ETV Bharat / bharat

ಸಮುದ್ರದಲ್ಲಿ ಸಿಲುಕಿದ್ದ ಆರು ಶ್ರೀಲಂಕಾ ಮೀನುಗಾರರ ರಕ್ಷಣೆ: ವಿಡಿಯೋ

author img

By

Published : Jul 6, 2020, 8:05 AM IST

Updated : Jul 6, 2020, 11:53 AM IST

ಜುಲೈ 5 ಬೆಳಗ್ಗೆ ಮುಂಬೈ ಮತ್ತು ಚೆನ್ನೈನ ಭಾರತೀಯ ಕೋಸ್ಟ್ ಗಾರ್ಡ್ ಮ್ಯಾರಿಟೈಮ್ ಪಾರುಗಾಣಿಕಾ ಸಮನ್ವಯ ಕೇಂದ್ರ (ಎಂಆರ್​​ಸಿಸಿ) ರಕ್ಷಣಾ ಕಾರ್ಯಾಚರಣೆ ಮಾಡಿದೆ.

ಸಮುದ್ರದಲ್ಲಿ ಸಿಲುಕಿದ್ದ ಆರು ಜನ ಶೀಲಂಕಾ ಮೀನುಗಾರರ ರಕ್ಷಣೆ
ಸಮುದ್ರದಲ್ಲಿ ಸಿಲುಕಿದ್ದ ಆರು ಜನ ಶೀಲಂಕಾ ಮೀನುಗಾರರ ರಕ್ಷಣೆ

ಚೆನ್ನೈ : ಮೀನುಗಾರಿಕೆಗೆ ಬಂದು ಸಮುದ್ರದಲ್ಲಿ ಸಿಲುಕಿಕೊಂಡಿದ್ದ ಆರು ಜನ ಶ್ರೀಲಂಕಾ ಮೀನುಗಾರರನ್ನ ಇಂಡಿಯನ್ ಕೋಸ್ಟ್ ಗಾರ್ಡ್ ರಕ್ಷಿಸಿದೆ.

ಜುಲೈ 5 ಬೆಳಗ್ಗೆ ಮುಂಬೈ ಮತ್ತು ಚೆನ್ನೈನ ಭಾರತೀಯ ಕೋಸ್ಟ್ ಗಾರ್ಡ್ ಮ್ಯಾರಿಟೈಮ್ ಪಾರುಗಾಣಿಕಾ ಸಮನ್ವಯ ಕೇಂದ್ರ (ಎಂಆರ್​​ಸಿಸಿ) ರಕ್ಷಣಾ ಕಾರ್ಯಾಚರಣೆ ಮಾಡಿದೆ. ವ್ಯಾಪಾರಿ ಹಡಗು ವಿಶಾಖಪಟ್ಟಣಂಗೆ ತೆರಳುತ್ತಿದ್ದಾಗ, ಕ್ಯಾಪ್ಸೈಸ್ಡ್ ಫಿಶಿಂಗ್ ಬೋಟ್ ಅನ್ನು ನೋಡಿ ಅದರಲ್ಲಿದ್ದ ಆರು ಜನ ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ. ಈ ಕುರಿತು ಮುಂಬೈನ ಎಂಆರ್‌ಸಿಸಿಗೆ ಮಾಹಿತಿಯನ್ನು ರವಾನಿಸಿದ್ದಾರೆ.

ಸಮುದ್ರದಲ್ಲಿ ಸಿಲುಕಿದ್ದ ಆರು ಜನ ಶೀಲಂಕಾ ಮೀನುಗಾರರ ರಕ್ಷಣೆ

ಬದುಕುಳಿದ ಆರು ಮಂದಿಯನ್ನು ಶ್ರೀಲಂಕಾದ ತ್ರಿಕೋನಮಲಿಯ ಸ್ಥಳೀಯರು ಎಂದು ಗುರುತಿಸಲಾಗಿದೆ. ಅವರು ಮೀನುಗಾರಿಕೆಗೆ ಬಂದಾಗ ಸಮುದ್ರದಲ್ಲಿ ಸಿಲುಕಿಕೊಂಡಿದ್ದರು ಎನ್ನಲಾಗಿದೆ. ಇವರ ಬಗ್ಗೆ ಚೆನ್ನೈನ ಎಂಆರ್​​ಸಿಸಿ ಶ್ರೀಲಂಕಾದ ಉಪ ಹೈಕಮಿಷನ್ ನಲ್ಲಿ ತಿಳಿದು ಕೊಂಡು, ಇವರನ್ನ ಸುರಕ್ಷಿತವಾಗಿ ಮರಳಲು ವ್ಯವಸ್ಥೆ ಮಾಡಲಾಗಿದೆ.

Last Updated :Jul 6, 2020, 11:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.