ಕರ್ನಾಟಕ

karnataka

ಹುಬ್ಬಳ್ಳಿ: ವೀರಶೈವ ಜಂಗಮ ಪದ್ಧತಿಯಂತೆ ನೇಹಾ ಹಿರೇಮಠ ಅಂತ್ಯಕ್ರಿಯೆ - Neha Hiremath Cremated

By ETV Bharat Karnataka Team

Published : Apr 19, 2024, 5:35 PM IST

ಹುಬ್ಬಳ್ಳಿ ನಗರದ ಮಂಟೂರು ರೋಡ್​​ ರುದ್ರಭೂಮಿಯಲ್ಲಿ ನಿನ್ನೆ ಕಾಲೇಜು ಕ್ಯಾಂಪಸ್‌ನಲ್ಲಿ ಕೊಲೆಗೀಡಾದ ಯುವತಿ ನೇಹಾ ಹಿರೇಮಠ ಅವರ ಮೃತದೇಹದ ಅಂತ್ಯಕ್ರಿಯೆ ನಡೆಯಿತು.

Neha Anthim Yatra procession
ನೇಹಾಳ ಅಂತಿಯ ಯಾತ್ರೆ ಮೆರವಣಿಗೆ

ಹುಬ್ಬಳ್ಳಿ:ಇಲ್ಲಿನಬಿವಿಬಿಕಾಲೇಜು‌ ಕ್ಯಾಂಪಸ್​‌ನಲ್ಲಿ ಗುರುವಾರ ಸಂಜೆ ದುಷ್ಕರ್ಮಿಯಿಂದ ಬರ್ಬರವಾಗಿ ಕೊಲೆಯಾದ ನೇಹಾ ಹಿರೇಮಠ ಮೃತದೇಹದ ಅಂತ್ಯಸಂಸ್ಕಾರ ಇಂದು ನೆರವೇರಿತು.‌ ನಗರದ ಮಂಟೂರು ರೋಡ್​​ನಲ್ಲಿರುವ ರುದ್ರಭೂಮಿಯಲ್ಲಿ ವೀರಶೈವ ಜಂಗಮ ವಿಧಿವಿಧಾನಗಳಂತೆ ಕುಟುಂಬಸ್ಥರು ಅಂತ್ಯಸಂಸ್ಕಾರ ನಡೆಸಿದರು.

ಇದಕ್ಕೂ ಮುನ್ನ ಮೃತದೇಹದ ಅಂತಿಯ ಯಾತ್ರೆ ನಡೆಯಿತು. ಬಸವ ನಗರದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಅಂತಿಮ ಯಾತ್ರೆ, ಮಂಟೂರು ರಸ್ತೆಯಲ್ಲಿರುವ ಸ್ಮಶಾನಕ್ಕೆ ಆಗಮಿಸಿತು. ಮೂರುಸಾವಿರ ಮಠದ ಗುರು ಸಿದ್ದರಾಜಯೋಗೀಂದ್ರ ಸ್ವಾಮೀಜಿ, ಫಕೀರ ದಿಂಗಾಲೇಶ್ವರ ಸ್ವಾಮೀಜಿ‌ ಸೇರಿದಂತೆ ಸಾವಿರಾರು ಜನರು ಅಂತಿಮ ದರ್ಶನ ಪಡೆದರು.‌

ಮತ್ತೊಂದೆಡೆ, ಎಬಿವಿಪಿ ಕಾರ್ಯಕರ್ತರು ಬಿವಿಬಿ ಕಾಲೇಜು ಎದುರು ಮುಖ್ಯರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ನೇಹಾ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. 'ಜಸ್ಟಿಸ್ ಫಾರ್ ನೇಹಾ' ಎಂದು ಘೋಷಣೆ ಕೂಗಿದರು. ಹಂತಕ ಫಯಾಜ್‌ನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂಓದಿ:ನೇಹಾ ಹಿರೇಮಠ ಕೊಲೆ ಪ್ರಕರಣ: "ಎನ್​ಕೌಂಟರ್ ಕಾನೂನು ಬರಲೇಬೇಕು": ಸಂತೋಷ್​ ಲಾಡ್ - Minister Santosh Lad

ABOUT THE AUTHOR

...view details