ETV Bharat / bharat

ಅಗತ್ಯಬಿದ್ದರೆ ಮತ್ತೆ ಕೃಷಿ ಸಂಬಂಧಿ ಕಾನೂನು ಜಾರಿ: ರಾಜಸ್ಥಾನ ರಾಜ್ಯಪಾಲ

author img

By

Published : Nov 21, 2021, 11:58 AM IST

ಕೃಷಿ ಕಾನೂನುಗಳನ್ನು (Farm Laws) ಸದ್ಯಕ್ಕೆ ರದ್ದು ಮಾಡಲಾಗುತ್ತಿದ್ದು, ಅಗತ್ಯವಿದ್ದರೆ ಮತ್ತೆ ಜಾರಿಗೊಳಿಸಲಾಗುತ್ತದೆ ಎಂದು ರಾಜಸ್ಥಾನ ರಾಜ್ಯಪಾಲ ಕಲ್​ರಾಜ್ ಮಿಶ್ರಾ (Kalraj Mishra) ಎಚ್ಚರಿಸಿದ್ದಾರೆ.

can-bring-back-farm-laws-again-if-necessary-says-rajasthan-governor
ಅಗತ್ಯಬಿದ್ದರೆ ಮತ್ತೆ ಕೃಷಿ ಸಂಬಂಧಿ ಕಾನೂನು ಜಾರಿ: ರಾಜಸ್ಥಾನ ರಾಜ್ಯಪಾಲ

ಭದೋಹಿ(ಉತ್ತರ ಪ್ರದೇಶ): ಅಗತ್ಯವಿದ್ದರೆ ಸದ್ಯಕ್ಕೆ ರದ್ದುಗೊಳಿಸಲಾಗುತ್ತಿರುವ ಮೂರು ಕೃಷಿ ಸಂಬಂಧಿ ಕಾನೂನುಗಳನ್ನು ಮತ್ತೆ ಜಾರಿ ಮಾಡಬಹುದು ಎಂದು ರಾಜಸ್ಥಾನದ ರಾಜ್ಯಪಾಲ ಕಲ್​ರಾಜ್​ ಮಿಶ್ರಾ (Rajasthan Governor Kalraj Mishra) ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಎಎನ್​ಐ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೃಷಿ ಕಾನೂನುಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಲು ಪ್ರಯತ್ನಿಸಿ, ಸೋತಿದೆ. ಆದರೂ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ನಿರ್ಧಾರ ಅತ್ಯಂತ ಶ್ಲಾಘನೀಯ. ಅನಿವಾರ್ಯವಾದರೆ ಮತ್ತೆ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಬಹುದು ಎಂದರು.

  • #WATCH | Bhadohi: Rajasthan Gov Kalraj Mishra says,"Govt tried to explain to farmers the pros of #FarmLaws. But they were adamant about repeal.Govt felt that it should be taken back&formed again later if needed but right now they should repeal as farmers are demanding..." (20.11) pic.twitter.com/3wHjXYaf2q

    — ANI UP (@ANINewsUP) November 21, 2021 " class="align-text-top noRightClick twitterSection" data=" ">

ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ಮೂಲಕ ಕೇಂದ್ರ ಸರ್ಕಾರ ಸರಿಯಾದ ಹೆಜ್ಜೆ ಇಟ್ಟಿದೆ. ರೈತರು ಆಕ್ರೋಶ ವ್ಯಕ್ತಪಡಿಸಿದ್ದರ ಸಲುವಾಗಿ ಕಾನೂನುಗಳನ್ನು ಹಿಂಪಡೆಯುವುದು ಸೂಕ್ತ ಎಂದು ಕೇಂದ್ರ ಸರ್ಕಾರ ಪರಿಗಣಿಸಿದೆ ಕಲ್​ರಾಜ್ ಮಿಶ್ರಾ ಹೇಳಿದರು.

ಪಾಕಿಸ್ತಾನ್ ಜಿಂದಾಬಾದ್ ಹೇಳುವವರಿಗೆ ತಿರುಗೇಟು:

ಮತ್ತೊಂದೆಡೆ, ಕೃಷಿ ಕಾಯ್ದೆಗಳ ರದ್ಧತಿ ಸಂಬಂಧ ಮಾತನಾಡಿದ ಉನ್ನಾವೋ ಸಂಸದ ಸಾಕ್ಷಿ ಮಹಾರಾಜ್ (Sakshi Maharaj) ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸುವ ಮೂಲಕ 'ಪಾಕಿಸ್ತಾನ್ ಜಿಂದಾಬಾದ್', 'ಖಲಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗುವವರ ಪ್ಲ್ಯಾನ್​ಗಳಿಗೆ ಮೋದಿ ತಿರುಗೇಟು ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕೃಷಿ ಕಾನೂನುಗಳನ್ನು ಹಿಂಪಡೆಯುವ ನಿರ್ಧಾರಕ್ಕೂ, ಉತ್ತರ ಪ್ರದೇಶ ಚುನಾವಣೆಗೂ (Uttar Pradesh elections) ಯಾವುದೇ ಸಂಬಂಧವಿಲ್ಲ. ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಾಕ್ಷಿ ಮಹಾರಾಜ್​ ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ಮೊದಲು ನಿಮ್ಮ ಮಕ್ಕಳನ್ನು ಗಡಿಗೆ ಕಳುಹಿಸಿ, ಬಳಿಕ ಉಗ್ರರ ದೇಶದ ಪ್ರಧಾನಿಯನ್ನು ನಿಮ್ಮ ದೊಡ್ಡಣ್ಣನೆಂದು ಕರೆಯಿರಿ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.