ETV Bharat / bharat

ವಿದ್ಯುತ್​ ಶಾಕ್​ಗೆ ಬಾಲಕ - ನಾಲ್ವರು ರೈತರು ಸೇರಿ ಐವರು ಬಲಿ: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ!

author img

By

Published : Oct 29, 2022, 11:26 AM IST

ಆಂಧ್ರಪ್ರದೇಶದಲ್ಲಿ ವಿವಿಧ ವಿದ್ಯುತ್ ಅವಘಡದಲ್ಲಿ ನಾಲ್ವರು ರೈತರು ಸೇರಿದಂತೆ ಐವರು ಮೃತಪಟ್ಟಿದ್ದಾರೆ.

Electricity claimed five lives  Electricity claimed five lives Four farmers died  Four farmers died in Andhra Pradesh  student lost his life in the Konaseema school  ಮುಗಿಲು ಮುಟ್ಟಿದ ಪೋಷಕರ ಆಕ್ರಂದನ  ವಿದ್ಯುತ್​ ಶಾಕ್​ಗೆ ಬಾಲಕ ನಾಲ್ವರು ರೈತರು ಸೇರಿ ಐವರು ಬಲಿ  ವಿದ್ಯುತ್ ಅವಡದಲ್ಲಿ ನಾಲ್ವರು ರೈತರು ಸೇರಿದಂತೆ ಐವರು ಮೃತ  ವಿದ್ಯುತ್​ ಶಾಕ್​ನಿಂದಾಗಿ ಶಾಲಾ ಬಾಲಕ ಸಾವು  ವಿದ್ಯುತ್​ ತಂತಿಗೆ ವಿದ್ಯಾರ್ಥಿ ಬಲಿ  ವೈಎಸ್‌ಆರ್ ಜಿಲ್ಲೆಯಲ್ಲಿ ರೈತರು ಸಾವು
ಮುಗಿಲು ಮುಟ್ಟಿದ ಪೋಷಕರ ಆಕ್ರಂದನ!

ಕಡಪ, ಆಂಧ್ರಪ್ರದೇಶ: ವಿವಿಧ ಘಟನೆಯಲ್ಲಿ ವಿದ್ಯುತ್​ ಶಾಕ್​ನಿಂದಾಗಿ ಶಾಲಾ ಬಾಲಕ ಮತ್ತು ಸಹೋದರರು ಸೇರಿ ಒಟ್ಟು ಐವರು ಪ್ರಾಣ ಬಿಟ್ಟಿರುವ ದುರಂತ ಘಟನೆ ಶುಕ್ರವಾರ ಸಂಭವಿಸಿದೆ. ತಮ್ಮವರನ್ನು ಕಳೆದುಕೊಂಡ ಸಂಬಂಧಿಕರು ಮತ್ತು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ವಿದ್ಯುತ್​ ತಂತಿಗೆ ವಿದ್ಯಾರ್ಥಿ ಬಲಿ: ವೈಎಸ್‌ಆರ್ ಜಿಲ್ಲೆಯ ಹೊಲಗಳಲ್ಲಿ ವಿದ್ಯುತ್ ತಂತಿಗಳು ನಾಲ್ವರು ಭತ್ತದ ರೈತರನ್ನು ಬಲಿ ಪಡೆದಿದೆ. ಅಂಬೇಡ್ಕರ್ ಕೋನಸೀಮಾ ಜಿಲ್ಲೆಯ ಶಾಲೆಯೊಂದರಲ್ಲಿ ಅಜಾಗರೂಕತೆಯಿಂದ ಬಿಟ್ಟ ವಿದ್ಯುತ್ ತಂತಿಯಿಂದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದ್ದು, ಮೂವರು ಗಾಯಗೊಂಡಿದ್ದಾರೆ.

ವೈಎಸ್‌ಆರ್ ಜಿಲ್ಲೆಯಲ್ಲಿ ರೈತರು ಸಾವು: ಜಿಲ್ಲೆಯ ಚಪಾಡು ತಾಲೂಕಿನ ಚಿಯ್ಯಪಾಡು ಮೂಲದ ಪೆದ್ದ ಓಬುಳರೆಡ್ಡಿ (66) ಮತ್ತು ಬಾಲ ಓಬುಳರೆಡ್ಡಿ (57) ಸಹೋದರರು. ಜಮೀನು ಗುತ್ತಿಗೆ ಪಡೆದು ಭತ್ತದ ಕೃಷಿ ಆರಂಭಿಸಿದ್ದರು. ಮತ್ತೋರ್ವ ರೈತ ಬೊಮ್ಮು ಮಲ್ಲಿಕಾರ್ಜುನ್ ರೆಡ್ಡಿ (25) ಅನ್ನು ಬೆಳೆಗೆ ಕೀಟನಾಶಕ ಸಿಂಪಡಿಸಲು ಕರೆದುಕೊಂಡು ಹೋಗಿದ್ದರು. ಕೀಟನಾಶಕ ಹಾಕುವಾಗ ಮಲ್ಲಿಕಾರ್ಜುನ​ ಹೊಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದಿದ್ದು, ವಿದ್ಯುತ್​ ಹರಿದು ಕೆಳಗೆ ಬಿದ್ದಿದ್ದಾರೆ.

ಮಲ್ಲಿಕಾರ್ಜುನ್​ನನ್ನು ರಕ್ಷಿಸುವ ಪ್ರಯತ್ನದಲ್ಲಿ ಒಬ್ಬರ ನಂತರ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ನಡೆದು ಎರಡು ಗಂಟೆ ಕಳೆದರೂ ಆ ದಾರಿಯಲ್ಲಿ ಹೋಗುತ್ತಿದ್ದ ರೈತರು ಇದನ್ನು ಗಮನಿಸಿ ಮಾಹಿತಿ ನೀಡುವವರೆಗೂ ಯಾರಿಗೂ ಈ ವಿಚಾರ ತಿಳಿದಿರಲಿಲ್ಲ. ಬಾಲ ಓಬುಳರೆಡ್ಡಿ ಅವರ ಪತ್ನಿ ಸಾವಿತ್ರಮ್ಮ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್‌ಐ ನಾಯ್ಕ ತಿಳಿಸಿದ್ದಾರೆ.

ಜಿಲ್ಲೆಯ ಸಿಂಹಾದ್ರಿಪುರಂ ಮಂಡಲ ಬಿ.ಚೆರ್ಲೋಪಲ್ಲಿಯ ರೈತ ಭೂಮಿ ರೆಡ್ಡಿ ಚಂದ್ರಶೇಖರ್ ರೆಡ್ಡಿ (39) ತಮ್ಮ ಹೊಲದಲ್ಲಿ ಕೊತ್ತಂಬರಿ ಬೆಳೆದಿದ್ದರು. ಹೊಲಕ್ಕೆ ನೀರುಣಿಸಲು ಯತ್ನಿಸುತ್ತಿದ್ದಾಗ ಮೋಟಾರ್‌ಗೆ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದೆ. ಫ್ಯೂಸ್ ಸರಿಪಡಿಸುವ ವೇಳೆ ಶಾಕ್‌ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಈ ಘಟನೆಗಳ ಬಗ್ಗೆ ಆಯಾ ಪೊಲೀಸ್ ಠಾಣೆಗಳ ಬಗ್ಗೆ ಪ್ರಕರಣಗಳು ದಾಖಲಾಗಿವೆ.

ಓದಿ: ಹೈವೋಲ್ಟೇಜ್​ ಪವರ್​ ತುಂಬಾ ಡೇಂಜರ್​.. ವಿದ್ಯುತ್​ ತಂತಿ ಹಿಡಿದ ಯುವಕ ಸುಟ್ಟು ಕರಕಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.