾಣ ವೀಕ್ಷಕರಾಗಿ ಭುಪೇಶ್​ ಬಘೇಲ್​​ ಮತ್ತು ರಾಜೀವ್​ ಶುಕ್ಲಾ ಹಾಗೂ ರಾಜಸ್ಥಾನ ವೀಕ್ಷಕರಾಗಿ ಪವನ್​​ ಬನ್ಸಲ್​​ ಹಾಗೂ ಟಿ.ಎಸ್. ಸಿಂಗ್ ದೇವ್ ಅವರನ್ನು ನೇಮಕ ಮಾಡಲಾಗಿದೆ.

ಜೂನ್​ 10ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದೆ. ರಾಜಸ್ಥಾನದ ಮೂರು ರಾಜ್ಯಸಭಾ ಸ್ಥಾನಗಳಿಗೆ ರಂದೀಪ್​ ಸಿಂಗ್​ ಸುರ್ಜೇವಾಲಾ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಅವರನ್ನು ಕಾಂಗ್ರೆಸ್​​ ಕಣಕ್ಕಿಳಿಸಿದೆ. ಹರಿಯಾಣದ ಒಂದು ಸ್ಥಾನಕ್ಕೆ ಅಜಯ್​​ ಮಕೇನ್​ ಹಾಗೂ ಮಹಾರಾಷ್ಟ್ರದ ಒಂದು ಸ್ಥಾನಕ್ಕೆ ಇಮ್ರಾನ್ ಪ್ರತಾಪ್‌ಘರ್ಹಿ ಅವರಿಗೆ ಮಣೆ ಹಾಕಲಾಗಿದೆ.

  • Rajya Sabha polls | Congress appoints Mallikarjun Kharge as the observer for Maharashtra, Pawan Kumar Bansal & TS Singhdeo appointed for Rajasthan, Bhupesh Baghel & Rajeev Shukla for Haryana. pic.twitter.com/qpdSeLE5JC

    — ANI (@ANI) June 5, 2022 " class="align-text-top noRightClick twitterSection" data=" ">

ಆದರೆ, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಹೊರಗಿನವರಿಗೆ ಟಿಕೆಟ್​ ನೀಡಿರುವ ಬಗ್ಗೆ ಕಾಂಗ್ರೆಸ್​ ಆಂತರಿಕ ಭಿನ್ನಮತ ಎದುರಿಸುತ್ತಿದೆ. ಈ ನಡುವೆ ಬಿಜೆಪಿ ಶಾಸಕರ ಕುದುರೆ ವ್ಯಾಪಾರಕ್ಕೆ ಯತ್ನಿಸುತ್ತಿದೆ.

ಹೀಗಾಗಿ, ತನ್ನ ಶಾಸಕರನ್ನು ಕಾಪಾಡಿಕೊಳ್ಳಲು ಕಾಂಗ್ರೆಸ್​ ಕಸರತ್ತು ನಡೆಸುತ್ತಿದೆ. ಹರಿಯಾಣದ 31 ಶಾಸಕರನ್ನು ಛತ್ತೀಸ್​ಗಢಕ್ಕೆ ಶಿಫ್ಟ್​​ ಮಾಡಲಾಗಿದೆ. ಇತ್ತ ರಾಜ್ಯಸ್ಥಾನದ ಶಾಸಕರನ್ನು ಜೈಪುರನಿಂದ ಉದಯಪುರ್​ಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: 'ಹೊರಗಿನವರಿಗೆ' ಟಿಕೆಟ್​ ಹಂಚಿಕೆ ಬಿಸಿ ನಡುವೆ ಕುದುರೆ ವ್ಯಾಪಾರದ ಭೀತಿ: ರೆಸಾರ್ಟ್ ಮೊರೆ ಹೋದ ಕೈ ಶಾಸಕರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.