ETV Bharat / bharat

ಈ ಬಾರಿ ನಾವೇ ಗೆಲ್ಲೋದು.. ಮೋದಿ ಅಧಿಕಾರಕ್ಕೆ ಬರಲ್ಲ: ಇದು ಇವರ ಭವಿಷ್ಯ

author img

By

Published : May 4, 2019, 10:44 AM IST

Updated : May 4, 2019, 10:51 AM IST

ಕೇಂದ್ರದಲ್ಲಿ ಈ ಬಾರಿ ಬಿಜೆಪಿಯೇತರ ಸರ್ಕಾರ ಬರುವುದು ಖಚಿತ. ಕಾಂಗ್ರೆಸ್​ ಗೆಲುವು ಸಾಧಿಸುವುದು ನಿಶ್ಚಿತ ಎಂದು ಕಾಂಗ್ರೆಸ್​​ನ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತೀಯ ಸಾಗರೋತ್ತರ ಕಾಂಗ್ರೆಸ್​​ನ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ

ನವದೆಹಲಿ: ವಾಸ್ತವಾಂಶಗಳ ಆಧಾರದ ಮೇಲೆ ಹೇಳುವುದಾದರೆ ನಾವು ಅಂದರೆ ಕಾಂಗ್ರೆಸ್​ ಗೆಲುವು ಸಾಧಿಸುವುದು ನಿಶ್ಚಿತ ಎಂಬುದು ನಮ್ಮ ನಂಬಿಕೆ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್​​ನ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • Sam Pitroda,Congress on if there are contradictions in Opposition: No, don’t think there anything to worry ,they will all come together at the right time , I can assure you. All are clear on the common goal ,they all want democracy, they all want inclusion ,they all want peace. pic.twitter.com/8e9wIp4tfX

    — ANI (@ANI) May 4, 2019 " class="align-text-top noRightClick twitterSection" data=" ">

ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿದ ಅವರು, ಮಾಧ್ಯಮಗಳು ವರದಿ ಮಾಡುವುದಕ್ಕೂ ಮತ್ತು ವಾಸ್ತವಕ್ಕೂ ಅಜಗಜಾಂತರವಿದೆ. ಆ ಬಗ್ಗೆ ಯಾರೂ ವರದಿ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಬಾರಿ ಬಿಜೆಪಿಯೇತರ ಸರ್ಕಾರ ರಚನೆ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • Sam Pitroda on Rahul Gandhi citizenship issue: He has been member of parliament for 15 years ,you sat with him in the parliament. You worked with him in parliament.Why did you wake up today with lies?You think people are stupid? Don’t underestimate intelligence of Indian people pic.twitter.com/Cb6urn781y

    — ANI (@ANI) May 4, 2019 " class="align-text-top noRightClick twitterSection" data=" ">

ಈ ನಡುವೆ ರಾಹುಲ್​ ಗಾಂಧಿ ಅವರ ಪೌರತ್ವ ವಿಚಾರದ ಬಗ್ಗೆ ಮಾತನಾಡಿದ ಅವರು, ರಾಹುಲ್​ 15 ವರ್ಷಗಳಿಂದ ಎಂಪಿ ಆಗಿದ್ದಾರೆ. ಸಂಸತ್​ನಲ್ಲಿ ಅವರು ಕುಳಿತು ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದಾರೆ. ಇವತ್ತ್ಯಾಕೆ ಈ ವಿಷಯ ಮತ್ತೆ ಪ್ರಸ್ತಾಪವಾಗಿದೆ. ಜನ ಏನು ಮೂರ್ಖರು ಎಂದು ತಿಳಿದುಕೊಂಡಿದ್ದೀರಾ? ಭಾರತೀಯರ ಜಾಣ್ಮೆಯನ್ನ ಅಂಡರ್​ ಎಸ್ಟೀಮೇಟ್​ ಮಾಡಬೇಡಿ ಎಂದು ಪಿತ್ರೋಡಾ ಎಚ್ಚರಿಕೆ ನೀಡಿದ್ದಾರೆ.

ಪ್ರತಿಪಕ್ಷಗಳು ಒಗ್ಗಟ್ಟಿನಿಂದಿವೆ ಆ ಬಗ್ಗೆ ಯಾವುದೇ ಆತಂಕ ಬೇಡ. ಸೂಕ್ತ ಸಮಯದಲ್ಲಿ ಅವೆಲ್ಲ ಒಗ್ಗೂಡಲಿವೆ. ನಮ್ಮೆಲ್ಲರ ಹಾಗೂ ಎಲ್ಲ ಪ್ರತಿಪಕ್ಷಗಳ ಗುರಿ ಒಂದೇ, ದೇಶದ ಪ್ರಜಾಪ್ರಭುತ್ವ ಉಳಿಯಬೇಕಾಗಿದೆ. ಶಾಂತಿಬೇಕಾಗಿದೆ ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Intro:Body:

ಈ ಬಾರಿ ನಾವೇ ಗೆಲ್ಲೋದು.. ಮೋದಿ ಸೋಲು ನಿಶ್ಚಿತ: ಇದು ಇವರ ಭವಿಷ್ಯ 

ನವದೆಹಲಿ:  ವಾಸ್ತವಾಂಶಗಳ ಆಧಾರದ ಮೇಲೆ ಹೇಳುವುದಾದರೆ ನಾವು ಅಂದರೆ ಕಾಂಗ್ರೆಸ್​ ಗೆಲುವು ಸಾಧಿಸುವುದು ನಿಶ್ಚಿತ ಎಂಬುದು ನಮ್ಮ ನಂಬಿಕೆ ಎಂದು ಭಾರತೀಯ  ಸಾಗರೋತ್ತರ ಕಾಂಗ್ರೆಸ್​​ನ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 



ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿದ ಅವರು,  ಮಾಧ್ಯಮಗಳು ವರದಿ ಮಾಡುವುದಕ್ಕೂ ಮತ್ತು ವಾಸ್ತವಕ್ಕೂ ಅಜಗಜಾಂತರವಿದೆ. ಆ ಬಗ್ಗೆ ಯಾರೂ ವರದಿ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಬಾರಿ ಬಿಜೆಪಿಯೇತರ ಸರ್ಕಾರ ರಚನೆ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 



ಈ ನಡುವೆ ರಾಹುಲ್​ ಗಾಂಧಿ ಅವರ ಪೌರತ್ವ ವಿಚಾರದ ಬಗ್ಗೆ ಮಾತನಾಡಿದ ಅವರು,   ರಾಹುಲ್​ 15 ವರ್ಷಗಳಿಂದ ಎಂಪಿ ಆಗಿದ್ದಾರೆ.  ಸಂಸತ್​ನಲ್ಲಿ ಅವರು ಕುಳಿತು ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದಾರೆ.  ಇವತ್ತ್ಯಾಕೆ ಈ ವಿಷಯ ಮತ್ತೆ ಪ್ರಸ್ತಾಪವಾಗಿದೆ. ಜನ ಏನು ಮೂರ್ಖರು ಎಂದು ತಿಳಿದುಕೊಂಡಿದ್ದೀರಾ? ಭಾರತೀಯರ ಜಾಣ್ಮೆಯನ್ನ ಅಂಡರ್​ ಎಸ್ಟೀಮೇಟ್​ ಮಾಡಬೇಡಿ ಎಂದು ಪಿತ್ರೋಡಾ ಎಚ್ಚರಿಕೆ ನೀಡಿದ್ದಾರೆ.  



ಪ್ರತಿಪಕ್ಷಗಳು ಒಗ್ಗಟ್ಟಿನಿಂದಿವೆ ಆ ಬಗ್ಗೆ ಯಾವುದೇ ಆತಂಕ ಬೇಡ. ಸೂಕ್ತ ಸಮಯದಲ್ಲಿ ಅವೆಲ್ಲ ಒಗ್ಗೂಡಲಿವೆ.  ನಮ್ಮೆಲ್ಲರ ಹಾಗೂ ಎಲ್ಲ ಪ್ರತಿಪಕ್ಷಗಳ ಗುರಿ ಒಂದೇ ದೇಶದ ಪ್ರಜಾಪ್ರಭುತ್ವ ಉಳಿಯಬೇಕಾಗಿದೆ.  ಶಾಂತಿಬೇಕಾಗಿದೆ ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 

 


Conclusion:
Last Updated : May 4, 2019, 10:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.