ETV Bharat / bharat

Nehru Birth Anniversary: ನೆಹರೂ 132ನೇ ಜನ್ಮದಿನ.. ದೇಶದ ಮೊದಲ ಪ್ರಧಾನಿಗೆ ಕಾಂಗ್ರೆಸ್​ ನಮನ

author img

By

Published : Nov 14, 2021, 1:13 PM IST

1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಪಂಡಿತ್​ ಜವಾಹರ್​ಲಾಲ್ ನೆಹರೂ, 1964ರ ಮೇ 27 ರಂದು ತಾವು ಇಹಲೋಕ ತ್ಯಜಿಸುವವರೆಗೂ ಆಡಳಿತ ನಡೆಸಿದ್ದರು. ಇಂದು ಅವರ 132ನೇ ಜನ್ಮದಿನದ(Nehru Birth Anniversary) ಅಂಗವಾಗಿ ಗಣ್ಯರು ನಮಿಸಿದ್ದಾರೆ.

ನೆಹರೂ 132ನೇ ಜನ್ಮದಿನ
ನೆಹರೂ 132ನೇ ಜನ್ಮದಿನ

ನವದೆಹಲಿ: ಭಾರತದ ಮೊದಲ ಪ್ರಧಾನಿ ಪಂಡಿತ್​ ಜವಾಹರ್​ಲಾಲ್​ ನೆಹರೂ ಅವರ 132ನೇ ಜನ್ಮದಿನದ ((Nehru Birth Anniversary) ಅಂಗವಾಗಿ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.

ರಾಷ್ಟ್ರ ರಾಜಧಾನಿಯ ಶಾಂತಿವನದಲ್ಲಿರುವ ನೆಹರೂ ಸ್ಮಾರಕಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Congress President Sonia Gandhi) ಪುಷ್ಪನಮನ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಕೂಡ ತಮ್ಮ ಟ್ವಟರ್​ ಖಾತೆಯಲ್ಲಿ ನೆಹರೂ ಅವರಿಗೆ ಗೌರವ ಸೂಚಿಸಿದ್ದಾರೆ.

  • Tributes to Pandit Jawaharlal Nehru Ji on his birth anniversary.

    — Narendra Modi (@narendramodi) November 14, 2021 " class="align-text-top noRightClick twitterSection" data=" ">

ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ (Congress Leader Rahul Gandhi) ತಮ್ಮ ಮುತ್ತಾತನಿಗೆ ನಮಿಸಿದ್ದು, ಮಕ್ಕಳೊಂದಿಗೆ ನೆಹರೂ ಇರುವ ಪೋಟೋವೊಂದನ್ನು ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಜೊತೆಗೆ, "ನಮಗೆ ಬೇಕಾಗಿರುವುದು ಶಾಂತಿಯ ಪೀಳಿಗೆ" ಎಂಬ ಜವಾಹರ್​ಲಾಲ್​ ನೆಹರೂ ಅವರ ಮಾತನ್ನು ಉಲ್ಲೇಖಿಸಿ, ಸತ್ಯ, ಏಕತೆ ಮತ್ತು ಶಾಂತಿಯನ್ನು ಹೆಚ್ಚು ಗೌರವಿಸಿದ ಭಾರತದ ಮೊದಲ ಪ್ರಧಾನಿಯನ್ನು ಸ್ಮರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

  • “What we need is a generation of peace.”
    - Pandit Jawaharlal Nehru

    Remembering India’s first Prime Minister who greatly valued truth, unity and peace. pic.twitter.com/h89MpL39Ph

    — Rahul Gandhi (@RahulGandhi) November 14, 2021 " class="align-text-top noRightClick twitterSection" data=" ">

ಹೊಲದಲ್ಲಿ ನೇಗಿಲು ಹಿಡಿದ ರೈತನೊಂದಿಗೆ ನೆಹರೂ ಇರುವ ಫೋಟೋವೊಂದನ್ನು ಟ್ವಿಟರ್​ ಖಾತೆಯಲ್ಲಿ ಕೈ ನಾಯಕಿ ಹಾಗೂ ನೆಹರೂ ಅವರ ಮೊಮ್ಮಗಳು ಪ್ರಿಯಾಂಕಾ ಗಾಂಧಿ (Priyanka Gandhi) ಹಂಚಿಕೊಂಡಿದ್ದಾರೆ. "ಭಾರತದ ನೆಲದಲ್ಲಿರುವ ಎಲ್ಲಾ ಜನರೂ ಅತ್ಯಂತ ಮುಖ್ಯವಾದವರು. ಭಾರತ್ ಮಾತಾ ಕಿ ಜೈ.. ಅವಳ ಭೂಮಿಯಲ್ಲಿ ವಾಸಿಸುವ ಎಲ್ಲರಿಗೂ ಜೈ" ಎಂಬ ಚಾಚಾ ನೆಹರೂ ಅವರ ಸಾಲನ್ನು ಬರೆದುಕೊಂಡಿರುವ ಪ್ರಿಯಾಂಕಾ, ರೈತರು, ಸೈನಿಕರು, ಕಾರ್ಮಿಕರಿಗೆಲ್ಲರಿಗೂ ಪ್ರಿಯಾಂಕಾ ಜೈ ಎಂದು ಬರೆದಿದ್ದಾರೆ.

  • "...भारत भूमि में फैले सारे भारतवासी ही सबसे ज्यादा मायने रखते हैं। भारत माता यही करोड़ों-करोड़ जनता है और भारत माता की जय उसकी भूमि पर रहने वाले इन सबकी जय है।"
    ~ पंडित जवाहर लाल नेहरू

    भारत माता की जय में किसानों की जय है, जवानों की जय, श्रमिकों की जय है।#RememberingNehru pic.twitter.com/m8DelKDKFl

    — Priyanka Gandhi Vadra (@priyankagandhi) November 14, 2021 " class="align-text-top noRightClick twitterSection" data=" ">

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಪಂಡಿತ್​ ಜವಾಹರ್​ಲಾಲ್ ನೆಹರೂ, 1964ರ ಮೇ 27 ರಂದು ತಾವು ಇಹಲೋಕ ತ್ಯಜಿಸುವವರೆಗೂ ಆಡಳಿತ ನಡೆಸಿದ್ದರು. ಭಾರತದ ಪ್ರಧಾನಿಯಾಗಿ ದೀರ್ಘಾವಧಿ ಸೇವೆ ಸಲ್ಲಿಸಿದ ಕೀರ್ತಿ ನೆಹರೂ ಅವರಿಗೆ ಸಲ್ಲುತ್ತದೆ. ಪ್ರತಿ ವರ್ಷ ನವೆಂಬರ್ 14 ರಂದು, ಅಂದರೆ ನೆಹರೂ ಅವರ ಜನ್ಮದಿನವನ್ನು ಭಾರತದಲ್ಲಿ ಮಕ್ಕಳ ದಿನವನ್ನಾಗಿ (Children's Day) ಆಚರಿಸಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.