ETV Bharat / bharat

ಎಎಪಿ ಸಚಿವರ ವಿರುದ್ಧ ಸುಕೇಶ್ ಚಂದ್ರಶೇಖರ್ ಆರೋಪದ ತನಿಖೆ: ತ್ರಿಸದಸ್ಯ ಸಮಿತಿಯಿಂದ ಎಲ್‌ಜಿಗೆ ವರದಿ ಸಲ್ಲಿಕೆ

author img

By

Published : Dec 17, 2022, 5:46 PM IST

ವಂಚನೆ ಪ್ರಕರಣದ ಆರೋಪಿ ಸುಖೇಶ್ ಚಂದ್ರಶೇಖರ್ ಅವರು ಎಎಪಿ ಮುಖಂಡರ ವಿರುದ್ಧ ಮಾಡಿರುವ ಆರೋಪಗಳ ಕುರಿತು ತನಿಖೆ ನಡೆಸಿದ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯ ತ್ರಿಸದಸ್ಯ ಸಮಿತಿಯು ತನ್ನ ವರದಿಯನ್ನು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಸಲ್ಲಿಸಿದೆ.

Committee investigate allegations by Sukesh Chandrasekhar
ತ್ರಿಸದಸ್ಯ ಸಮಿತಿ ಸುಕೇಶ್ ಚಂದ್ರಶೇಖರ್ ಆರೋಪದ ತನಿಖೆ

ನವದೆಹಲಿ: ವಿವಿಧ ವ್ಯಕ್ತಿಗಳಿಂದ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸುಖೇಶ್ ಚಂದ್ರಶೇಖರ್ ಅವರು ಮಾಡಿರುವ ಗಂಭೀರ ಆರೋಪಗಳ ಕುರಿತು ತನಿಖೆ ನಡೆಸಿ ತ್ರಿಸದಸ್ಯ ಸಮಿತಿಯು ತನ್ನ ವರದಿಯನ್ನು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಸಲ್ಲಿಸಿದೆ.

ಲೆಫ್ಟಿನೆಂಟ್ ಗವರ್ನರ್ ಸಚಿವಾಲಯದ ಮೂಲಗಳ ಪ್ರಕಾರ, ಸಮಿತಿಯ ವರದಿಯಲ್ಲಿ ಸುಕೇಶ್ ಚಂದ್ರಶೇಖರ್ ಹೇಳಿಕೆ ಎರಡು ಬಾರಿ ಪಡೆದುಕೊಂಡಿದೆ. ಎರಡೂ ಬಾರಿ ತಮ್ಮ ಆರೋಪಗಳಲ್ಲಿ ಸತ್ಯವನ್ನೂ ದೃಢಪಡಿಸಿರುವುದನ್ನು ಹಾಗೂ ತಮ್ಮ ಆರೋಪಗಳ ದೃಢೀಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಿಬಿಐ ಮತ್ತು ಇಡಿಗೆ ನೀಡಿದ್ದೇನೆ ಎಂದು ಆರೋಪಿ ತಿಳಿಸಿದ್ದಾರೆ ಎಂದು ತಿಳಿಸಿದೆ.

ತಿಹಾರ್ ಜೈಲಿನಲ್ಲಿರುವ ದೆಹಲಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಮತ್ತು ಮಾಜಿ ಡಿಜಿ ಸಂದೀಪ್ ಗೋಯಲ್ ಜತೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಸಚಿವ ಕೈಲಾಶ್ ಗೆಹ್ಲೋಟ್ ವಿರುದ್ಧ ಆರೋಪಿ ಸುಕೇಶ್ ಹಲವು ಗಂಭೀರ ಆರೋಪಗಳನ್ನು ಮಾಡಿರುವ ಕುರಿತು ಮಾಹಿತಿ ನೀಡಿದೆ.

ಸತ್ಯೇಂದ್ರ ಜೈನ್‌ಗೆ 10 ಕೋಟಿ, ಆಪ್‌ಗೆ 50 ಕೋಟಿ ದೇಣಿಗೆ ನೀಡಿರುವೆ ಸ್ಪಷ್ಟವಾಗಿ ಆರೋಪಿ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರಿಗೆ ರಾಜ್ಯಸಭಾ ಸ್ಥಾನದ ಭರವಸೆ ನೀಡಲಾಗಿತ್ತು ಎಂದಿದ್ದಾರೆ. ದೆಹಲಿಯ ಫಾರ್ಮ್ ಹೌಸ್ ನಲ್ಲಿ ನಾಲ್ಕು ವಿವಿಧ ಕಂತುಗಳಲ್ಲಿ ಈ ಹಣವನ್ನು ನೀಡಲಾಗಿದೆ. ಇದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೂ ಗೊತ್ತಿದೆ ಎಂದು ಸುಕೇಶ್ ಮಾಹಿತಿ ನೀಡಿದ್ದಾರೆ. ತನಿಖಾ ಸಮಿತಿಯ ಮುಂದೆ ಸುಕೇಶ್ ಅವರು ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ವಾಟ್ಸ್​ಆ್ಯಪ್​ ಚಾಟ್‌ ಸಂದೇಶದ ದಾಖಲೆ ಒದಗಿಸಿದ್ದಾರೆ.

ಸತ್ಯೇಂದ್ರ ಜೈನ್ ಅವರ ಆದೇಶದ ಮೇರೆಗೆ ಅವರು ಜೈಲಿನ ಮಹಾನಿರ್ದೇಶಕ ಸಂದೀಪ್ ಗೋಯಲ್ ಅವರಿಗೆ 12.50 ಕೋಟಿ ರೂಪಾಯಿಗಳನ್ನು ನೀಡಿದ್ದು, ಜೈಲಿನಲ್ಲಿ ಎಲ್ಲ ಸೌಲಭ್ಯಗಳು ಮತ್ತು ಭದ್ರತೆ ಒದಗಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ವಹಿವಾಟಿನ ಎಲ್ಲ ಸಾಕ್ಷ್ಯಗಳು ಆತನ ಬಳಿ ಇವೆ. ಸುಕೇಶ್ ಅವರ ಆರೋಪವನ್ನು ಬೇರೊಂದು ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಸಮಿತಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

ಎಲ್ ಜಿ ತನಿಖಾ ಸಮಿತಿ ರಚನೆ: ಕೆಲವು ವಾರಗಳ ಹಿಂದೆ ಲೆಫ್ಟಿನೆಂಟ್ ಗವರ್ನರ್ ಅವರು ಸುಕೇಶ್ ಅವರ ಆರೋಪದ ಬಗ್ಗೆ ತನಿಖೆ ನಡೆಸಲು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ತ್ರಿಸದಸ್ಯ ಸಮಿತಿ ರಚಿಸಿದ್ದರು. ಸಮಿತಿಯು ನ.14 ಮತ್ತು 15ರಂದು ಎರಡು ಬಾರಿ ಸುಕೇಶ್ ಹೇಳಿಕೆ ದಾಖಲಿಸಿಕೊಂಡಿತ್ತು. 2015ರಲ್ಲಿ ಚೆನ್ನೈನಲ್ಲಿರುವ ವ್ಯಕ್ತಿಯೊಬ್ಬನ ಮೂಲಕ ಸತ್ಯೇಂದ್ರ ಜೈನ್ ಅವರನ್ನು ಭೇಟಿಯಾಗಿದ್ದಾಗಿ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದಕ್ಷಿಣ ಭಾರತದ ರಾಜಕೀಯದಲ್ಲಿ ಎಎಪಿ ಪ್ರಾಬಲ್ಯ ಸಾಧಿಸಲು ಪಕ್ಷಕ್ಕೆ ಅವರ ಅಗತ್ಯವಿದೆ ಎಂದು ಜೈನ್ ಅವರಿಗೆ ಹೇಳಿದರು. ಪಕ್ಷಕ್ಕೆ ಸಹಾಯ ಮಾಡಿದರೆ ರಾಜ್ಯಸಭೆಗೆ ಕಳುಹಿಸುವುದಾಗಿ ಜೈನ್ ಆಮಿಷ ಒಡ್ಡಿದ್ದರು ಎನ್ನುವ ಸಾಕ್ಷ್ಯವು ಅವರ ಬಳಿ ಇದೆ ಎಂದು ಹೇಳಿಕೆಯಲ್ಲಿ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂಓದಿ:ಪುಣೆಯ ಏರ್​ ಫಿಲ್ಟರ್​ ಕಂಪನಿಯಲ್ಲಿ ಬೆಂಕಿ ಅವಘಡ: ಇಬ್ಬರು ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.