ETV Bharat / bharat

ಪರ್ಯಾಯ ದಾಖಲೆ ಪರಿಶೀಲಿಸಿ ಪಡಿತರ ವಿತರಣೆ: ಸುಪ್ರೀಂ ಸೂಚನೆ

author img

By

Published : Apr 30, 2020, 6:46 PM IST

ರೇಷನ್​ ಕಾರ್ಡ್​ ಇಲ್ಲದವರಿಗೂ ಪಡಿತರ ವಿತರಿಸಲು ಅವಕಾಶವಾಗುವಂತೆ ಪಡಿತರ ವ್ಯವಸ್ಥೆಯನ್ನೇ ಸಾರ್ವತ್ರೀಕರಣಗೊಳಿಸಬೇಕು ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪರ್ಯಾಯ ದಾಖಲೆಗಳನ್ನು ಪರಿಗಣಿಸಿ ಪಡಿತರ ನೀಡುವಂತೆ ರಾಜ್ಯಗಳಿಗೆ ಸೂಚಿಸಿ ಎಂದು ಕೇಂದ್ರ ಸರ್ಕಾರದ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರಿಗೆ ನಿರ್ದೇಶನ ನೀಡಿದೆ.

what other document can be accepted besides ration card: SC
what other document can be accepted besides ration card: SC

ನವದೆಹಲಿ: ದಿನಸಿ ಪದಾರ್ಥಗಳಿಗಾಗಿ ಪರದಾಡುತ್ತಿರುವ ಜನರಿಗೆ ರೇಷನ್​ ಕಾರ್ಡ್​ ಹೊರತುಪಡಿಸಿ ಬೇರಾವ ದಾಖಲೆಗಳನ್ನು ಪರಿಗಣಿಸಿ ಪಡಿತರ ನೀಡಬಹುದೆಂಬುದನ್ನು ರಾಜ್ಯಗಳು ಪರಿಶೀಲಿಸಲಿ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ರೇಷನ್​ಕಾರ್ಡ್​ ಇಲ್ಲದವರಿಗೂ ಪಡಿತರ ನೀಡುವಂತಾಗಲು ಪಡಿತರ ವ್ಯವಸ್ಥೆಯನ್ನೇ ಸಾರ್ವತ್ರೀಕರಣಗೊಳಿಸಬೇಕು ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪರ್ಯಾಯ ದಾಖಲೆಗಳನ್ನು ಪರಿಗಣಿಸಿ ಪಡಿತರ ನೀಡುವಂತೆ ರಾಜ್ಯಗಳಿಗೆ ಸೂಚಿಸಿ ಎಂದು ಕೇಂದ್ರ ಸರ್ಕಾರದ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರಿಗೆ ನಿರ್ದೇಶನ ನೀಡಿತು.

ಈ ಕುರಿತು ತಾವು ಈಗಾಗಲೇ ನೀಡಿದ ಆದೇಶ ಜೂನ್ 1 ರಿಂದ ಜಾರಿಗೆ ಬರಲಿದೆ. ಆದಾಗ್ಯೂ ರಾಜ್ಯಗಳು ಈ ಆದೇಶ ಜಾರಿ ದಿನಾಂಕ ಕುರಿತು ಮರು ಪರಿಶೀಲಿಸಬಹುದು ಎಂದು ಹೇಳಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.