ETV Bharat / bharat

ದೆಹಲಿಯಲ್ಲಿ ಪ್ರಧಾನಿ ಮೋದಿ ಭೇಟಿಯಾದ ಆಂಧ್ರ ಸಿಎಂ ಜಗನ್: ಎನ್​ಡಿಎ ಸೇರುತ್ತಾ ವೈಎಸ್​ಆರ್​ಸಿಪಿ?

author img

By

Published : Aug 22, 2022, 2:18 PM IST

ಆಂಧ್ರಪ್ರದೇಶದ ಸಿಎಂ ಜಗನ್​ಮೋಹನ್​ ರೆಡ್ಡಿ ಅವರು ಇಂದು ಪ್ರಧಾನಿ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

jagan-mohan-meet-pm-narendra-modi
ದೆಹಲಿಯಲ್ಲಿ ಪ್ರಧಾನಿ ಮೋದಿ ಭೇಟಿಯಾದ ಆಂಧ್ರ ಸಿಎಂ ಜಗನ್

ನವದೆಹಲಿ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಇಂದು ಭೇಟಿ ಮಾಡಿ ಮಾತುಕತೆ ನಡೆಸಿದರು. ಎನ್​ಡಿಎ ಮೈತ್ರಿಕೂಟಕ್ಕೆ ಟಿಡಿಪಿ ಸೇರ್ಪಡೆ ಬಗ್ಗೆ ವರದಿಗಳು ಹರಿದಾಡುತ್ತಿರುವ ನಡುವೆ ಜಗನ್​ ಭೇಟಿಯಾಗಿರುವುದು ಕುತೂಹಲ ಹೆಚ್ಚಿಸಿದೆ.

ಸಿಎಂ ಜಗನ್​ಮೋಹ​ನ್​ ರೆಡ್ಡಿ ಅವರು ಭೇಟಿಯ ವೇಳೆ ತಿರುಪತಿ ವೆಂಕಟರಮಣನ ಫೋಟೋವನ್ನು ಕಾಣಿಕೆಯಾಗಿ ನೀಡಿದರು. ಈಚೆಗಷ್ಟೇ ಆಯ್ಕೆಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಉಪ ರಾಷ್ಟ್ರಪತಿ ಜಗದೀಪ್​ ಧನಕರ್​ ಅವರನ್ನೂ ಆಂಧ್ರ ಸಿಎಂ ಭೇಟಿ ಮಾಡಲಿದ್ದಾರೆ. ಚುನಾವಣೆಯ ವೇಳೆ ಈ ಇಬ್ಬರಿಗೆ ವೈಎಸ್​ಆರ್​ಸಿಪಿ ಬೆಂಬಲ ನೀಡಿತ್ತು.

ಎನ್​ಡಿಎ ಹೊಸ ಮಿತ್ರ ಯಾರು?: ಬಿಹಾರದಲ್ಲಿ ಜೆಡಿಯು ಬಿಜೆಪಿ ಸಖ್ಯ ಕಡಿದುಕೊಂಡ ಬಳಿಕ ಎನ್​ಡಿಎ ಹೊಸ ಮಿತ್ರನ ಹುಡುಕಾಟದಲ್ಲಿದೆ. ಈ ಮಧ್ಯೆ ಆಂಧ್ರಪ್ರದೇಶದ ಎರಡು ಪ್ರಮುಖ ಪಕ್ಷಗಳಾದ ಚಂದ್ರಬಾಬು ನಾಯ್ಡು ಅವರ ಟಿಡಿಪಿ, ಜಗನ್​ಮೋಹನ್​ ರೆಡ್ಡಿ ಅವರ ವೈಎಸ್​ಆರ್​ಸಿಪಿ ಎನ್​ಡಿಎ ಬಳಗ ಸೇರುವ ಸಾಧ್ಯತೆ ಇದೆ.

ಆದರೆ, ಆಂಧ್ರಪ್ರದೇಶದಲ್ಲಿ ಈ ಎರಡೂ ಪಕ್ಷಗಳು ವಿರುದ್ಧ ದಿಕ್ಕಿನಲ್ಲಿದ್ದು ಯಾವ ಪಕ್ಷ ಎನ್​ಡಿಎ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ರಾಷ್ಟ್ರಪತಿ ಚುನಾವಣೆಯ ವೇಳೆ ವೈಎಸ್​ಆರ್​ಸಿಪಿ ಎನ್​ಡಿಎ ಅಭ್ಯರ್ಥಿಗಳಿಗೆ ಬೆಂಬಲ ನೀಡಿತ್ತು.

ಇದನ್ನೂ ಓದಿ: ರಾಮೋಜಿಯವರ ಜೀವನ ಪಯಣ ಲಕ್ಷಾಂತರ ಜನರಿಗೆ ಸ್ಫೂರ್ತಿ: ಅಮಿತ್ ಶಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.