ETV Bharat / bharat

ಅದು Bydget ಅಲ್ಲ 'Budget', rely ಅಲ್ಲ 'reply': ಶಶಿ ತರೂರ್‌ ಕಾಲೆಳೆದ ಕೇಂದ್ರ ಸಚಿವ ಅಠಾವಳೆ

author img

By

Published : Feb 11, 2022, 9:47 AM IST

2022-23 ಸಾಲಿನ ಬಜೆಟ್ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್​ ಮಾಡಿರುವ ಪೋಸ್ಟ್​ನಲ್ಲಿರುವ ಅಕ್ಷರ ದೋಷವನ್ನು ಹುಡುಕಿ ತೋರಿಸುವ ಮೂಲಕ ಕೇಂದ್ರ ಸಚಿವ ರಾಮದಾಸ್ ಅಠಾವಳೆ ತಿರುವನಂತಪುರಂ ಸಂಸದರ ಕಾಲೆಳೆದಿದ್ದಾರೆ.

ರಾಮದಾಸ್ ಅಠಾವಳೆ
ರಾಮದಾಸ್ ಅಠಾವಳೆ

ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವಿಟರ್‌ ಪೋಸ್ಟ್​ನಲ್ಲಿರುವ ತಪ್ಪುಗಳನ್ನು ಹುಡುಕಿ ತೋರಿಸುವ ಕೆಲಸವನ್ನು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಮಾಡಿದ್ದಾರೆ. ಜೊತೆಗೆ, ತಿರುವನಂತಪುರಂ ಸಂಸದರನ್ನು ಶಾಲೆಗೆ ಸೇರಿಸುವ ಅಗತ್ಯವಿದೆ ಎಂದು ಕಾಲೆಳೆದಿದ್ದಾರೆ.

ಕೇಂದ್ರ ಬಜೆಟ್​ ಕುರಿತು ಶಶಿ ತರೂರ್ ಟ್ವೀಟ್​ ಮಾಡಿದ ಪೋಸ್ಟ್​ ಅನ್ನು ಮರು ಪೋಸ್ಟ್​​ ಮಾಡಿರುವ ಸಚಿವ ಅಠಾವಳೆ, ಶಶಿ ತರೂರ್ ಅವರೇ ಅನಗತ್ಯ ಹೇಳಿಕೆಗಳನ್ನು ನೀಡುವಾಗ ತಪ್ಪುಗಳಾಗುವುದು ಸಹಜ. ಬೈಜೆಟ್ ಅಲ್ಲ, ಅದು ಬಜೆಟ್. ರಿಲೈ ಅಲ್ಲ ರಿಪ್ಲೈ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

  • Dear Shashi Tharoor ji, they say one is bound to make mistakes while making unnecessary claims and statements.

    It’s not “Bydget” but BUDGET.

    Also, not rely but “reply”!

    Well, we understand! https://t.co/sG9aNtbykT

    — Dr.Ramdas Athawale (@RamdasAthawale) February 10, 2022 " class="align-text-top noRightClick twitterSection" data=" ">

ಇದಕ್ಕೆ ಟ್ವೀಟ್ ಮೂಲಕವೇ ತಿರುಗೇಟು ನೀಡಿರುವ ಶಶಿ ತರೂರ್,​ ನಾನು ಸರಿಪಡಿಸಿಕೊಂಡಿದ್ದೇನೆ ರಾಮದಾಸ್ ಜೀ. ಅಸಡ್ಡೆಯಿಂದ ಟೈಪ್ ಮಾಡುವುದು ಕೆಟ್ಟ ಇಂಗ್ಲಿಷ್‌ಗಿಂತ ದೊಡ್ಡ ಪಾಪ. ನಿಮ್ಮ ಟ್ಯೂಷನ್‌ನಿಂದ ಪ್ರಯೋಜನ ಪಡೆದವರು ಜೆಎನ್‌ಯುನಲ್ಲಿ ಯಾರಾದರೂ ಇರಬಹುದು ಎಂದು ತಮ್ಮದೇ ಶೈಲಿಯಲ್ಲಿ ಕಾಲೆಳೆದಿದ್ದಾರೆ.

  • I stand corrected, Ramdas ji. Careless typing is a bigger sin than bad English!
    But while you're on a roll, there's someone at JNU who could benefit from your tuition.....

    — Shashi Tharoor (@ShashiTharoor) February 10, 2022 " class="align-text-top noRightClick twitterSection" data=" ">

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2022-23 ಸಾಲಿನ ಬಜೆಟ್​ ಅತ್ಯಂತ ನಿರಾಶಾದಾಯಕವಾಗಿದೆ, ಇದು ಒದ್ದೆಯಾದ ಸ್ಕ್ವಿಬ್. ಕೋವಿಡ್​ನಿಂದ ಜನರು ತತ್ತರಿಸಿದ್ದು, ನಾವು ಹಣದುಬ್ಬರವನ್ನು ಎದುರಿಸುತ್ತಿದ್ದೇವೆ. ಬಜೆಟ್​ನಲ್ಲಿ ಮಧ್ಯಮ ವರ್ಗದವರಿಗೆ ಯಾವುದೇ ತೆರಿಗೆ ವಿನಾಯಿತಿ ನೀಡಿಲ್ಲ. ಈ ಬಜೆಟ್ ಅಚ್ಛೇ ದಿನ್ ಎಂಬ ಮರೀಚಿಕೆಯನ್ನು ಇನ್ನಷ್ಟು ದೂರ ತಳ್ಳುವಂತಿದೆ. ಸೀತಾರಾಮನ್ ಬಜೆಟ್​ ಮಂಡಿಸುವಾಗ ರಾಮದಾಸ್ ಅಠವಾಳೆ ಅವರ ಮುಖದಲ್ಲಿನ ದಿಗ್ಭ್ರಮೆ ಮತ್ತು ಅಭಿವ್ಯಕ್ತಿಯೇ ಎಲ್ಲವನ್ನೂ ಹೇಳುತ್ತಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಬೇಸರ ವ್ಯಕ್ತಪಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.