ETV Bharat / bharat

ಕಡಿಮೆ ಬೆಲೆಗೆ ವಿಮಾನ ಟಿಕೆಟ್​, ಐಫೋನ್​ ನೀಡೋದಾಗಿ ವಂಚನೆ... ಮುತ್ತಿನನಗರಿಯಲ್ಲಿ ಬೀಡುಬಿಟ್ಟ ಬೆಳಗಾವಿ ದಂಪತಿ!

author img

By

Published : Aug 9, 2022, 11:32 AM IST

ಬೆಳಗಾವಿ ದಂಪತಿ ವಂಚನೆ ಬಯಲಿಗೆ ಬಂದಿದೆ. ಅಗ್ಗದ ದರಕ್ಕೆ ವಿಮಾನ ಟಿಕೆಟ್ ಮತ್ತು ಕಡಿಮೆ ಬೆಲೆಗೆ ಐಫೋನ್ ನೀಡುವುದಾಗಿ ಅಮಾಯಕರನ್ನು ನಂಬಿಸಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

Belgaum couple scams  cheap flight tickets and iPhones for a low price  Telangana crime news  Belagavi couple in Hyderabad  ಮುತ್ತಿನನಗರಿಯಲ್ಲಿ ಬೀಡುಬಿಟ್ಟ ಬೆಳಗಾವಿ ದಂಪತಿ  ಅಗ್ಗದ ದರಕ್ಕೆ ವಿಮಾನ ಟಿಕೆಟ್ ಮತ್ತು ಕಡಿಮೆ ಬೆಲೆಗೆ ಐಫೋನ್  ಬೆಳಗಾವಿ ದಂಪತಿ ವಂಚನೆ  ಹೈದರಾಬಾದ್​ ಅಪರಾಧ ಸುದ್ದಿ
ಮುತ್ತಿನನಗರಿಯಲ್ಲಿ ಬೀಡುಬಿಟ್ಟ ಬೆಳಗಾವಿ ದಂಪತಿ

ಹೈದರಾಬಾದ್, ಮಹಾರಾಷ್ಟ್ರ: ಕರ್ನಾಟಕದ ಬೆಳಗಾವಿಯಲ್ಲಿ ವಾಸವಾಗಿರುವ ಕಿಲಾಡಿ ದಂಪತಿ ಅಗ್ಗದ ದರಕ್ಕೆ ವಿಮಾನ ಟಿಕೆಟ್​ ಮತ್ತು ಕಡಿಮೆ ಬೆಲೆಗೆ ಐಫೋನ್ ನೀಡುವುದಾಗಿ ಹೇಳಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನು ಮುತ್ತಿನನಗರಿಯಲ್ಲಿ ಬೀಡು ಬಿಟ್ಟ ಬೆಳಗಾವಿ ದಂಪತಿ ಸೆರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಮೆಟ್ರೋ ನಗರಗಳ ಟ್ರಾವೆಲ್ ಏಜೆನ್ಸಿಗಳ ಟಾರ್ಗೆಟ್ ಮಾಡಿದ ಈ ದಂಪತಿ ಹೈದರಾಬಾದ್, ಗೋವಾ, ಬೆಂಗಳೂರು, ಮಂಗಳೂರು, ಕೋಲ್ಕತ್ತಾ, ಮುಂಬೈ ಮುಂತಾದ ನಗರಗಳಿಗೆ ಕಡಿಮೆ ಬೆಲೆಯಲ್ಲಿ ಟಿಕೆಟ್ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿದ್ದರು. ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದಲ್ಲಿ ದಂಪತಿಗೆ ಸಂಬಂಧಿಕರಿದ್ದು, 80 ಸಾವಿರ ಮೌಲ್ಯದ ಐಫೋನ್ ಅನ್ನು ಕೇವಲ ರೂ.45 ಸಾವಿರಕ್ಕೆ ನೀಡುವುದಾಗಿ ಗ್ರಾಹಕರನ್ನು ನಂಬಿಸಲಾಗಿತ್ತು.

ಇದನ್ನು ನಂಬಿದ ಅನೇಕ ಜನರು ಹಣ ನೀಡಿದ್ದರು. ಕೆಲವೇ ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಸಂಗ್ರಹವಾಗಿತ್ತು. ಹೈದರಾಬಾದ್​​​ನ ಟ್ರಾವೆಲ್ ಏಜೆನ್ಸಿಯೊಂದರ ಪ್ರತಿನಿಧಿಗಳು ವಿಮಾನದ ಟಿಕೆಟ್ ಕಳುಹಿಸುವಂತೆ ಕೇಳಿದಾಗ, ‘ನಾವು ಕೊಡುವುದಿಲ್ಲ.. ನೀವು ಏನು ಬೇಕಾದರೂ ಮಾಡಿಕೊಳ್ಳಿ’ ಎಂದು ಬೆದರಿಕೆ ಹಾಕಿದರು.

ದಂಪತಿಯನ್ನು ನಂಬಿ 20 ಲಕ್ಷ ರೂಪಾಯಿ ನೀಡಿದ ಟ್ರಾವೆಲ್ ಏಜೆನ್ಸಿ ಪ್ರತಿನಿಧಿಗಳು ಬೆಳಗಾವಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳು ಪ್ರಸ್ತುತ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ವಿಚಾರ ತಿಳಿದ ಇತರೆ ಸಂತ್ರಸ್ತರು ದೂರು ನೀಡಲು ಸಿದ್ಧತೆ ನಡೆಸಿದ್ದಾರೆ.

ಡ್ರೀಮ್‌ಫ್ಲೈ ಏವಿಯೇಷನ್ ​​ಹೆಸರಿನಲ್ಲಿ ವಂಚನೆ: ಬೆಳಗಾವಿಯಲ್ಲಿ ನೆಲೆಸಿರುವ ಸುದರ್ಶನ್ ಮತ್ತು ಸುಜಾತಾ ಅವರು ಹಲವಾರು ವರ್ಷಗಳಿಂದ ಡ್ರೀಮ್‌ಫ್ಲೈ ಏವಿಯೇಷನ್ ​​ಮತ್ತು ಹಾಸ್ಪಿಟಾಲಿಟಿ ಅಕಾಡೆಮಿ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಕಾರ್ಪೊರೇಟ್ ಸಂಸ್ಥೆಗಳು ಮತ್ತು ತಂಡಗಳಿಗೆ ಸಣ್ಣ ವಿಮಾನಗಳು, ವಿವಿಧ ನಗರಗಳಿಗೆ ವಿಮಾನ ಟಿಕೆಟ್‌ಗಳು ಮತ್ತು ಪಂಚತಾರಾ ಹೋಟೆಲ್‌ಗಳಲ್ಲಿ ವಾಸ್ತವ್ಯದ ಮೂಲಕ ಹಣ ತೆಗೆದುಕೊಳ್ಳುತ್ತಿದ್ದಾರೆ.

ಕೆಲವು ತಿಂಗಳ ಹಿಂದೆ ಹೈದರಾಬಾದ್ ಟ್ರಾವೆಲ್ ಏಜೆನ್ಸಿಯ ಚಾಣಕ್ಯ ಮತ್ತು ಉತ್ತಮ್ ದಂಪತಿಗೆ ತಮ್ಮ ಗ್ರಾಹಕರಿಗೆ ವಿಮಾನ ಟಿಕೆಟ್ ಮತ್ತು ಹೋಟೆಲ್ ವಸತಿ ಒದಗಿಸುವಂತೆ ಕೇಳಿಕೊಂಡರು. ಸುದರ್ಶನ್ ಟಿಕೆಟ್ ಮೇಲೆ ಶೇ.50ರಷ್ಟು ರಿಯಾಯಿತಿ ನೀಡುವುದಾಗಿ ಹೇಳಿದ ಬಳಿಕ ಹತ್ತಾರು ಟಿಕೆಟ್ ಖರೀದಿಸಿದ್ದರು. ನಂತರ ರಿಯಾಯಿತಿಗಳನ್ನು ನೀಡಲಾಯಿತು.

ಬಳಿಕ ಸುದರ್ಶನ್ 20 ಲಕ್ಷ ರೂ.ಗಳನ್ನು ಠೇವಣಿ ಇಡುವಂತೆ ತಿಳಿಸಿದ್ದರು. ಟ್ರಾವೆಲ್ ಏಜೆನ್ಸಿಯವರು ನಾಲ್ಕು ತಿಂಗಳ ಹಿಂದೆ ಹಣ ಕೊಟ್ಟಿದ್ದಾರೆ. ನಂತರ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದಾಗ ಯಾವುದೇ ರಿಯಾಯಿತಿ ನೀಡಲಿಲ್ಲ. ಈ ಬಗ್ಗೆ ಸುದರ್ಶನ್ ಅವರನ್ನು ಕೇಳಿದಾಗ ಅವರ ಬಳಿಯಿಂದ ಯಾವುದೇ ಉತ್ತರ ಬರಲಿಲ್ಲ.

ಐ-ಫೋನ್, ಐ-ಪ್ಯಾಡ್ ವಂಚನೆ: ಟ್ರಾವೆಲ್ ಏಜೆನ್ಸಿಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸುದರ್ಶನ್ ಮತ್ತು ಸುಜಾತಾ ಕಡಿಮೆ ಬೆಲೆಗೆ ಐ-ಫೋನ್ ಮತ್ತು ಐ-ಪ್ಯಾಡ್ ನೀಡುವುದಾಗಿ ಹೇಳಿದ್ದರು. ಒಂದು ಮತ್ತು ಎರಡು ಐ-ಫೋನ್​ಗಳನ್ನು ರೂ.45 ಸಾವಿರ ಹಾಗೂ ರೂ.55 ಸಾವಿರಕ್ಕೆ ನೀಡಲಾಗಿತ್ತು. ಇದರಿಂದ ಚಾಣಕ್ಯನ ಕೆಲವು ಗೆಳೆಯರು ಹಾಗೂ ಸುದರ್ಶನ್ ಅವರಿಂದ ರಿಯಾಯಿತಿ ದರದ ವಿಮಾನ ಟಿಕೆಟ್ ಖರೀದಿಸಿದವರು ಸಾವಿರಾರು ರೂಪಾಯಿ ನೀಡಿ ಐ-ಫೋನ್, ಐ-ಪ್ಯಾಡ್ ಪಡೆಯುತ್ತಿದ್ದರು.

ಬೃಹತ್​ ಮೊತ್ತದ ಹಣ ಸಂಗ್ರಹವಾದಾಗ ಸುದರ್ಶನ್ ಸಂತ್ರಸ್ತರಿಗೆ ಐಫೋನ್, ಐಪ್ಯಾಡ್ ನೀಡಲಿಲ್ಲ. ಕೇಳಿದರೆ ಆಗೊಮ್ಮೆ.. ಈಗೊಮ್ಮೆ.. ಎಂದು ಓಡಿ ಹೋಗುತ್ತಿದ್ದರು. ಸಂತ್ರಸ್ತರು ಬೆಳಗಾವಿಯಲ್ಲಿ ಇಲ್ಲದ ಕಾರಣ ದೂರವಾಣಿ ಕರೆ ಮಾಡುತ್ತಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಪೊಲೀಸರಿಗೆ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದು, ಸಂಪೂರ್ಣ ತನಿಖೆ ಬಳಿಕ ಈ ಪ್ರಕರಣದ ಸತ್ಯಾಸತ್ಯೆತೆ ಹೊರ ಬಿಳಲಿದೆ.

ಓದಿ: IMA scam case: ವಿದೇಶಕ್ಕೆ ತೆರಳಲು ರೋಷನ್ ಬೇಗ್​​ಗೆ ಅನುಮತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.