ETV Bharat / bharat

ದೆಹಲಿ ಮದ್ಯ ನೀತಿ ಹಗರಣ: ಆಪ್‌ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್​ ಸಿಂಗ್​ ಬಂಧನ

author img

By ETV Bharat Karnataka Team

Published : Oct 4, 2023, 5:57 PM IST

Updated : Oct 4, 2023, 7:09 PM IST

ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ರಾಜ್ಯಸಭಾ ಸದಸ್ಯ ಸಂಜಯ್​ ಸಿಂಗ್​ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ನಿವಾಸದ ಮೇಲೆ ದಾಳಿ ಮಾಡಿದ 10 ಗಂಟೆಗಳ ನಂತರ ಈ ವಿದ್ಯಮಾನ ನಡೆದಿದೆ.

ED arrests Rajya Sabha MP Sanjay Singh in Delhi excise policy case: Officials
ದೆಹಲಿ ಮದ್ಯ ನೀತಿ ಹಗರಣ: ರಾಜ್ಯಸಭಾ ಸದಸ್ಯ ಸಂಜಯ್​ ಸಿಂಗ್​ ಇಡಿ ಅಧಿಕಾರಿಳಿಂದ ಅರೆಸ್ಟ್​

ನವದೆಹಲಿ: ಸಿಎಂ ಅರವಿಂದ್ ಕೇಜ್ರಿವಾಲ್​ ನೇತೃತ್ವದ ದೆಹಲಿಯ ಆಪ್ ಸರ್ಕಾರದ ವಿವಾದಿತ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಆಮ್​ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್​ ಸಿಂಗ್​ ಅವರನ್ನು ಇಂದು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬಂಧಿಸಿದರು. ಇದೇ ಪ್ರಕರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಂತರ ಆಪ್​ನ ಎರಡನೇ ಪ್ರಮುಖ ನಾಯಕನ ಅರೆಸ್ಟ್​ ಆಗಿದೆ.

ಇಂದು ಸಂಜೆ ಬಂಧನಕ್ಕೂ ಮುನ್ನ ಅಂದರೆ ಬೆಳಗ್ಗೆ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಹಿರಿಯ ನಾಯಕರೂ ಆದ ಸಂಜಯ್​ ಸಿಂಗ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಇದೇ ವೇಳೆ, ಇತರರ ನಿವಾಸಗಳಲ್ಲೂ ಶೋಧ ಕಾರ್ಯ ಕೈಗೊಂಡಿದ್ದರು. ಇದರ 10 ಗಂಟೆಗಳ ನಂತರ ಮನೆಯಲ್ಲೇ ಸಂಜಯ್​ ಸಿಂಗ್​ ಅವರನ್ನು ಬಂಧಿಸಲಾಗಿದೆ. ಈ ಹಿಂದೆಯೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್​ ಸಿಂಗ್ ಹಾಗೂ ಅವರ ಸಿಬ್ಬಂದಿಯನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.

  • VIDEO | AAP MP Sanjay Singh taken away from his official residence after being arrested by the ED in Delhi excise policy case. pic.twitter.com/Bpho7ctjcW

    — Press Trust of India (@PTI_News) October 4, 2023 " class="align-text-top noRightClick twitterSection" data=" ">

2021-22ರಲ್ಲಿ ದೆಹಲಿ ಸರ್ಕಾರ ಹೊಸ ಮದ್ಯ ನೀತಿ ಸಿದ್ಧಪಡಿತ್ತು. ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಲು ನೀತಿ ರೂಪಿಸಲಾಗಿತ್ತು. ಆದರೆ, ಲಂಚ ಪಾವತಿಸಿದ ಕೆಲವು ಡೀಲರ್‌ಗಳ ಪರವಾಗಿ ನೀತಿ ಜಾರಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ, ಬಿಜೆಪಿ ನಿರಂತರವಾಗಿ ದೆಹಲಿಯ ಆಪ್​ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿತ್ತು. ಮತ್ತೊಂದೆಡೆ, ಈ ಎಲ್ಲ ಆರೋಪಗಳನ್ನೂ ಆಪ್​ ಬಲವಾಗಿ ನಿರಾಕರಿಸುತ್ತಲೇ ಕೊನೆಗೆ ಹೊಸ ಮದ್ಯ ನೀತಿಯನ್ನು ರದ್ದುಪಡಿಸಿದೆ.

ಆದರೆ, ಮದ್ಯ ನೀತಿ ಕುರಿತು ಕೇಳಿಬಂದ ಆರೋಪಗಳ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ. ಕೇಜ್ರಿವಾಲ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ಅವರನ್ನು ಈಗಾಗಲೇ ತನಿಖಾ ಸಂಸ್ಥೆಗಳು ಬಂಧಿಸಿದ್ದು, ಕಳೆದ ಏಳು ತಿಂಗಳಿಂದಲೂ ಅವರು ಜೈಲಿನಲ್ಲೇ ಇದ್ದಾರೆ.

ಪ್ರಶ್ನಿಸಿದ್ದಕ್ಕೆ ಸಂಜಯ್​ ಸಿಂಗ್ ವಿರುದ್ಧ ಕ್ರಮ- ಆರೋಪ: ಬೆಳಗ್ಗೆ ಸಂಜಯ್ ಸಿಂಗ್​ ನಿವಾಸದ ಮೇಲೆ ಇಡಿ ದಾಳಿ ಮಾಡಿದ್ದ ಬೆನ್ನಲ್ಲೇ ಆಮ್​ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್​ ಸೇರಿ ಇತರ ಪ್ರತಿಪಕ್ಷಗಳ ನಾಯಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಸಂಸತ್ತಿನಲ್ಲಿ ಅದಾನಿ ಗ್ರೂಪ್​ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಕಾರಣಕ್ಕೆ ಸಂಜಯ್​ ಸಿಂಗ್ ವಿರುದ್ಧ ಇಡಿ ಮೂಲಕ ಕ್ರಮವಾಗಿದೆ ಎಂದು ಮುಖಂಡರು ಆರೋಪಿಸಿದ್ದಾರೆ.

''ಸಂಜಯ್​ ಸಿಂಗ್​ ಅದಾನಿ ವಿಷಯದ ಬಗ್ಗೆ ಪ್ರಶ್ನೆ ಮಾಡುತ್ತಲೇ ಇದ್ದರು. ಇದರ ಪರಿಣಾಮವಾಗಿ ಅವರ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಈ ಹಿಂದೆ ದಾಳಿ ಮಾಡಿದ್ದಾಗ ಕೇಂದ್ರ ಸಂಸ್ಥೆಗಳು ಏನನ್ನೂ ಪತ್ತೆ ಹಚ್ಚಿರಲಿಲ್ಲ. ನಿನ್ನೆ ಪತ್ರಕರ್ತರ ಮೇಲೆ ದಾಳಿ ಮಾಡಿದ್ದರು. ಇಂದು ಸಂಜಯ್​ ಸಿಂಗ್​ ಮೇಲೆ ದಾಳಿ ಮಾಡಲಾಗಿದೆ'' ಎಂದು ಆಪ್​ನ ವಕ್ತಾರೆ ರೀನಾ ಗುಪ್ತಾ ದೂರಿದ್ದಾರೆ.

ಇದನ್ನೂ ಓದಿ: ಮನೀಶ್ ಸಿಸೋಡಿಯಾ ಜೈಲು ಸೇರಿ 6 ತಿಂಗಳು: ಶಾಸಕರ ವೇತನಕ್ಕಾಗಿ ಹೊಸ ಬ್ಯಾಂಕ್​ ಖಾತೆಗೆ ಕೋರ್ಟ್​ ಅನುಮತಿ

Last Updated : Oct 4, 2023, 7:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.