'ಆತ್ಮೀಯ ದೇಶವಾಸಿಗಳೇ ಸಿದ್ಧರಾಗಿ, ಮುಂದಿನ ದಿನಗಳಲ್ಲಿ ವಿದ್ಯುತ್ ದರ ಹೆಚ್ಚಿಸಬಹುದು': ಮೋದಿ ವಿರುದ್ಧ ಕೈ ಆಕ್ರೋಶ

author img

By

Published : Oct 11, 2021, 9:32 AM IST

Congress

ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿದೆ. ಇದರಿಂದಾಗಿ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದನೆ ಕುಸಿತವಾಗಿದ್ದು, ಮೋದಿ ಸರ್ಕಾರ ಮುಂದಿನ ದಿನಗಳಲ್ಲಿ ವಿದ್ಯುತ್ ದರ ಸಹ ಹೆಚ್ಚಿಸಬಹುದು ಎಂದು ಕಾಂಗ್ರೆಸ್​ ಆತಂಕ ವ್ಯಕ್ತಪಡಿಸಿದೆ.

ನವದೆಹಲಿ: ದೇಶದಲ್ಲಿ ಕಲ್ಲಿದ್ದಲು ಕೊರತೆಗೆ ಸರ್ಕಾರವೇ ಕಾರಣ ಎಂದು ನಿನ್ನೆ ಕಾಂಗ್ರೆಸ್ ಆರೋಪಿಸಿತ್ತು. ಇದೇ ವೇಳೆ, ಸತತವಾಗಿ ತೈಲ ಬೆಲೆ ಏರಿಕೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ವಿದ್ಯುತ್ ದರವನ್ನೂ ಸಹ ಹೆಚ್ಚಿಸಬಹುದು ಎಂದು ಕಾಂಗ್ರೆಸ್‌ ಆತಂಕ ವ್ಯಕ್ತಪಡಿಸಿದೆ.

ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಕಲ್ಲಿದ್ದಲು ಕೊರತೆ ಬಗ್ಗೆ ಟ್ವೀಟ್​ ಮಾಡಿ, ಈ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿದೆ. ಇದರಿಂದಾಗಿ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದನೆ ಕುಸಿತವಾಗಿದೆ. ದೇಶದಲ್ಲಿ ವಿದ್ಯುತ್ ಉತ್ಪಾದಿಸುವ ಸ್ಥಾವರಗಳ ಬೇಡಿಕೆಯನ್ನು ಪೂರೈಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

'ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಸೂಕ್ತ ತನಿಖೆ ನಡೆಸಬೇಕು. ಒಂದು ನಿರ್ದಿಷ್ಟ ಖಾಸಗಿ ಕಂಪನಿ ಇಂತಹ ಬಿಕ್ಕಟ್ಟಿನಿಂದ ಲಾಭ ಗಳಿಸುತ್ತಿದೆಯೇ?, ಯಾರು ಈ ಕುರಿತು ತನಿಖೆ ನಡೆಸುತ್ತಾರೆ' ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

  • Suddenly we are hearing of a crisis in coal supply to power plants. Is one particular private company making a fortune out of this crisis? But who will investigate?

    — Jairam Ramesh (@Jairam_Ramesh) October 10, 2021 " class="align-text-top noRightClick twitterSection" data=" ">

ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಟ್ವೀಟ್​ ಮಾಡಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಸ್ನೇಹಿತರ ಲಾಭಕ್ಕಾಗಿ ನರೇಂದ್ರ ಮೋದಿ ಮಾಡಿದ ವಿದ್ಯುತ್ ಬಿಕ್ಕಟ್ಟು ಎಂದು ಆರೋಪಿಸಿದ್ದಾರೆ.

  • प्यारे देशवासियों,

    तैयार हो जाएँ।

    पेट्रोल के बाद जेब पर गिरेगी, बिजली की क़ीमत।

    कोयले की आपूर्ति में भारी क़िल्लत कर दी है। साथ ही, बिजली नीति संशोधित कर दी।

    संशोधन के बाद साहेब और “उनके मित्र” मनमर्ज़ी रुपये/ यूनिट बिजली बेचेंगे।

    ज़ोरदार विनाश उफ्फ, विकास!#PowerCrisis

    — Randeep Singh Surjewala (@rssurjewala) October 10, 2021 " class="align-text-top noRightClick twitterSection" data=" ">

"ಆತ್ಮೀಯ ದೇಶವಾಸಿಗಳೇ ಸಿದ್ಧರಾಗಿರಿ, ಸಾಹೇಬ್ (ಮೋದಿ) ಮತ್ತು ಅವರ ಸ್ನೇಹಿತರು ಈಗ ಪ್ರತಿ ಯೂನಿಟ್ ವಿದ್ಯುತ್​ಗೆ ತಮ್ಮದೇ ದರವನ್ನು ವಿಧಿಸಬಹುದು ಮತ್ತು ಅದನ್ನು ಹೆಚ್ಚಿನ ದರಗಳಿಗೆ ಮಾರಾಟ ಮಾಡಬಹುದು" ಎಂದು ಸುರ್ಜೇವಾಲಾ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.