ETV Bharat / bharat

ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿಲ್ಲ... ನಮ್ಮಿಂದಲೇ ಅತೀ ಹೆಚ್ಚು ಕಾಂಡೋಮ್ ಬಳಕೆ: ಓವೈಸಿ

author img

By

Published : Oct 9, 2022, 7:27 AM IST

ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಕಡಿಮೆಯಾಗುತ್ತಿದೆ. ಜನಸಂಖ್ಯೆ ನಿಯಂತ್ರಣಕ್ಕಾಗಿ ನೀತಿ ಜಾರಿ ಮಾಡುವ ಅಗತ್ಯವಿಲ್ಲ ಎಂದಿದ್ದ ಅಸಾದುದ್ದೀನ್​ ಓವೈಸಿ, ಅಲ್ಪಸಂಖ್ಯಾತರ ಸಂಖ್ಯೆ ಏಕೆ ಕುಗ್ಗುತ್ತಿದೆ ಎಂಬುದಕ್ಕೆ ಕಾರಣ ನೀಡಿದ್ದಾರೆ.

aimim-chief-asaduddin-owaisi
ಅಸಾದುದ್ದೀನ್​ ಓವೈಸಿ ನೀಡಿದ್ರು ಕಾರಣ!

ನವದೆಹಲಿ: ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಎಲ್ಲ ಧರ್ಮಕ್ಕೂ ಅನ್ವಯಿಸುವ ಸಮಗ್ರ ನೀತಿಯನ್ನು ಜಾರಿಗೆ ತರಲು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಅವರು ಸಲಹೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ, ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿಲ್ಲ. ಕಾರಣ ನಾವು ಹೆಚ್ಚು ಕಾಂಡೋಮ್​ ಬಳಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಮೋಹನ್​ ಭಾಗವತ್​ರ ಜನಸಂಖ್ಯಾ ನಿಯಂತ್ರಣಕ್ಕಾಗಿ ಸಮಗ್ರ ನೀತಿ ಜಾರಿ ಮಾಡುವ ಸಲಹೆಯನ್ನು ವಿರೋಧಿಸಿದ್ದ ಓವೈಸಿ, ದೇಶಕ್ಕೆ ಅದರ ಅಗತ್ಯವಿಲ್ಲ ಎಂದು ಹೇಳಿದ್ದರು. ಇದೀಗ ಮತ್ತೊಂದು ಸಮರ್ಥನೆ ನೀಡಿದ್ದು, ಮೋಹನ್​ ಭಾಗವತ್​ ಅವರೇ ಚಿಂತಿಸಬೇಡಿ. ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿಲ್ಲ. ಇದಕ್ಕೆ ಕಾರಣವಿದೆ. ದೇಶದಲ್ಲಿ ಅತೀ ಹೆಚ್ಚು ಕಾಂಡೋಮ್​ ಬಳಕೆಯಾಗುತ್ತಿವೆ. ಅವುಗಳನ್ನು ಬಳಸುತ್ತಿರುವುದೇ ಮುಸ್ಲಿಮರು. ಹೀಗಾಗಿ ನಮ್ಮ ಸಂಖ್ಯೆ ಬೆಳೆಯುತ್ತಿಲ್ಲ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದಾರೆ.

  • #WATCH | On RSS chief Mohan Bhagwat's statement that there's a religious imbalance in India, AIMIM chief Asaduddin Owaisi says, "Don't fret, Muslim population is not increasing, it's rather falling... Who's using condoms the most? We are. Mohan Bhagwat won't speak on this." pic.twitter.com/kcaYLaNm7A

    — ANI (@ANI) October 8, 2022 " class="align-text-top noRightClick twitterSection" data=" ">

ಮುಂದುವರಿದು, ನಾವು​ ಕಾಂಡೋಮ್ ಬಳಸುತ್ತಿರುವುದರಿಂದ ಸಂತಾನೋತ್ಪತ್ತಿ ಕಡಿಮೆ ಆಗಿದೆ. ಹೀಗಾಗಿ ಭಾಗವತ್​ರ ಸಲಹೆ ಗೆದ್ದಿದೆ. ಮುಸ್ಲಿಂ ಜನಸಂಖ್ಯೆ ಹೆಚ್ಚುವ ಬದಲಾಗಿ ಕುಗ್ಗುತ್ತಿದೆ. ಈ ಬಗ್ಗೆ ಮಾತ್ರ ಮೋಹನ್​ ಭಾಗವತ್​ ಅವರು ಮಾತನಾಡುವುದಿಲ್ಲ ಎಂದರು.

ಆರ್​ಎಸ್​ಎಸ್​ ಕಚೇರಿಯಲ್ಲಿ ನಡೆದ ವಿಜಯದಶಮಿ ಕಾರ್ಯಕ್ರಮದಲ್ಲಿ ಮೋಹನ್​ ಭಾಗವತ್​​ ಅವರು ದೇಶದ ಉಳಿವಿಗಾಗಿ ಜನಸಂಖ್ಯೆಯನ್ನು ನಿಯಂತ್ರಿಸಬೇಕು. ಇದಕ್ಕಾಗಿ ನೀತಿ ಜಾರಿ ಮಾಡಬೇಕು. ಅದು ಎಲ್ಲ ಧರ್ಮಗಳಿಗೂ ಅನ್ವಯಿಸಬೇಕು ಎಂದು ಸಲಹೆ ನೀಡಿದ್ದರು.

ಇನ್ನು ನಿನ್ನೆಯಷ್ಟೇ ವರ್ಣ, ಜಾತಿ ಪದ್ಧತಿ ಹಳೆಯದಾಗಿದ್ದು, ಅದನ್ನು ಎಲ್ಲರೂ ಮರೆಯಬೇಕು. ಜಾತಿ ಪದ್ಧತಿಯನ್ನು ಬಿಟ್ಟು ಮುಂದುವರಿಯಬೇಕು ಎಂದು ಕೂಡ ಸಲಹೆ ಮಾಡಿದ್ದರು.

ಓದಿ: ಅಂಧೇರಿ ಈಸ್ಟ್​ ಉಪಚುನಾವಣೆ: ಶಿವಸೇನೆ ಪಕ್ಷದ ಚಿನ್ಹೆ ಹೆಸರು ಬಳಕೆ ಸ್ಥಗಿತ ಮಾಡಿ ಚುನಾವಣಾ ಆಯೋಗ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.