ಕರ್ನಾಟಕ

karnataka

ವೃದ್ಧಾಶ್ರಮಕ್ಕೆ‌ ಕ್ಲೀನಿಂಗ್ ಮಾಡಲು ಬಂದು ₹ 1 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ತಂದೆ-ಮಗ ಅರೆಸ್ಟ್​ - FATHER AND SON ARRESTED

By ETV Bharat Karnataka Team

Published : Apr 15, 2024, 3:11 PM IST

Updated : Apr 15, 2024, 4:18 PM IST

ಮಾಲೀಕರ ಮನೆಯಲ್ಲಿ 1 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ತಂದೆ-ಮಗನನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

father-and-son-arrested-for-steal-gold-jewellery-in-bengaluru-old-age-home
ವೃದ್ದಾಶ್ರಮಕ್ಕೆ‌ ಕ್ಲೀನಿಂಗ್ ಮಾಡಲು ಬಂದು ₹1 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ತಂದೆ-ಮಗನ ಬಂಧನ

ವೃದ್ಧಾಶ್ರಮಕ್ಕೆ‌ ಕ್ಲೀನಿಂಗ್ ಮಾಡಲು ಬಂದು ₹ 1 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ತಂದೆ-ಮಗ ಅರೆಸ್ಟ್​

ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಮಾಲೀಕರ ಮನೆಯಲ್ಲಿದ್ದ 1 ಕೋಟಿ ಮೌಲ್ಯದ 1.25 ಕೆ.ಜಿ ವಜ್ರ ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ ಆರೋಪದಡಿ ತಂದೆ-ಮಗನನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಡಬಗೆರೆಯ ಕಮಲ ಎಂಬುವರು ನೀಡಿದ ದೂರಿನ ಮೇರೆಗೆ ಬಳ್ಳಾರಿಯ ಕಂಪ್ಲಿ ಮೂಲದ ಮಿರ್ಜಾ ಸೈಯದ್ ಬೇಗ್ (19) ಹಾಗೂ ಈತನ ತಂದೆ ಮಿರ್ಜಾ ದಾದಾ ನೂರುದ್ದಿನ್ ಬೇಗ್ ಎಂಬುವರನ್ನ ಬಂಧಿಸಿ 1.25 ಕೆ.ಜಿ ಚಿನ್ನಾಭರಣ, 2 ಕೆ.ಜಿ. ಬೆಳ್ಳಿ ವಸ್ತುಗಳು, 21.5 ಲಕ್ಷ ನಗದು ಹಾಗೂ ಇನ್ನಿತರ ಪೂಜಾ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಮಲ ಅವರು ಕಡಬಗರೆಯಲ್ಲಿ ಸಂದ್ಯ ಕಿರಣ ಓಲ್ಡ್ ಏಜ್ ಹೋಂ ಮತ್ತು ರಿಹೆಬಿಲೇಷನ್ ಸೆಂಟರ್ ನಡೆಸುತ್ತಿದ್ದಾರೆ. ಅವರು ಆಶ್ರಮದ ನೆಲಮಹಡಿಯಲ್ಲಿ ವಾಸವಾಗಿದ್ದರು‌.‌‌‌‌ ಕಳೆದ ಮೂರು ವರ್ಷಗಳಿಂದ ಆರೋಪಿ ಮಿರ್ಜಾ ಸೈಯದ್ 15 ದಿನಕ್ಕೊಮ್ಮೆ ಇಲ್ಲಿಗೆ ಬಂದು ಕ್ಲೀನಿಂಗ್ ಕೆಲಸ ಮಾಡಿ ಹೋಗುತ್ತಿದ್ದ. ಅದೇ ರೀತಿ ಏಪ್ರಿಲ್ 9ರಂದು ಕ್ಲೀನಿಂಗ್ ಕೆಲಸ ಮುಗಿಸಿಕೊಂಡು ಹೋಗುವಾಗ ನೆಲಮಹಡಿಯ ಮನೆಯಲ್ಲಿದ್ದ ಕಮಲ ಅವರಿಗೆ‌ ಪ್ರಾಪರ್ಟಿ ಖರೀದಿಸಲು ಮಗ ಹಣ ನೀಡಿದ್ದ. ಇದೇ ಹಣ ಎಣಿಸುತ್ತಿರುವುದನ್ನ ಸೈಯದ್​ ಗಮನಿಸಿದ್ದಾನೆ. ಅಲ್ಲದೆ ಚಿನ್ನಾಭರಣ ಇರುವುದನ್ನ ನೋಡಿದ್ದಾನೆ. ಯುಗಾದಿ ಹಬ್ಬ ಹಿನ್ನೆಲೆಯಲ್ಲಿ‌ ಕಮಲ ಅವರು ಬನಶಂಕರಿಯಲ್ಲಿರುವ ತಮ್ಮ ಪುತ್ರನ ಮನೆಗೆ ತೆರಳಿದ್ದಳು. ಈ ಬಗ್ಗೆ ಅರಿತು ಕೂಡಲೇ ತಂದೆಗೆ ಕರೆ‌ ಮಾಡಿ ಕಳ್ಳತನ ಮಾಡುವ ಬಗ್ಗೆ ಮಗ ಪ್ರಸ್ತಾಪಿಸಿದ್ದಾನೆ‌. ಇದಕ್ಕೆ ಒಪ್ಪಿದ ತಂದೆ ಅದೇ ದಿನ ರಾತ್ರಿ ನಗರಕ್ಕೆ ಕರೆಯಿಸಿಕೊಂಡಿದ್ದ.‌ ಪೂರ್ವಸಂಚಿನಂತೆ ಮಾಲೀಕರು ಯಾರೂ ಇಲ್ಲದಿರುವುದನ್ನ ಗಮನಿಸಿ ಮನೆಗೆ ನುಗ್ಗಿ 1 ಕೋಟಿ ಮೌಲ್ಯದ ಚಿನ್ನಾಭರಣ ಎಗರಿಸಿದ್ದಾನೆ‌. ಸಾಕ್ಷ್ಯಾಧಾರ ನಾಶಪಡಿಸಲು ಮನೆ ತುಂಬಾ ಖಾರದಪುಡಿ ಎರಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, "ಕ್ಲೀನಿಂಗ್ ಕೆಲಸದ ಜೊತೆಗೆ ಮಿರ್ಜಾ ಸೈಯದ್ ಗಾರೆ ಕೆಲಸ ಮಾಡುತ್ತಿದ್ದ. ಆಶ್ರಮದ ಸಮೀಪದಲ್ಲೇ ವಾಸವಾಗಿದ್ದ.‌ ಕಳ್ಳತನ ಮಾಡಿದ ಬಳಿಕ ಚಿನ್ನಾಭರಣವನ್ನು ಮನೆಯಲ್ಲಿ ಇಟ್ಟುಕೊಂಡಿದ್ದ. ಅಲ್ಲದೆ ಆಟೋ ಚಾಲಕನಾಗಿದ್ದ ತಂದೆಗೆ ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿದ್ದರಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಚಿನ್ನಾಭರಣ ಕಳ್ಳತನ ಮಾಡಿದರೆ ಸುಲಭವಾಗಿ ಜೀವನ ಕಳೆಯಬಹುದು ಎಂದು ಭಾವಿಸಿ ಕೃತ್ಯವೆಸಗಿದ್ದ. ಸಂಚು ರೂಪಿಸಿ ಬಳ್ಳಾರಿಗೆ ತೆರಳಲು‌ ಮುಂದಾದಾಗ ಪ್ರಕರಣ ದಾಖಲಿಸಿಕೊಂಡ‌ ಇನ್ಸ್​ಪೆಕ್ಟರ್ ಮುರಳೀಧರ್ ನೇತೃತ್ವದ ತಂಡ ಇಬ್ಬರನ್ನ ಬಂಧಿಸಿದೆ" ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನ ಅಪಾರ್ಟ್​ಮೆಂಟ್​​ನಲ್ಲಿ ಶಾರ್ಟ್ ಸರ್ಕ್ಯೂಟ್​: ನಾಲ್ಕುವರೆ ವರ್ಷದ ಮಗು ಸಾವು - boy dies

Last Updated : Apr 15, 2024, 4:18 PM IST

ABOUT THE AUTHOR

...view details