ನವದೆಹಲಿ: ಮೀಟೂ ಪ್ರಕರಣದಲ್ಲಿ ಸತತ ಎರಡು ವರ್ಷದಿಂದ ನಡೆಯುತ್ತಿರುವ ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಮತ್ತು ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧದ ಮಾನನಷ್ಟ ಪ್ರಕರಣದ ತೀರ್ಪನ್ನು ಫೆ.17ಕ್ಕೆ ಕಾಯ್ದಿರಿಸಿ ದೆಹಲಿ ಕೋರ್ಟ್ ಆದೇಶ ನೀಡಿದೆ.
ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರವಿಂದ್ರ ಕುಮಾರ್ ಈ ಪ್ರಕರಣದ ತೀರ್ಪನ್ನು ನಂತರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಫೆ.1ರಂದು ಅಕ್ಬರ್ ಹಾಗೂ ರಮಣಿ ಹೇಳಿಕೆ ದಾಖಲಿಸಿದ್ದ ಕೋರ್ಟ್ ತೀರ್ಪಿನ ದಿನಾಂಕ ಪ್ರಕಟಿಸುವುದಾಗಿ ತಿಳಿಸಿತ್ತು.
2018ರಲ್ಲಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ವಿರುದ್ಧ ರಮಣಿ ಮೀಟೂ ಆರೋಪ ಹೊರಿಸಿದ್ದರು. ಇದಾದ ಬಳಿಕ ಅಕ್ಬರ್, ಅಕ್ಟೋಬರ್ 15, 2018ರಲ್ಲಿ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಈ ಪ್ರಕರಣದ ಬೆನ್ನಲ್ಲೆ ಅಕ್ಟೋಬರ್ 17, 2018ರಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ ಮೀಟೂ ಆರೋಪ ನಿರಾಕರಿಸಿ ರಮಣಿ ವಿರುದ್ಧ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಆಂದೋಲನಜೀವಿ ಎಂದ ಪ್ರಧಾನಿಗೆ ಎನ್ಸಿಪಿ ಟಾಂಗ್.. ಮಾತಿಗೂ ಮೊದ್ಲು ಯೋಚಿಸಿ ಎಂದ ಛಗನ್ ಭುಜಬಲ್..