ETV Bharat / bharat

ಪಂಜಾಬ್​ ವಿಧಾನಸಭೆ ಚುನಾವಣೆಗೆ ಆಪ್‌ ತಾಲೀಮು.. ಸಿಖ್​ ಸಮುದಾಯದ ವ್ಯಕ್ತಿ ಸಿಎಂ ಅಭ್ಯರ್ಥಿ ಅಂದರು ಕೇಜ್ರಿ..

author img

By

Published : Jun 21, 2021, 4:38 PM IST

ಕುನ್ವರ್ ವಿಜಯ್ ಪ್ರತಾಪ್ ರಾಜಕಾರಣಿ ಅಲ್ಲ, ಅವರನ್ನು 'ಆಮ್ ಆದ್ಮಿ ಕಾ ಪೊಲೀಸ್​​ವಾಲಾ' ಎಂದು ಕರೆಯಲಾಗಿದೆ. ನಾವೆಲ್ಲರೂ ದೇಶಸೇವೆ ಮಾಡಲು ಇಲ್ಲಿದ್ದೇವೆ. ಈ ಮನೋಭಾವದಿಂದ ಅವರು ಇಂದು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಅಮೃತಸರದಲ್ಲಿ ಅರವಿಂದ್​ ಕೇಜ್ರಿವಾಲ್​​ ಹೇಳಿದ್ರು..

aravind
aravind

ಅಮೃತಸರ: 2022ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸಿಖ್​ ಸಮುದಾಯದ ವ್ಯಕ್ತಿ ಕಣಕ್ಕಿಳಿಯಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಇದು ಸಿಖ್ ಸಮುದಾಯದ ಹಕ್ಕು ಎಂದು ಕೇಜ್ರೀವಾಲ್​ ಹೇಳಿದ್ದಾರೆ.

ಮಹತ್ವದ ಬೆಳವಣಿಗೆಯಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಪಂಜಾಬ್‌ ಮಾಜಿ ಐಪಿಎಸ್ ಅಧಿಕಾರಿ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಅಮೃತಸರದಲ್ಲಿ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಆಮ್​ ಆದ್ಮಿ ಪಾರ್ಟಿ ಸೇರಿದ್ದಾರೆ.

ಕುನ್ವರ್ ವಿಜಯ್ ಪ್ರತಾಪ್ ರಾಜಕಾರಣಿ ಅಲ್ಲ, ಅವರನ್ನು 'ಆಮ್ ಆದ್ಮಿ ಕಾ ಪೊಲೀಸ್​​ವಾಲಾ' ಎಂದು ಕರೆಯಲಾಗಿದೆ. ನಾವೆಲ್ಲರೂ ದೇಶಸೇವೆ ಮಾಡಲು ಇಲ್ಲಿದ್ದೇವೆ. ಈ ಮನೋಭಾವದಿಂದ ಅವರು ಇಂದು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಅಮೃತಸರದಲ್ಲಿ ಅರವಿಂದ್​ ಕೇಜ್ರಿವಾಲ್​​ ಹೇಳಿದ್ರು.

ಮಾಜಿ ಐಪಿಎಸ್ ಅಧಿಕಾರಿ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಅವರು ಪಂಜಾಬ್​​ನಲ್ಲಿ 2015ರ ಕೋಟ್ಕಾಪುರ ಪೊಲೀಸ್ ಗುಂಡಿನ ಘಟನೆಯನ್ನು ತನಿಖೆ ಮಾಡುವ ಎಸ್ಐಟಿಯ ಭಾಗವಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.