ETV Bharat / bharat

ಈ ನಾರಿ ಎಷ್ಟು ಉದಾರಿ... ಮಂಗಳಸೂತ್ರ ಮಾರಿ ಪಿಎಂ-ಕೇರ್ಸ್ ಫಂಡ್​​ಗೆ ದೇಣಿಗೆ ಕೊಟ್ಟ ಮಹಿಳೆ

author img

By

Published : Apr 24, 2020, 2:04 PM IST

ಕೊರೊನಾ ಪರಿಹಾರ ಕಾರ್ಯಗಳಿಗಾಗಿ ಸ್ಥಾಪಿಸಲಾಗಿರುವ ಪಿಎಂ ಕೇರ್ಸ್​ ಫಂಡ್​​ಗೆ ಮಹಿಳೆಯೊಬ್ಬರು ತಮ್ಮ ಮಂಗಳಸೂತ್ರವನ್ನು ಮಾರಿ ದೇಣಿಗೆ ನೀಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

Washim woman sells mangalsutra to donate to PM-CARES Fund
ಮಂಗಳಸೂತ್ರ ಮಾರಿ ಕೊರೊನಾ ಪರಿಹಾರ ನಿಧಿಗೆ ದೇಣಿಗೆ ಕೊಟ್ಟ ಮಹಿಳೆ

ವಾಶಿಮ್ ( ಮಹಾರಾಷ್ಟ್ರ ) : ಕೊರೊನಾ ಬಿಕ್ಕಟ್ಟನ್ನು ಎದುರಿಸಲು ಸ್ಥಾಪಿಸಲಾಗಿರುವ ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿ (ಪಿಎಂ-ಕೇರ್ಸ್ ಫಂಡ್ )ಗೆ ಮಹಿಳೆಯೊಬ್ಬರು ಮಂಗಳಸೂತ್ರ ಮಾರಿ ದೇಣಿಗೆ ನೀಡಿದ್ದಾರೆ

ಮಂಗಳಸೂತ್ರ ಮಾರಿ ಕೊರೊನಾ ಪರಿಹಾರ ನಿಧಿಗೆ ದೇಣಿಗೆ ಕೊಟ್ಟ ಮಹಿಳೆ

ನೀತಾ ಲ್ಯಾಂಡೆ ಮಂಗಳ ಸೂತ್ರ ಮಾರಿ ಕೊರೊನಾ ಪರಿಹಾರ ನಿಧಿಗೆ ದೇಣಿಗೆ ನೀಡಿದ ಮಹಾತಾಯಿ. ವೃತ್ತಿಯಲ್ಲಿ ಟೈಲರ್​ ಆಗಿರುವ ನೀತಾ, ದೇಶದ ಜನರ ಸುರಕ್ಷೆಯಲ್ಲಿ ನನ್ನದು ಒಂದು ಪಾಲಿರಲಿ ಎಂದು ಪವಿತ್ರ ಮಂಗಳಸೂತ್ರ ಮಾರಿ ಅದರಿಂದ ಬಂದ 5 ಸಾವಿರ ಹಣವನ್ನು ಸ್ಥಳೀಯ ತಹಶೀಲ್ದಾರ್ ಧೀರಜ್ ಮಂಜ್ರೆಗೆ ಹಸ್ತಾಂತರಿಸಿದ್ದಾರೆ.

ಈ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರಳಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.