ETV Bharat / bharat

ಪುತ್ರ ಸಂತಾನಕ್ಕಾಗಿ ಮಗಳನ್ನೇ ಕೊಂದ ಕಟುಕ ತಂದೆ!

author img

By

Published : Nov 13, 2020, 8:31 AM IST

ಪುತ್ರ ಸಂತಾನಕ್ಕಾಗಿ ಕೆಲವರು ಪೂಜೆ-ಪುನಸ್ಕಾರ, ಹರಕೆ ಎಂದು ದೇವಾಲಯದ ಮೊರೆ ಹೋಗುವುದನ್ನು ಕಂಡಿದ್ದೇವೆ, ಕೇಳಿದ್ದೇವೆ. ಆದ್ರೆ ಇಲ್ಲೋರ್ವ ಕಟುಕ ಗಂಡು ಮಗು ಪಡೆಯಲು ಮಾಂತ್ರಿಕನೋರ್ವನನ್ನು ಭೇಟಿಯಾಗಿ ಸಲೆಹೆ ಕೇಳಿದ್ದಾನೆ. ಅದರಂತೆ ಹೆತ್ತ ಮಗಳನ್ನೇ ಕೊಂದಾಕಿದ್ದಾನೆ ಪಾಪಿ ತಂದೆ. ಜಾರ್ಖಂಡ್​ ರಾಜ್ಯದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

Man, wanting son, follows exorcist's advice to kill daughter
ಪುತ್ರಸಂತಾನಕ್ಕಾಗಿ ಮಂತ್ರವಾದಿಯ ಸಲಹೆ ಮೇರೆಗೆ ಮಗಳನ್ನೇ ಕೊಂದ ಕಟುಕ ತಂದೆ

ಲೋಹರ್‌ದಗ (ಜಾರ್ಖಂಡ್): ಗಂಡು ಮಗುವಿನ ಆಸೆಯಲ್ಲಿ ತನ್ನ ಮಗಳನ್ನೇ ಕೊಲೆಗೈದ ಘಟನೆ ಲೋಹರ್‌ದಗದಲ್ಲಿ ನಡೆದಿದೆ. ಮಂತ್ರವಾದಿಯ ಸಲಹೆ ಪಡೆದ ವ್ಯಕ್ತಿವೋರ್ವ ತನ್ನ ಆರು ವರ್ಷದ ಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿ ಸುಮನ್ ನಾಗೇಶಿಯಾನನ್ನು ಬಂಧಿಸಿ ಬಾಲಕಿ ಸುಷ್ಮಾಳನ್ನು ಕೊಲೆ ಮಾಡಲು ಬಳಸಿದ ಕೊಡಲಿಯನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಜಾರ್ಖಂಡ್‌ನ ಲೋಹರ್‌ದಗ ಜಿಲ್ಲೆಯ ಬೊಂಡೊಬಾರ್ ಗ್ರಾಮದ ಸುಮನ್ ನಾಗೇಶಿಯಾ ಗ್ರಾಮದ ಬಳಿಯಿದ್ದ ಮಾಂತ್ರಿಕನೋರ್ವನನ್ನು ಭೇಟಿಯಾಗಿ, ತನಗೆ ಗಂಡುಮಗುವಿಲ್ಲದ ವಿಚಾರವನ್ನು ತಿಳಿಸಿದ್ದಾನೆ. ಪುತ್ರಸಂತಾನಕ್ಕಾಗಿ ಸಲಹೆ ಕೇಳಿದ್ದಾನೆ. ಅದಕ್ಕೆ ಮಂತ್ರವಾದಿ, ಮಗನನ್ನು ಪಡೆಯುವ ಸಲುವಾಗಿ ದೀಪಾವಳಿಯ ಸಂದರ್ಭದಲ್ಲಿ ನಿನ್ನ ಮಗಳನ್ನು ಕೊಲ್ಲಬೇಕೆಂದು ಸಲಹೆ ನೀಡಿದ್ದಾನೆ.

ತನ್ನ 6 ವರ್ಷದ ಮಗಳನ್ನು ಕೊಲ್ಲಲು ಅವಕಾಶಕ್ಕಾಗಿ ಆರೋಪಿ ಸುಮನ್ ನಾಗೇಶಿಯಾ ಬಹು ದಿನಗಳಿಂದ ಕಾಯುತ್ತಿದ್ದ. ಬಳಿಕ ಕೊಡಲಿಯಿಂದ ಪುತ್ರಿ ಸುಷ್ಮಾಳ ಕುತ್ತಿಗೆಗೆ ಇರಿದು ಕೊಂದಿದ್ದಾನೆ. ಘಟನೆ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆಂದು ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕಟುಕ ಕೆಲಸಕ್ಕೆ ಸಲಹೆ ನೀಡಿದ್ದ ಮಂತ್ರವಾದಿಯನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.