ETV Bharat / bharat

ಕಾಶ್ಮೀರಿಗರ 370 ರದ್ದು...! ರಾಜ್ಯಸಭೆಯಲ್ಲಿ ಏನೇನಾಯ್ತು..?

author img

By

Published : Aug 5, 2019, 11:27 AM IST

Updated : Aug 5, 2019, 1:43 PM IST

ರಾಜ್ಯಸಭೆಯಲ್ಲಿ ಮಾತು ಆರಂಭಿಸಿದ ಅಮಿತ್ ಶಾ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಗೊಳಿಸುವುದಾಗಿ ಮಹತ್ವದ ಘೋಷಣೆ ಮಾಡಿದ್ದಾರೆ.

ಅಮಿತ್ ಶಾ

ನವದೆಹಲಿ: ಕಾಶ್ಮೀರದ ಸಮಸ್ಯೆ ಸದ್ಯ ಉಲ್ಬಣಿಸಿದ್ದು ಇದೇ ವಿಚಾರವಾಗಿ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯಸಭೆಯಲ್ಲಿ ಮಾತು ಆರಂಭಿಸಿದ ಅಮಿತ್ ಶಾ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 35ಎ ವಿಧಿಯನ್ನು ರದ್ದುಗೊಳಿಸುವುದಾಗಿ ಮಹತ್ವದ ಘೋಷಣೆ ಮಾಡಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ

ಕಾಶ್ಮೀರದ ನಿವಾಸಿಗಳಿಗೆ ವಿಶೇಷ ಸ್ಥಾನಮಾನ ನೀಡುವ 35ಎ ವಿಧಿ ಹಾಗೂ ಆರ್ಟಿಕಲ್ 370 ಅನ್ನು ತೆರವುಗೊಳಿಸುವುದಾಗಿ ಅಮಿತ್ ಶಾ ರಾಜ್ಯಸಭೆಯಲ್ಲಿ ಘೋಷಿಸಿದ್ದು, ವಿಪಕ್ಷಗಳಿಂದ ಭಾರಿ ವಿರೋಧ ಕೇಳಿಬಂದಿದೆ.

ಪ್ರತಿಪಕ್ಷಗಳು ತೀವ್ರ ಗದ್ದಲ ಉಂಟು ಮಾಡಿದ ಪರಿಣಾಮ ರಾಜ್ಯಸಭೆ ಕಲಾಪವನ್ನು ಮುಂದೂಡಿಕೆ ಮಾಡಲಾಗಿದೆ.

ಐತಿಹಾಸಿಕ ಘೋಷಣೆ... ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಗೆ ಕಣಿವೆ ರಾಜ್ಯ!

ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿದ್ದೇನು..?

  • ಆರ್ಟಿಕಲ್ 370 ಕೊಡೆಯ ಅಡಿ ಮೂರು ಕುಟುಂಬಗಳು ಹಲವಾರು ವರ್ಷಗಳಿಂದ ಜಮ್ಮು-ಕಾಶ್ಮೀರವನ್ನು ಊಟಿ ಮಾಡಿವೆ.
  • ಇಂತಹ ಪ್ರಸ್ತಾಪ ಕೈಗೊಳ್ಳುತ್ತಿರುವುದು ಇದೇ ಮೊದಲಲ್ಲ. 1952 ಮತ್ತು 1962 ರಲ್ಲಿ ಕಾಂಗ್ರೆಸ್ ತಿದ್ದುಪಡಿ ತಂದಿದೆ. ಪ್ರತಿಭಟನೆ ಮಾಡುವುದಕ್ಕಿಂತ ಮೊದಲು ಚರ್ಚೆ ಮಾಡಿ, ನಿಮೇಲ್ಲಾ ಸಂದೇಹ ಹಾಗೂ ಅಪಾರ್ಥಗಳಿಗೆ ಸ್ಪಷ್ಟನೆ ನೀಡುತ್ತೇವೆ.

    ಲಡಾಕ್‌ ಪ್ರತ್ಯೇಕವಾಗಬೇಕು ಅನ್ನೋದು ಅಲ್ಲಿನ ಜನರ ಆಸೆಯಾಗಿತ್ತು. ಹೀಗಾಗಿ ಲಡಾಕ್ ವಿಧಾನಸಭೆ ಇಲ್ಲದೆಯೇ ಕೇಂದ್ರಾಡಳಿತ ಪ್ರದೇಶವಾಗಲಿದೆ ಎಂದು ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಪ್ರಸ್ತಾಪ

    ಆರ್ಟಿಕಲ್ 370, 1ಸಿ

    ವಿಧಾನಸಭೆ ಸಹಿತ ಜಮ್ಮು-ಕಾಶ್ಮೀರವೂ ಕೇಂದ್ರ ಆಡಳಿತ ಪ್ರದೇಶವಾಗಲಿದೆ ಎಂದು ಅಮಿತ್ ಶಾ ಘೋಷಿಸಿದರು.

    • Union Home Minister Amit Shah in Rajya Sabha: I am ready for all discussions by the leader of the Opposition, the entire opposition and the members of the ruling party over Kashmir issue. I am ready to answer all questions. pic.twitter.com/AKs365vBiH

      — ANI (@ANI) August 5, 2019 " class="align-text-top noRightClick twitterSection" data=" ">

ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಂನಬಿ ಅಜಾದ್ ವಾದ ಏನು?
ಆರ್ಟಿಕಲ್ 370 ಜಮ್ಮು-ಕಾಶ್ಮೀರ ಹಾಗೂ ಭಾರತಕ್ಕೆ ಸಂಪರ್ಕದ ಕೊಂಡಿಯಾಗಿತ್ತು. ಮಹಾರಾಜ ಹರಿ ಸಿಂಗ್ ಅವರು 1947ರಲ್ಲಿ ಈ ಸೂಚನೆಗೆ ಸಹಿ ಹಾಕಿದ್ರು. ನಂತರ 1954 ರಲ್ಲಿ ಕಾಯ್ದೆ ಜಾರಿಗೆ ಬಂದಿದೆ. ಆದ್ರೆ ಕಲಾಪದಲ್ಲಿ ಪಿಡಿಪಿ ಸದಸ್ಯರ ವರ್ತನೆಯನ್ನು ಖಂಡಿಸುತ್ತೇವೆ. ನಾವು ಸಂವಿಧಾನಕ್ಕೆ ಬದ್ದರಾಗಿದ್ದೇವೆ. ಆದ್ರೆ ಬಿಜೆಪಿಯವರು ಸಂವಿಧಾನವನ್ನು ಹತ್ಯೆ ಮಾಡುತ್ತಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನ ಮಾಡುವ ಆರ್ಟಿಕಲ್ 370 ಪ್ರಸ್ತಾಪವನ್ನು ರಾಜ್ಯಸಭೆಯಲ್ಲಿ ಮಂಡಿಸುತ್ತಿದ್ದಂತೆ ಪಿಡಿಪಿ ಸದಸ್ಯರಿಂದ ಪ್ರತಿಭಟನೆ. ಪಿಡಿಪಿಯ ರಾಜ್ಯಸಭಾ ಸದಸ್ಯರಾದ ನಜೀರ್ ಅಹಮ್ಮದ್ ಲಾವೆ, ಎಂಎಂ ಫಯಾಜ್ ಕಲಾಪದಲ್ಲಿ ಸಂವಿಧಾನದ ಪ್ರತಿ ಹರಿದು ಪ್ರತಿಭಟನೆ ಮಾಡಿದರು. ಇದರಿಂದ ಆ ಇಬ್ಬರು ಸದಸ್ಯರನ್ನು ಕಲಾಪವನ್ನು ಹೊರಹಾಕಲಾಯಿತು.

ಬಿಎಸ್‌ಪಿ ಸಂಸದರಿಂದ ಬಿಜೆಪಿ ನಡೆಗೆ ಬೆಂಬಲ

  • ಆರ್ಟಿಕಲ್ 370 ರದ್ದು ಮಾಡುವ ಸರ್ಕಾರಕ್ಕೆ ಬಿಎಸ್ಪಿ ಸಂಪೂರ್ಣ ಬೆಂಬಲ
  • ಈ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಬೇಕು-ಎಸ್ಪಿ ಸಂಸದ ಸತೀಶ್ ಚಂದ್ರ ಮಿಶ್ರಾ
  • ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು
  • ಆರ್ಟಿಕಲ್ 370ಯನ್ನು ರದ್ದು ಮಾಡುವ ಪ್ರಸಾಪ
  • 2014ರ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ
  • ಆರ್ಟಿಕಲ್ 370 ರದ್ದು ಮಾಡುವ ಭರವಸೆ ಈಡೇರಿಸುತ್ತಿರುವ ಬಿಜೆಪಿ ಸರ್ಕಾರ

ಮುಂಜಾಗ್ರತಾ ಕ್ರಮವಾಗಿ ಕಾಶ್ಮೀರದ ನಾಯಕರಿಗೆ ಗೃಹ ಬಂಧನ

  • ಮಾಜಿ ಮುಖ್ಯಮಂತ್ರಿಗಳಾದ ಒಮರ್‌ ಅಬ್ದುಲ್ಲಾ, ಮೆಹಬೂಬ ಮುಫ್ತಿಗೆ ಗೃಹ ಬಂಧನ
  • ಕಳೆದೊಂದು ವಾರದ ಹಿಂದಷ್ಟೇ ಭಾರಿ ಪ್ರಮಾಣದಲ್ಲಿ ಸೇನೆ ನಿಯೋಜನೆ
  • ಸುಮಾರು 35 ಸಾವಿರ ಭದ್ರತಾ ಪಡೆಗಳು ಕಾಶ್ಮೀರದಲ್ಲಿ ನಿಯೋಜನೆ
  • ಆರ್ಟಿಕಲ್ 370 ಯಿಂದ ಕಾಶ್ಮೀರಿಗೆ ಇತ್ತು ವಿಶೇಷ ಸ್ಥಾನಮಾನ
  • ಭಾರತದ ಇತರರಿಗೆ ಹೊಲಿಸಿದ್ರೆ ಕಾಶ್ಮೀರಿಗರಿಗೆ ಪ್ರತ್ಯೇಕ ಕಾನೂನು,
  • ಪೌರತ್ವ, ಆಸ್ತಿ ಮೇಲಿನ ಮಾಲಿಕತ್ವ, ಮೂಲಭೂತ ಹಕ್ಕುಗಳು
  • ರಾಜ್ಯ ಸಭೆಯಲ್ಲಿ ವಿಪಕ್ಷಗಳಿಂದ ಪ್ರತಿಭಟನೆ
  • ಆರ್ಟಿಕಲ್ 370 ರದ್ದತಿ ವಿರೋಧಿಸಿ ಪ್ರತಿಭಟನೆ
Intro:Body:

Amit Shah


Conclusion:
Last Updated : Aug 5, 2019, 1:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.