ಅಂಕಿತಾ ಮರ್ಡರ್ ಮಿಸ್ಟರಿ: ಮೃತಳ ಗೆಳೆಯನ ವಿಚಾರಣೆ, ಅಪರಾಧ ದೃಶ್ಯ ಮರುಸೃಷ್ಟಿ

author img

By

Published : Sep 30, 2022, 4:38 PM IST

ಅಂಕಿತಾ ಮರ್ಡರ್ ಮಿಸ್ಟರಿ

ಅಂಕಿತಾ ಭಂಡಾರಿ ಸ್ನೇಹಿತ, ಜಮ್ಮುವಿನಲ್ಲಿ ಕೆಲಸ ಮಾಡುತ್ತಿರುವ ಪುಷ್ಪದೀಪ್ ಎಂಬಾತನನ್ನು ಎಸ್‌ಐಟಿ ಗುರುವಾರ ದಿನವಿಡೀ ವಿವರವಾಗಿ ವಿಚಾರಣೆ ನಡೆಸಿದ್ದು, ಹೇಳಿಕೆ ದಾಖಲಿಸಿಕೊಂಡಿದೆ. ಆರ್ಯ ಒಡೆತನದ, ಅಂಕಿತಾ ರಿಸೆಪ್ಷನಿಸ್ಟ್​ ಆಗಿ ಕೆಲಸ ಮಾಡುತ್ತಿದ್ದ ವನಂತ್ರಾ ರೆಸಾರ್ಟ್‌ನಲ್ಲಿ ಸೆಪ್ಟೆಂಬರ್ 14-15 ರಂದು ಪುಷ್ಪದೀಪ್ ತಂಗಿದ್ದ ಎಂದು ತಿಳಿದು ಬಂದಿದೆ.

ಹೃಷಿಕೇಶ: ರಿಸೆಪ್ಷನಿಸ್ಟ್ ಆಗಿದ್ದ ಯುವತಿ ಅಂಕಿತಾ ಕೊಲೆ ಪ್ರಕರಣದಲ್ಲಿ ಆಕೆಯ ಗೆಳೆಯ ಪುಷ್ಪದೀಪ್ ಎಂಬಾತನನ್ನು ಉತ್ತರಾಖಂಡ್ ವಿಶೇಷ ತನಿಖಾ ದಳ ಗುರುವಾರ ವಿಚಾರಣೆಗೊಳಪಡಿಸಿದೆ. ಈಗ ಎಸ್​ಐಟಿ ಈತನನ್ನು ಪ್ರಕರಣದ ಮುಖ್ಯ ಆರೋಪಿ, ಉಚ್ಚಾಟಿತ ಬಿಜೆಪಿ ನಾಯಕ ವಿನೋದ್​ ಆರ್ಯನ ಮಗ ಪುಲ್ಕಿತ್ ಆರ್ಯನ ಎದುರು ಹಾಜರುಪಡಿಸಿ ಅಡ್ಡವಿಚಾರಣೆ ನಡೆಸಲಿದೆ. ಅಲ್ಲದೇ ಎಸ್​ಐಟಿ ಅಪರಾಧ ಕೃತ್ಯದ ಮರುಸೃಷ್ಟಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದಲ್ಲಿ ಆರ್ಯನನ್ನು ಆತನ ಇಬ್ಬರು ಸಹಚರರೊಂದಿಗೆ ಈಗಾಗಲೇ ಬಂಧಿಸಲಾಗಿದೆ. ಅಂಕಿತಾ ಭಂಡಾರಿ ಸ್ನೇಹಿತ, ಜಮ್ಮುವಿನಲ್ಲಿ ಕೆಲಸ ಮಾಡುತ್ತಿರುವ ಪುಷ್ಪದೀಪ್ ಎಂಬಾತನನ್ನು ಎಸ್‌ಐಟಿ ಗುರುವಾರ ದಿನವಿಡೀ ವಿವರವಾಗಿ ವಿಚಾರಣೆ ನಡೆಸಿದ್ದು, ಹೇಳಿಕೆ ದಾಖಲಿಸಿಕೊಂಡಿದೆ. ಆರ್ಯ ಒಡೆತನದ, ಅಂಕಿತಾ ರಿಸೆಪ್ಷನಿಸ್ಟ್​ ಆಗಿ ಕೆಲಸ ಮಾಡುತ್ತಿದ್ದ ವನಂತ್ರಾ ರೆಸಾರ್ಟ್‌ನಲ್ಲಿ ಸೆಪ್ಟೆಂಬರ್ 14-15 ರಂದು ಪುಷ್ಪದೀಪ್ ತಂಗಿದ್ದ ಎಂದು ತಿಳಿದು ಬಂದಿದೆ. ಸೆಪ್ಟೆಂಬರ್ 16 ರಂದು ಪುಷ್ಪದೀಪ್ ಜಮ್ಮುವಿಗೆ ಮರಳಿದ್ದ.

ಪುಷ್ಪದೀಪ್ ಮತ್ತು ಪುಲ್ಕಿತ್ ಆರ್ಯ ಅವರನ್ನು ಮುಖಾಮುಖಿಯಾಗಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಆರ್ಯ ಮತ್ತು ಇತರ ಇಬ್ಬರು ಆರೋಪಿಗಳನ್ನು ತನಿಖೆಗಾಗಿ ಎಸ್‌ಐಟಿ ಮೂರು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದೆ.

ಸೆಪ್ಟೆಂಬರ್ 24 ರಂದು ಋಷಿಕೇಶದ ಚಿಲ್ಲಾ ಕಾಲುವೆಯ ಬಳಿ ಅಂಕಿತಾ ಶವ ಪತ್ತೆಯಾಗಿತ್ತು. ಅದಕ್ಕೂ ಮೊದಲು 19 ವರ್ಷದ ಅಂಕಿತಾ ಆರು ದಿನಗಳ ಕಾಲ ಕಾಣೆಯಾಗಿದ್ದಳು. ಅಂಕಿತಾಳೊಂದಿಗೆ ವಾಗ್ವಾದದ ನಂತರ ಆಕೆಯನ್ನು ಪುಲ್ಕಿತ್ ಆರ್ಯ ಕಾಲುವೆಗೆ ತಳ್ಳಿದ್ದಾನೆ ಎಂಬ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ. ಪುಲ್ಕಿತ್ ಜೊತೆಗೆ ಇನ್ನೂ ಇಬ್ಬರನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ. ಅಂಕಿತಾ ಕಾಣೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ರಜೆ ಮೇಲೆ ತೆರಳಿದ್ದ ಪಟ್ವಾರಿ ವೈಭವ್ ಮತ್ತು ಆತನ ಕಾರಿನ ಮಾಹಿತಿಗಳನ್ನು ಎಸ್​ಐಟಿ ಕಲೆ ಹಾಕುತ್ತಿದೆ.

ಇದನ್ನೂ ಓದಿ: ಅಂಕಿತಾ ಭಂಡಾರಿ ಕೊಲೆ ಪ್ರಕರಣ: ರೊಚ್ಚಿಗೆದ್ದ ಜನರಿಂದ ಬಿಜೆಪಿ ನಾಯಕನ ಪುತ್ರನ ಫ್ಯಾಕ್ಟರಿಗೆ ಬೆಂಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.