ಕರ್ನಾಟಕ

karnataka

ಟೆಕ್ಕಿಗೆ ಬೆದರಿಸಿ ಬೈಕ್ ಕದ್ದೊಯ್ದ ಖದೀಮರು: ದೂರು ದಾಖಲು

By ETV Bharat Karnataka Team

Published : Feb 9, 2024, 1:22 PM IST

ಟೆಕ್ಕಿಯೊಬ್ಬರಿಗೆ ಬೆದರಿಸಿದ ಖದೀಮರು ಬೈಕ್ ಕದ್ದೊಯ್ದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

Etv Bharat
Etv Bharat

thieves-who-threatened-the-techie-and-stole-the-bike-file-a-complaint

ಬೆಂಗಳೂರು:ಸ್ನೇಹಿತನನ್ನ ಭೇಟಿಯಾಗಲು ಬಂದಿದ್ದ ಟೆಕ್ಕಿಯೊಬ್ಬರನ್ನ ಅಡ್ಡಗಟ್ಟಿದ ಕಿಡಿಗೇಡಿಗಳ ಗುಂಪೊಂದು ಆತನನ್ನ ಬೆದರಿಸಿ ಬೈಕ್​ ಕೀ ಕಸಿದು ಪರಾರಿಯಾದ ಘಟನೆ ಬುಧವಾರ ರಾತ್ರಿ 1 ಗಂಟೆ ಸುಮಾರಿಗೆ ಚಂದ್ರಾ ಲೇಔಟ್​ನ ಬಿಸಿಸಿ ಲೇಔಟಿನಲ್ಲಿ ನಡೆದಿದೆ. ಘಟನೆ ಸಂಬಂಧ ಟೆಕ್ಕಿ ಇಮ್ಯಾನ್ಯುಯಲ್ ನೀಡಿದ ದೂರಿನ ಮೇರೆಗೆ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ಇಮ್ಯಾನ್ಯುಯೆಲ್ ತಮ್ಮ ಸ್ನೇಹಿತನಿಗೆ ಡೆಬಿಟ್ ಕಾರ್ಡ್ ಕೊಡುವುದಕ್ಕಾಗಿ ಬುಧವಾರ ರಾತ್ರಿ 1 ಗಂಟೆ ಸುಮಾರಿಗೆ ಚಂದ್ರಾ ಲೇಔಟ್​ನ ಬಿಸಿಸಿ ಲೇಔಟ್​ಗೆ ಬಂದಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ನಾಲ್ವರು ಯುವಕರ ಗುಂಪೊಂದು ಇಮ್ಯಾನ್ಯುಯೆಲ್ ಬಳಿ, 'ರಾತ್ರಿ ಇಲ್ಲಿ ಏನ್ ಮಾಡ್ತಿದ್ದೀಯಾ? ಯಾರೋ ನೀನು? ಬ್ಯಾಗಲ್ಲಿ ಏನಿದೆ? ದುಡ್ಡೇನಾದ್ರೂ ಇದೆಯಾ ಅಂತ ಆವಾಜ್ ಹಾಕಿ ಬ್ಯಾಗ್ ಕಸಿದು ಚೆಕ್ ಮಾಡಿದ್ದಾರೆ. ನಂತರ ಆತನ ಬಳಿ ಹಣವಿಲ್ಲ ಎಂದು ತಿಳಿದಾಗ ಬೈಕ್ ಕೀ ಕಸಿದುಕೊಂಡು ಆಟೋದಲ್ಲಿ ತೆರಳಿದ್ದಾರೆ.

ಈ ವೇಳೆ ತನ್ನ ಬೈಕ್ ಕೀಗಾಗಿ ಇಮ್ಯಾನ್ಯುಯೆಲ್ ಆಟೋ ಹಿಂದೆ ಓಡಲಾರಂಭಿಸಿದ್ದಾರೆ. ಸ್ವಲ್ಪ ದೂರ ಹೋದ ಆರೋಪಿಗಳು ಆಟೋವನ್ನು ಹಿಂದಿರುಗಿಸಿಕೊಂಡು ಬಂದು ಇಮ್ಯಾನ್ಯುಯೆಲ್ ಮೇಲೆ ಹಲ್ಲೆ ನಡೆಸಿ ಬೈಕ್ ಕದ್ದೊಯ್ದಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಕುರಿತು ಇಮ್ಯಾನ್ಯುಯೆಲ್ ತಕ್ಷಣ ಪೊಲೀಸ್ ನಿಯಂತ್ರಣ ಕೋಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಪುನಃ ಅದೇ ಸ್ಥಳಕ್ಕೆ ಬೈಕ್ ತಂದು ನಿಲ್ಲಿಸಿದ ಕಿಡಿಗೇಡಿಗಳು: ವಿಚಿತ್ರ ಎಂದರೆ ಗುರುವಾರ ಸಂಜೆ ವೇಳೆಗೆ ಆರೋಪಿಗಳು ಪುನಃ ಅದೇ ಸ್ಥಳಕ್ಕೆ ಬೈಕ್ ತಂದು ನಿಲ್ಲಿಸಿ ಎಸ್ಕೇಪ್ ಆಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಆಟೋ ನಂಬರ್ ಪ್ಲೇಟ್ ಆಧರಿಸಿ ಅವರ ಪತ್ತೆಗಾಗಿ ಶೋಧ ಆರಂಭಿಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಸಂಚಾರ ನಿಮಯ ಉಲ್ಲಂಘಿಸಿದವರಿಗೆ ಶಾಕ್: 50 ಸಾವಿರಕ್ಕೂ ಹೆಚ್ಚು ದಂಡದ ಮೊತ್ತ ದಾಟಿದವರ ಮನೆ ಬಾಗಿಲಿಗೆ ಪೊಲೀಸರು!

ABOUT THE AUTHOR

...view details