ETV Bharat / bharat

6,833 ರೂ. ಕೋಟಿ ಬ್ಯಾಂಕ್ ವಂಚನೆ: ಶ್ರೀಲಕ್ಷ್ಮಿ ಕಾಟ್ಸಿನ್ ವಿರುದ್ಧ ಸಿಬಿಐ ಎಫ್​ಐಆರ್​

author img

By

Published : Aug 8, 2021, 7:38 AM IST

ಉತ್ತರ ಪ್ರದೇಶದ ಶ್ರೀಲಕ್ಷ್ಮಿ ಕಾಟ್ಸಿನ್ ಲಿಮಿಟೆಡ್​ನ ವಿರುದ್ಧ ಬ್ಯಾಂಕ್ ವಂಚನೆ ದೂರೊಂದು ದಾಖಲಾಗಿದ್ದು, ದೇಶದ ಅತಿ ದೊಡ್ಡ ಬ್ಯಾಂಕ್ ವಂಚನೆ ಕೇಸ್​ಗಳ ಪಟ್ಟಿಗೆ ಮತ್ತೊಂದು ಪ್ರಕರಣ ಸೇರಿದೆ.

CBI books Shri Lakshmi Cotsyn in Rs 6,833 cr bank fraud case
6,833 ರೂ. ಕೋಟಿ ಬ್ಯಾಂಕ್ ವಂಚನೆ: ಶ್ರೀಲಕ್ಷ್ಮಿ ಕಾಟ್ಸಿನ್ ವಿರುದ್ಧ ಸಿಬಿಐ ಎಫ್​ಐಆರ್​

ನವದೆಹಲಿ: ಭಾರತದ ಅತಿ ದೊಡ್ಡ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಮತ್ತೊಂದು ವಂಚನೆ ಕೇಸ್​ ಸೇರ್ಪಡೆಯಾಗಿದೆ. ಕಾನ್ಪುರ ಮೂಲದ ಕಂಪನಿಯಾದ ಶ್ರೀಲಕ್ಷ್ಮಿ ಕಾಟ್ಸಿನ್ ಲಿಮಿಟೆಡ್​​​​​​ ಮತ್ತು ಕಂಪನಿಯ ಅಧ್ಯಕ್ಷ, ಮ್ಯಾನೇಜಿಂಗ್ ಡೈರೆಕ್ಟರ್ ಮಾತಾ ಪ್ರಸಾದ್ ಅಗರ್ವಾಲ್ ಸೇರಿದಂತೆ ಇತರರ ವಿರುದ್ಧ ಸಿಬಿಐ ದೂರು ದಾಖಲಿಸಿದೆ.

ಸುಮಾರು10 ಬ್ಯಾಂಕ್​ಗಳಿಗೆ 6,833 ಕೋಟಿ ರೂಪಾಯಿ ನಷ್ಟ ಉಂಟುಮಾಡಿರುವ ಆರೋಪ ಶ್ರೀಲಕ್ಷ್ಮಿ ಕಾಟ್ಸಿನ್​​ನ ಮಾತಾ ಪ್ರಸಾದ್ ಅಗರ್ವಾಲ್ ಮತ್ತು ಹಲವರ ಮೇಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾತಾ ಪ್ರಸಾದ್ ಅಗರ್ವಾಲ್ ಮಾತ್ರವಲ್ಲದೇ ಶ್ರೀಲಕ್ಷ್ಮಿ ಕಾಟ್ಸಿನ್​ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಪವನ್ ಕುಮಾರ್ ಅಗರ್ವಾಲ್, ನಿರ್ದೇಶಕರಾದ ಶಾರದಾ ಅಗರ್ವಾಲ್, ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್​​ ದೇವೇಶ್ ನರೇನ್ ಗುಪ್ತಾ ಅವರ ವಿರುದ್ಧ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದೂರು ನೀಡಿದ್ದು, ಎಫ್​ಐಆರ್ ದಾಖಲಾಗಿದೆ.

ಈ ಕುರಿತು ಈಗಾಗಲೇ ತನಿಖೆ ನಡೆಸಿರುವ ಕೇಂದ್ರಿಯ ತನಿಖಾ ದಳ (ಸಿಬಿಐ) ನೊಯ್ಡಾ, ರೂರ್ಕಿ, ಕಾನ್ಪುರ ಮತ್ತು ಫತೇಪುರ್​ನ ಒಂಬತ್ತು ಸ್ಥಳಗಳಲ್ಲಿ ಶನಿವಾರ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಉದ್ದೇಶಪೂರ್ವಕವಾಗಿ, ಅಪ್ರಾಮಾಣಿಕವಾಗಿ ಬ್ಯಾಂಕಿಗೆ ನಷ್ಟವನ್ನು ಉಂಟುಮಾಡಿದ್ದಾರೆ. ತಪ್ಪು ಮತ್ತು ಅನುಮಾನಾಸ್ಪದ ದಾಖಲೆಗಳನ್ನು ಬ್ಯಾಂಕಿಗೆ ನೀಡಿದ್ದಾರೆ ಎಂದು ಸೆಂಟ್ರಲ್ ಬ್ಯಾಂಕ್ ಆಫ್​ ಇಂಡಿಯಾ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ರಾಹುಲ್ ಗಾಂಧಿ ಟ್ವಿಟರ್ ಖಾತೆ ತಾತ್ಕಾಲಿಕ ಸ್ಥಗಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.