ETV Bharat / bharat

ಟಿಆರ್​ಪಿ ವಿಚಾರದಲ್ಲಿ ಪಾರದರ್ಶಕತೆ ಅಗತ್ಯ: ಪ್ರಕಾಶ್ ಜಾವಡೇಕರ್

author img

By

Published : Jan 12, 2021, 5:34 PM IST

ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ನಕಲಿ ಟಿಆರ್​ಪಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಸಮಿತಿಯು ಇಂದು ಕೇಂದ್ರ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ.

ನವದೆಹಲಿ: ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ನಕಲಿ ಟಿಆರ್​ಪಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನವೆಂಬರ್ 4, 2020 ರಂದು ವಿಶೇಷ ಸಮಿತಿ ರಚಿಸಿತ್ತು. ಇಂದು ಈ ಸಮಿತಿಯು ಸಚಿವಾಲಯಕ್ಕೆ ವರದಿ ಸಲ್ಲಿಸಿದೆ.

ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್, ವರದಿಯನ್ನು ಪರಿಶೀಲಿಸಿ (ಪ್ರಸಾರ ವೀಕ್ಷಕರ ಸಂಶೋಧನಾ ಮಂಡಳಿ)ಗೆ ನೀಡಲಾಗುವುದು. ಬಾರ್ಕ್​ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಟಿಆರ್​ಪಿ ವಿಚಾರದಲ್ಲಿ ಪಾರದರ್ಶಕತೆ ಅಗತ್ಯ : ಪ್ರಕಾಶ್ ಜಾವಡೇಕರ್

ಇದನ್ನೂ ಓದಿ : ಟಿಆರ್​ಪಿ ಹಗರಣ​; ಬಾರ್ಕ್​ ಮಾಜಿ ಸಿಇಒಗೆ 14 ದಿನ ನ್ಯಾಯಾಂಗ ಬಂಧನ

ಟಿಆರ್​ಪಿ(ಟೆಲಿವಿಷನ್‌ ರೇಟಿಂಗ್ ಪಾಯಿಂಟ್) ಯಲ್ಲಿ ಯಾವುದೇ ಹಸ್ತಕ್ಷೇಪವಿರದೆ, ಪಾರದರ್ಶಕವಾಗಿರಬೇಕು ಎಂದು ಅವರು ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ನಕಲಿ ಟಿಆರ್​ಪಿ ಪ್ರಕರಣ.. ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥೆಗೆ ಟ್ರಾನ್ಸಿಟ್ ಜಾಮೀನು ನೀಡಿದ ಹೈಕೋರ್ಟ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.