ETV Bharat / bharat

ಕೇದಾರನಾಥ ದೇವಾಲಯದ ಪ್ರಾಂಗಣದಲ್ಲಿ ಲವ್​ ಪ್ರಪೋಸ್​​.. ಸಾಮಾಜಿಕ ಜಾಲತಾಣದಲ್ಲಿ ಯೂಟ್ಯೂಬರ್ ನಡೆಗೆ ವಿರೋಧ

author img

By

Published : Jul 4, 2023, 5:55 PM IST

ಕೇದಾರನಾಥ ದೇವಸ್ಥನದ ಹೊರಗಿನ ಪ್ರಾಂಗಣದಲ್ಲಿ ಯೂಟ್ಯೂಬರ್​ ಒಬ್ಬರು ಲವ್​ ಪ್ರಪೋಸ್​ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಅಲ್ಲದೇ ದೇವಸ್ಥಾನದಲ್ಲಿ ರೀಲ್ಸ್​ ಮತ್ತು ಶಾರ್ಟ್ಸ್​ ಮಾಡಲು ನಿಷೇಧ ಹೇರುವಂತೆ ಒತ್ತಾಯಿಸಲಾಗುತ್ತಿದೆ.

chardham-mahapanchayat-alleges-temple-committee-on-the-matter-of-girl-proposed-her-lover-in-kedarnath-dham
ಕೇದಾರನಾಥ ದೇವಾಲಯದ ಪ್ರಾಂಗಣದಲ್ಲಿ ಲವ್​ ಪ್ರಪೋಸ್

ರುದ್ರಪ್ರಯಾಗ (ಉತ್ತರಾಖಂಡ): ಕೇದಾರನಾಥ ಎಂದಾಗ ಎಲ್ಲರಲ್ಲೂ ಭಕ್ತಿ ಭಾವ ಮೂಡುತ್ತದೆ. ಇಲ್ಲಿನ ಪರಿಸರ ದೈವಿಕತೆ ಎಲ್ಲನ್ನೂ ಪುನೀತವಾಗಿಸುತ್ತದೆ. ಅಲ್ಲದೇ ಕೇದಾರನಾಥ ದೇವಾಲಯದ ಹಿನ್ನೆಲೆ ಪರಿಸರ ಎಷ್ಟು ಮನಮೋಹಕ ಎಂದರೆ, ಹಿಮಾಚ್ಚಾದಿತ ಬೆಟ್ಟದ ನಡುವೆ ದೇವಸ್ಥಾನವನ್ನು ನೋಡುವುದು ಎರಡು ಕಣ್ಣುಗಳಿಗೆ ರಮಣೀಯ ದೃಶ್ಯವೇ ಸರಿ. ಇದೆಲ್ಲದರ ನಡುವೆ ಪ್ರೀತಿಯನ್ನು ಮುಕ್ತವಾಗಿ ಹೇಳಿಕೊಳ್ಳುವುದು ಕೆಲವರಿಗೆ ಒಂದು ಕನಸೇ. ಈ ಕನಸನ್ನು ಒಬ್ಬಳು ಈಡೇರಿಸಿಕೊಂಡಿದ್ದಾರೆ. ಆದರೆ ಅದು ಮಾತ್ರ ವಿವಾದಕ್ಕೆ ಕಾರಣವಾಗಿದೆ.

ಕೇದಾರನಾಥ ಧಾಮದಲ್ಲಿ ಮಹಿಳಾ ಮೋಟೋ ಬ್ಲಾಗರ್ ತನ್ನ ಬಾಯ್‌ಫ್ರೆಂಡ್‌ಗೆ ಪ್ರಪೋಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಭಕ್ತರು ನಾನಾ ಕಮೆಂಟ್​ಗಳನ್ನು ಹಾಕುತ್ತಿದ್ದಾರೆ. ಅಲ್ಲದೇ ಬದ್ರಿ-ಕೇದಾರ ದೇವಸ್ಥಾನ ಸಮಿತಿಯನ್ನು ಚಾರ್ಧಾಮ್ ಮಹಾಪಂಚಾಯತ್ ಉಪಾಧ್ಯಕ್ಷ ಮತ್ತು ಹಿರಿಯ ಯಾತ್ರಾರ್ಥಿ ಪುರೋಹಿತ್ ದೂಷಿಸಿದ್ದಾರೆ.

ದೇವಸ್ಥಾನದ ಆವರಣದಲ್ಲಿ ರೀಲ್ಸ್​ ಮತ್ತು ಯೂಟ್ಯೂಬ್​ ವಿಡಿಯೋಗಳನ್ನು ಮಾಡುವುದಕ್ಕೆ ಸರಿಯಾದ ನಿಯಮಗಳನ್ನು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಧಾರ್ಮಿಕ ಸ್ಥಳಗಳಲ್ಲಿ ಈ ರೀತಿ ಮಾಡುದರಿಂದ ಸಂಪ್ರದಾಯ ಮನೋಭಾಕ್ಕೆ ಧಕ್ಕೆಯಾಗುತ್ತದೆ. ಬದರಿ-ಕೇದಾರ ದೇವಸ್ಥಾನ ಸಮಿತಿ ಈ ಕುರಿತು ಕ್ರಮಗಳನ್ನು ತೆಗೆದುಕೊಳ್ಳ ಬೇಕು ಎಂದು ಆಗ್ರಹಿಸಿದ್ದಾರೆ.

ಬದರಿ-ಕೇದಾರ ದೇವಸ್ಥಾನ ಸಮಿತಿ ವಿರುದ್ಧ ಆರೋಪ: ರೈಡರ್ ಗರ್ಲ್ ವಿಶಾಖಾ ಕೇದಾರನಾಥ ಧಾಮದಲ್ಲಿ ತನ್ನ ಪ್ರಿಯಕರನಿಗೆ ಪ್ರಪೋಸ್ ಮಾಡಿ ಉಂಗುರ ತೊಡಿಸಿ ತಬ್ಬಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಂದಿನಿಂದ ಧರ್ಮ ಮತ್ತು ಸಂಪ್ರದಾಯದ ಜೊತೆ ಆಡುತ್ತಿದ್ದಿರಾ ಎಂದು ಕೆಲ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ಈ ವಿಡಿಯೋದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಯನ್ನೂ ನೀಡುತ್ತಿದ್ದರೆ, ಕೋಟ್ಯಂತರ ಹಿಂದೂಗಳ ನಂಬಿಕೆಯೊಂದಿಗೆ ಆಟವಾಡುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ. ಇದೀಗ ಚಾರ್​ ದಾಮ್​ ಮಹಾಪಂಚಾಯತ್ ಉಪಾಧ್ಯಕ್ಷ ಹಾಗೂ ಹಿರಿಯ ಯಾತ್ರಾರ್ಥಿ ಸಂತೋಷ್ ತ್ರಿವೇದಿ ಈ ವಿಡಿಯೋ ಕುರಿತು ಹೇಳಿಕೆ ನೀಡಿದ್ದಾರೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ಕೆಲವೊಮ್ಮೆ ದೇವಸ್ಥಾನದ ಗರ್ಭಗುಡಿಯಲ್ಲಿ ಹಣತೆ ಹಿಡಿದ, ಪೂಜೆ ಮಾಡಿದ ವಿಡಿಯೋ ವೈರಲ್ ಆಗುತ್ತಿದೆ. ಇನ್ನು ಕೆಲವೊಮ್ಮೆ ದೇವಸ್ಥಾನದ ಮುಂದೆ ಅಪ್ಪಿಕೊಂಡು ಪ್ರೀತಿ ವ್ಯಕ್ತಪಡಿಸಿದ್ದು ಕಾಣಸಿಗುತ್ತಿದೆ. ಯಾವುದೇ ಭಕ್ತರು ಕೇದಾರನಾಥಕ್ಕೆ ಬಂದು ವಿಡಿಯೋ, ರೀಲ್ ಮಾಡಿದರೆ ತಪ್ಪೇನಿಲ್ಲ. ಇದಕ್ಕೆ ಬದರಿ-ಕೇದಾರ ದೇವಸ್ಥಾನ ಸಮಿತಿಯೇ ಕಾರಣ. ದೇವಸ್ಥಾನ ಸಮಿತಿಯ ನಿರ್ವಹಣೆ ಇಲ್ಲದೇ ಇರುವುದರಿಂದ ಇಂತಹ ಘಟನೆಗಳು ಮುನ್ನೆಲೆಗೆ ಬರುತ್ತಿವೆ.

ದೇವಸ್ಥಾನದ ಸುತ್ತ ದೇವಸ್ಥಾನ ಸಮಿತಿ ವತಿಯಿಂದ ಯಾವುದೇ ಬೋರ್ಡ್ ಅಳವಡಿಸಿಲ್ಲ. ದೇವಸ್ಥಾನ ಸಮಿತಿಯವರು ಕೇದಾರನಾಥ ಧಾಮದಲ್ಲಿ ಇಂತಹ ಬೋರ್ಡ್‌ಗಳನ್ನು ಅಳವಡಿಸಬೇಕು, ಇದರಿಂದ ಯಾರೂ ಇಲ್ಲಿಗೆ ಬಂದು ಇಂತಹ ಕೃತ್ಯಗಳನ್ನು ಮಾಡಬಾರದು. ಉತ್ತಮವಾಗಿ ದೇವಸ್ಥಾನದ ಘನತೆ ಕಾಪಾಡಿ ಕೋಟ್ಯಂತರ ಹಿಂದೂಗಳ ನಂಬಿಕೆಗೆ ಧಕ್ಕೆಯಾಗದಂತೆ ಸಮಿತಿ ನೋಡಿಕೊಳ್ಳಬೇಕಿದೆ ಎಂದು ಚಾರ್​ ದಾಮ್​ ಮಹಾಪಂಚಾಯತ್ ಉಪಾಧ್ಯಕ್ಷರು ಹೇಳಿದ್ದಾರೆ.

ಬದರಿ-ಕೇದಾರ ದೇವಾಲಯ ಸಮಿತಿಯಿಂದ ದೂರು: ಮೋಟೋ ಬ್ಲಾಗರ್ ವಿಶಾಖಾ ತನ್ನ ಗೆಳೆಯನಿಗೆ ಪ್ರಪೋಸ್ ಮಾಡಿದ ವೀಡಿಯೊ ವೈರಲ್ ಆದ ನಂತರ, ಬದರಿ-ಕೇದಾರ ದೇವಾಲಯ ಸಮಿತಿಯು ಸಹ ಕಾರ್ಯರೂಪಕ್ಕೆ ಬಂದಿದೆ. ಬದರಿ-ಕೇದಾರ ದೇವಸ್ಥಾನ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಚಂದ್ರ ತಿವಾರಿ ಅವರು ಕೇದಾರನಾಥ ಪೊಲೀಸ್ ಠಾಣೆಗೆ ಪತ್ರ ಬರೆದು ಇಂತಹ ಯೂಟ್ಯೂಬ್ ಶಾರ್ಟ್ಸ್ ಮತ್ತು ರೀಲ್‌ಗಳನ್ನು ತಯಾರಿಸುವವರ ಮೇಲೆ ನಿಗಾ ಇಡುವಂತೆ ಕೋರಿದ್ದಾರೆ.

ಇದನ್ನೂ ಓದಿ: 19 ವರ್ಷದ ಹಿಂದೆ ಮನೆ ತೊರೆದಿದ್ದ ಮಹಿಳೆ ದಿಢೀರ್​​ ಪತ್ತೆ.. ಹುಡುಕಿ ಹುಡುಕಿ ಸುಸ್ತಾಗಿದ್ದ ಕುಟುಂಬಸ್ಥರಲ್ಲಿ ಸಂತಸದ ಹೊನಲು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.