ETV Bharat / bharat

ವಾಯುಭಾರ ಕುಸಿತ, ಬೈಪರ್​ಜಾಯ್​ ಚಂಡಮಾರುತದ ಭೀತಿ: ಕರ್ನಾಟಕ ಸೇರಿ ನಾಲ್ಕು ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ!

author img

By

Published : Jun 7, 2023, 7:59 AM IST

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡಿದ್ದು ಮತ್ತು ಬೈಪರ್​ಜಾಯ್​ ಚಂಡಮಾರುತ ಭಾರತಕ್ಕೆ ಅಪ್ಪಳಿಸುವುದರಿಂದ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯದ ಕರವಾಳಿ ಭಾಗಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Biporjoy Cyclonic storm develops over Arabian Sea  could make landfall in India  Biporjoy Cyclonic storm  ಬೈಪರ್​ಜಾಯ್​ ಚಂಡಮಾರುತದ ಭೀತಿ  ವಾಯುಭಾರ ಕುಸಿತ  ಕರ್ನಾಟಕ ಸೇರಿ ನಾಲ್ಕು ರಾಜ್ಯದಲ್ಲಿ ಭಾರೀ ಮಳೆ  ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ  ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ  ಬೈಪರ್​ಜಾಯ್​ ಚಂಡಮಾರುತ ಭಾರತಕ್ಕೆ  ದೇಶದ ಕರಾವಳಿ ಪ್ರದೇಶಗಳಲ್ಲಿ ಮತ್ತೊಂದು ಚಂಡಮಾರುತ  ಆಗ್ನೇಯ ಅರಬ್ಬಿ ಸಮುದ್ರದ ಮೇಲಿನ ಕಡಿಮೆ ಒತ್ತಡ  ಭಾರತೀಯ ಹವಾಮಾನ ಇಲಾಖೆ  ಸೈಕ್ಲೋನಿಕ್ ಚಂಡಮಾರುತವಾಗಿ ಬದಲಾಗುವ ಸಾಧ್ಯತೆ
ಕರ್ನಾಟಕ ಸೇರಿ ನಾಲ್ಕು ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ

ನವದೆಹಲಿ: ದೇಶದ ಕರಾವಳಿ ಪ್ರದೇಶಗಳಲ್ಲಿ ಮತ್ತೊಂದು ಚಂಡಮಾರುತದ ಅಪಾಯವಿದೆ. ಗುಜರಾತ್‌ನ ದಕ್ಷಿಣ ಪೋರಬಂದರ್‌ನಲ್ಲಿ ಆಗ್ನೇಯ ಅರಬ್ಬಿ ಸಮುದ್ರದ ಮೇಲಿನ ಕಡಿಮೆ ಒತ್ತಡದ ಪ್ರದೇಶವು ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಇದು ಸೈಕ್ಲೋನಿಕ್ ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಇದೆ. ಈ ಚಂಡಮಾರುತವನ್ನು 'ಬೈಪರ್‌ಜಾಯ್' ಎಂದು ಕರೆಯಲಾಗುವುದು. ಈ ಹೆಸರನ್ನು ಬಾಂಗ್ಲಾದೇಶ ನೀಡಿದೆ.

Biporjoy Cyclonic storm develops over Arabian Sea  could make landfall in India  Biporjoy Cyclonic storm  ಬೈಪರ್​ಜಾಯ್​ ಚಂಡಮಾರುತದ ಭೀತಿ  ವಾಯುಭಾರ ಕುಸಿತ  ಕರ್ನಾಟಕ ಸೇರಿ ನಾಲ್ಕು ರಾಜ್ಯದಲ್ಲಿ ಭಾರೀ ಮಳೆ  ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ  ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ  ಬೈಪರ್​ಜಾಯ್​ ಚಂಡಮಾರುತ ಭಾರತಕ್ಕೆ  ದೇಶದ ಕರಾವಳಿ ಪ್ರದೇಶಗಳಲ್ಲಿ ಮತ್ತೊಂದು ಚಂಡಮಾರುತ  ಆಗ್ನೇಯ ಅರಬ್ಬಿ ಸಮುದ್ರದ ಮೇಲಿನ ಕಡಿಮೆ ಒತ್ತಡ  ಭಾರತೀಯ ಹವಾಮಾನ ಇಲಾಖೆ  ಸೈಕ್ಲೋನಿಕ್ ಚಂಡಮಾರುತವಾಗಿ ಬದಲಾಗುವ ಸಾಧ್ಯತೆ
ಕರ್ನಾಟಕ ಸೇರಿ ನಾಲ್ಕು ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ

ಇಂದು ಬೆಳಗ್ಗೆ 8.30ಕ್ಕೆ ನೈಋತ್ಯ ಗೋವಾದಿಂದ 950 ಕಿ.ಮೀ, ನೈಋತ್ಯ ಮುಂಬೈನಿಂದ 1,100 ಕಿ.ಮೀ, ದಕ್ಷಿಣ ಪೋರಬಂದರ್‌ನಿಂದ 1,190 ಕಿ.ಮೀ ಹಾಗೂ ಪಾಕಿಸ್ತಾನದ ದಕ್ಷಿಣ ಕರಾಚಿಯಿಂದ 1,490 ಕಿ.ಮೀ ದೂರದಲ್ಲಿ ಕಡಿಮೆ ಒತ್ತಡ ಉಂಟಾಗಿದೆ ಎಂದು ಹವಾಮಾನ ಇಲಾಖೆ ಬುಲೆಟಿನ್‌ನಲ್ಲಿ ತಿಳಿಸಿದೆ. ಮುಂದಿನ 24 ಗಂಟೆಗಳಲ್ಲಿ ವಾಯುಭಾರ ಕುಸಿತವು ಉತ್ತರಾಭಿಮುಖವಾಗಿ ಚಲಿಸುವ ಸಾಧ್ಯತೆ ಇದೆ. ಇದು ಪೂರ್ವ - ಮಧ್ಯ ಅರೇಬಿಯನ್ ಸಮುದ್ರ ಮತ್ತು ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ.

ಅರಬ್ಬಿ ಸಮುದ್ರದಲ್ಲಿ ರೂಪುಗೊಂಡಿರುವ 'ಬೈಪರ್‌ಜಾಯ್' ಚಂಡಮಾರುತವು ದೇಶದ ಕರಾವಳಿ ಮತ್ತು ಇತರ ಪ್ರದೇಶಗಳಿಗೆ ಅಪಾಯವನ್ನುಂಟು ಮಾಡಲಿದೆ. ಮುಂದಿನ 24 ಗಂಟೆಗಳಲ್ಲಿ ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇದೆ. ಈ ಚಂಡಮಾರುತವು ಕರಾವಳಿಯಿಂದ 1000 ರಿಂದ 1100 ಕಿಮೀ ದೂರದಲ್ಲಿದೆ. ಆದ್ದರಿಂದ ನಮ್ಮ ಕರಾವಳಿಯಲ್ಲಿ ಇದರ ಪ್ರಭಾವವು ಕಡಿಮೆ ಇರುತ್ತದೆ. ಗಾಳಿಯ ವೇಗ ಹೆಚ್ಚಾಗಿರುವುದರಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಮನವಿ ಮಾಡಿದೆ.

ಸೈಕ್ಲೋನ್ ತೀವ್ರತೆ: ಗುರುವಾರ (ಜೂನ್ 8) ಬೆಳಗಿನ ವೇಳೆಗೆ ಬೈಪರ್​ಜಾಯ್​ ಚಂಡಮಾರುತವು ತೀವ್ರವಾಗಿ ಬದಲಾಗಲಿದ್ದು, ಶುಕ್ರವಾರ (ಜೂನ್ 9) ಸಂಜೆ ವೇಳೆಗೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ನೇರ ಪರಿಣಾಮ ಕೇರಳ-ಕರ್ನಾಟಕ ಮತ್ತು ಲಕ್ಷದ್ವೀಪ - ಮಾಲ್ಡೀವ್ಸ್ ಸೇರಿದಂತೆ ನಾಲ್ಕು ರಾಜ್ಯದ ಕರಾವಳಿಯಲ್ಲಿ ಕಂಡು ಬರಲಿದೆ. ಇದರೊಂದಿಗೆ ಕೊಂಕಣ - ಗೋವಾ -ಮಹಾರಾಷ್ಟ್ರ ಕರಾವಳಿ ತೀರದಲ್ಲಿ ಜೂನ್ 8ರಿಂದ 10ರವರೆಗೆ ಸಮುದ್ರದಲ್ಲಿ ಅತಿ ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. ಅಪಾಯದ ಹಿನ್ನೆಲೆಯಲ್ಲಿ ಸಮುದ್ರಕ್ಕೆ ತೆರಳಿರುವ ಮೀನುಗಾರರು ಕರಾವಳಿಗೆ ಮರಳುವಂತೆ ಸೂಚಿಸಲಾಗಿದೆ.

ಕೇರಳದಲ್ಲಿ ಮುಂಗಾರು ಯಾವಾಗ ಪ್ರಾರಂಭ?: ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ಚಂಡಮಾರುತ ಪ್ರಭಾವಗಳು ಬೀರುವ ಹಿನ್ನೆಲೆ ಕೇರಳ ಕರಾವಳಿಯತ್ತ ಮಾನ್ಸೂನ್ ಆಗಮನದ ಮೇಲೆ ಗಂಭೀರವಾಗಿ ಪರಿಣಾಮ ಬೀರಬಹುದು ಎಂದು IMD ಸೋಮವಾರ (ಜೂನ್ 5) ಹೇಳಿದೆ. ಆದರೆ, ಕೇರಳದಲ್ಲಿ ಮಾನ್ಸೂನ್ ಪ್ರಾರಂಭವಾಗುವ ದಿನಾಂಕವನ್ನು ನಿರ್ದಿಷ್ಟಪಡಿಸಲಾಗಿಲ್ಲ. ಅದೇ ಸಮಯದಲ್ಲಿ, 'ಸ್ಕೈಮೆಟ್ ವೆದರ್' ಕೇರಳದಲ್ಲಿ 8 ಅಥವಾ 9 ರಂದು ಮುಂಗಾರು ಅಪ್ಪಳಿಸಬಹುದು ಮತ್ತು ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ಮಾನ್ಸೂನ್ ಬಗ್ಗೆ IMD ಹೇಳಿದ್ದೇನು?: ಸೋಮವಾರ (ಜೂನ್ 5) ಕೇರಳದಲ್ಲಿ ಉತ್ತಮ ಮಳೆಯಾಗಿದ್ದು, ಇನ್ನು ಎರಡ್ಮೂರು ದಿನಗಳಲ್ಲಿ ಮುಂಗಾರು ಆಗಮನಕ್ಕೆ ಹವಾಮಾನ ಅನುಕೂಲಕರವಾಗಿದೆ. ಚಂಡಮಾರುತದಿಂದಾಗಿ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದಿಂದಾಗಿ ದಕ್ಷಿಣ ಪರ್ಯಾಯ ದ್ವೀಪದಲ್ಲಿ ಮಳೆಯಾಗಲಿದೆ. ಚಂಡಮಾರುತವು ದುರ್ಬಲಗೊಂಡ ನಂತರ, ಮಾನ್ಸೂನ್ ದಕ್ಷಿಣ ಪರ್ಯಾಯ ದ್ವೀಪದಿಂದ ಮುನ್ನಡೆಯುತ್ತದೆ ಎಂದು ಐಎಂಡಿಯ ಹಿರಿಯ ವಿಜ್ಞಾನಿ ಡಿಎಸ್​ಪೈ ಹೇಳಿದ್ದರು.

ಹಿಂದಿನ ವರ್ಷಗಳ ಮಾನ್ಸೂನ್ ದಾಖಲೆಗಳು: ಹಿಂದಿನ ವರ್ಷಗಳ ದಾಖಲೆಗಳ ಪ್ರಕಾರ, ಈ ಬಾರಿ ಆಗ್ನೇಯ ಮುಂಗಾರು ವಿಳಂಬವಾಗಿದೆ. 2022 ರಲ್ಲಿ ಮೇ 29, 2021 ರಲ್ಲಿ ಜೂನ್ 3, 2020 ರಲ್ಲಿ ಜೂನ್ 1, 2019 ರಲ್ಲಿ ಜೂನ್ 8 ಮತ್ತು 2018 ರಲ್ಲಿ ಮೇ 29 ರಂದು ಮುಂಗಾರು ಭಾರತಕ್ಕೆ ಪ್ರವೇಶಿಸಿತ್ತು. ಕೇರಳದಲ್ಲಿ ಮಾನ್ಸೂನ್ ಸ್ವಲ್ಪ ವಿಳಂಬವಾದರೂ ದೇಶದ ಇತರ ಭಾಗಗಳಿಗೆ ಮುಂಗಾರು ತಡವಾಗಿ ತಲುಪುತ್ತದೆ ಎಂದು ಅರ್ಥವಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದು ಮಾನ್ಸೂನ್ ಸಮಯದಲ್ಲಿ ದೇಶದಾದ್ಯಂತ ಒಟ್ಟು ಮಳೆಯ ಮೇಲೆ ಪರಿಣಾಮ ಬೀರುವುದಿಲ್ಲ.

ಓದಿ: ನಾಳೆ ಇಲ್ಲವೇ ನಾಡಿದ್ದು ಕೇರಳಕ್ಕೆ ಮಾನ್ಸೂನ್​ ಪ್ರವೇಶ.. ಹವಾಮಾನ ಇಲಾಖೆ ಮುನ್ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.