ಕರ್ನಾಟಕ

karnataka

ಪ್ರೀತಿಗೆ ವಿರೋಧ, ಬೇರೊಬ್ಬನ ಜೊತೆ ಮದುವೆ: ಗದಗದಲ್ಲಿ ಪ್ರೇಮಿಗಳು ಆತ್ಮಹತ್ಯೆ - lovers suicide

By ETV Bharat Karnataka Team

Published : Apr 13, 2024, 11:02 AM IST

ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಯುವಕ - ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರೇಮಿಗಳು ಆತ್ಮಹತ್ಯೆ
ಪ್ರೇಮಿಗಳು ಆತ್ಮಹತ್ಯೆ

ಗದಗ :ಬೇರೊಬ್ಬನ ಜೊತೆ ಮದುವೆ ಮಾಡಿದಕ್ಕೆ ಮನನೊಂದು ಯುವತಿ ತನ್ನ ಪ್ರಿಯಕರನ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್​ ಪಟ್ಟಣದ ಹೊರವಲಯದ ಜಮೀನೊಂದರಲ್ಲಿ ನಡೆದಿದೆ. ಅಪ್ಪಣ್ಣ ಕನಕಪ್ಪ ಗೊರಕಿ (28) ಹಾಗೂ ಲಲಿತಾ ರಾಜೇಂದ್ರ ಹಲಗೇರಿ (24) ಮೃತ ಪ್ರೇಮಿಗಳು.

ಅಪ್ಪಣ್ಣ ಕನಕಪ್ಪ ಗೊರಕಿ ಮತ್ತು ಲಲಿತಾ ರಾಜೇಂದ್ರ ಹಲಗೇರಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಮನೆಯವರು ಈ ಜೋಡಿಯ ಪ್ರೀತಿಯನ್ನು ನಿರಾಕರಿಸಿ ಮದುವೆಗೆ ಒಪ್ಪಿಗೆ ಕೊಟ್ಟಿರಲಿಲ್ಲ ಎನ್ನಲಾಗಿದೆ. ಇದೇ ತಿಂಗಳು ಏಪ್ರಿಲ್​ 4 ರಂದು ಲಲಿತಾಳನ್ನು ಬೇರೊಬ್ಬನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಹೀಗಾಗಿ, ಪ್ರೀತಿಸಿದವರ ಜೊತೆ ವಿವಾಹವಾಗದ ಹಿನ್ನೆಲೆ ಮನನೊಂದು ಜೋಡಿ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ನರೇಗಲ್​ ಪೊಲೀಸರು‌ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ :ಕೊಪ್ಪಳ: ಪತ್ನಿ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಪತಿ - Koppala Crime Case

ABOUT THE AUTHOR

...view details