ಪದ್ಮಶ್ರೀ ಪುರಸ್ಕೃತ ಉರ್ದು ಲೇಖಕ ಮುಜ್ತಾಬಾ ಹುಸೇನ್ ಹೃದಯಾಘಾತದಿಂದ ನಿಧನ

author img

By

Published : May 27, 2020, 6:32 PM IST

ಉರ್ದು ಲೇಖಕ ಮುಜ್ತಾಬಾ ಹುಸೇನ್
ಉರ್ದು ಲೇಖಕ ಮುಜ್ತಾಬಾ ಹುಸೇನ್ ()

ಹೈದರಾಬಾದ್​ನಲ್ಲಿ ಹೆಸರಾಂತ ಉರ್ದು ಲೇಖಕ ಮುಜ್ತಾಬಾ ಹುಸೇನ್​ ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹೈದರಾಬಾದ್ (ತೆಲಂಗಾಣ): ಖ್ಯಾತ ಉರ್ದು ಲೇಖಕ ಮುಜ್ತಾಬಾ ಹುಸೇನ್ ಅವರು ಹೃದಯಾಘಾತದಿಂದ ಹೈದರಾಬಾದ್​ನಲ್ಲಿ ನಿಧನರಾಗಿದ್ದಾರೆ.

ದೂರವಾಣಿ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದ, ದಿವಂಗತ ಮುಜ್ತಾಬಾ ಹುಸೇನ್​ ಅವರ ಪುತ್ರ ಹಾಡಿ ಹುಸೇನ್​​ "ನನ್ನ ತಂದೆ ಹೃದಯಘಾತದಿಂದ ಇಂದು ಬೆಳಗ್ಗೆ 8:45 ಕ್ಕೆ ನಿಧನರಾದರು" ಎಂದು ತಿಳಿಸಿದ್ದಾರೆ.

ಮುಜ್ತಾಬಾ ಹುಸೇನ್ ಅವರು ಉರ್ದು ಪತ್ರಿಕೆ ಮತ್ತು ಪುಸ್ತಕಗಳಲ್ಲಿ ಹಾಸ್ಯಮಯ ಬರಹ ಹಾಗೂ ಅಂಕಣಗಳಿಗೆ ಹೆಸರುವಾಸಿಯಾಗಿದ್ದರು. ಅವರಿಗೆ 2007ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು. 2019ರಲ್ಲಿ ದೇಶಾದ್ಯಂತ ದ್ವೇಷದ ವಾತಾವರಣ ಹಬ್ಬುತ್ತಿದೆ ಎಂದು ಆರೋಪಿಸಿ ತಮಗೆ ನೀಡಿದ ಪ್ರಶಸ್ತಿಯನ್ನು ಹಿಂದುರುಗಿಸಲು ನಿರ್ಧರಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.