ಅಡುಗೆ ಮಾಡೋ ವಿಚಾರಕ್ಕೆ ಜಗಳ : ಸಿಆರ್‌ಪಿಎಫ್ ಅಧಿಕಾರಿಯನ್ನ ಗುಂಡಿಕ್ಕಿ ಕೊಂದ ಕಾನ್ಸ್‌ಟೇಬಲ್

author img

By

Published : Dec 26, 2021, 1:59 PM IST

CRPF SI Was Shot Dead by Constable in Telangana

ತೆಲಂಗಾಣದ ಮುಳುಗು ಜಿಲ್ಲೆಯ ಸಿಆರ್‌ಪಿಎಫ್‌ನ 39ನೇ ಬೆಟಾಲಿಯನ್‌ನ ಸಬ್​​ ಇನ್ಸ್​​ಪೆಕ್ಟರ್​​ ಅನ್ನು ಕಾನ್ಸ್‌ಟೇಬಲ್ ಗುಂಡಿಕ್ಕಿ ಹತ್ಯೆ ಮಾಡಿ ಬಳಿಕ ತಾನೂ ಗುಂಡು ಹಾರಿಸಿಕೊಂಡಿದ್ದಾನೆ..

ಮುಳುಗು (ತೆಲಂಗಾಣ): ಕೇವಲ ಅಡುಗೆ ಮಾಡೋ ವಿಚಾರಕ್ಕೆ ಜಗಳವಾಗಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್) ಸಬ್​​ ಇನ್ಸ್​​ಪೆಕ್ಟರ್​​ ಅನ್ನು ಸಿಆರ್‌ಪಿಎಫ್ ಕಾನ್ಸ್‌ಟೇಬಲ್ ಗುಂಡಿಕ್ಕಿ ಕೊಂದಿರುವ ಘಟನೆ ತೆಲಂಗಾಣದ ಮುಳುಗು ಜಿಲ್ಲೆಯ ವೆಂಕಟಾಪುರಂ ವಲಯದಲ್ಲಿ ನಡೆದಿದೆ.

ಗಾಯಗೊಂಡ ಕಾನ್ಸ್‌ಟೇಬಲ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ..

ಸಿಆರ್‌ಪಿಎಫ್‌ನ 39ನೇ ಬೆಟಾಲಿಯನ್‌ನ ಎಸ್‌ಐ ಉಮೇಶ್ ಚಂದ್ರ ಹಾಗೂ ಕಾನ್ಸ್‌ಟೇಬಲ್ ಸ್ಟೀಫನ್ ನಡುವೆ ಇಂದು ಬೆಳಗ್ಗೆ ಆಹಾರ ತಯಾರಿಸುವ ವಿಚಾರದಲ್ಲಿ ವಾಗ್ವಾದ ನಡೆದಿದೆ. ಜಗಳ ತಾರಕಕ್ಕೇರಿದ್ದು, ಸ್ಟೀಫನ್ ತನ್ನ ಗನ್​​ನಿಂದ ಉಮೇಶ್ ಮೇಲೆ ಗುಂಡು ಹಾರಿಸಿದ್ದಾರೆ. ಎಸ್‌ಐ ಉಮೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಸ್ಟೀಫನ್ ಕೂಡ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡಿದ್ದಾನೆ.

ಇದನ್ನೂ ಓದಿ: ಅನಂತ್‌ನಾಗ್‌ ಜಿಲ್ಲೆಯಲ್ಲಿ ಗುಂಡಿನ ಚಕಮಕಿ: ಐಎಸ್‌ಜೆಕೆ ಉಗ್ರನ ಸದೆಬಡಿದ ಸೇನೆ

ಗಂಭೀರವಾಗಿ ಗಾಯಗೊಂಡಿರುವ ಕಾನ್ಸ್‌ಟೇಬಲ್ ಸ್ಟೀಫನ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಮೇಶ್ ಬಿಹಾರ ನಿವಾಸಿಯಾಗಿದ್ದು, ಸ್ಟೀಫನ್ ತಮಿಳುನಾಡು ಮೂಲದವರಾಗಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿರುವುದಾಗಿ ಮುಳುಗು ಪೊಲೀಸ್​ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.