ಕರ್ನಾಟಕ

karnataka

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ 75 ಲಕ್ಷ ಮೌಲ್ಯದ ಚಿನ್ನದ ಪ್ರಭಾವಳಿ ಅರ್ಪಿಸಿದ ಭಕ್ತ

By ETV Bharat Karnataka Team

Published : Feb 25, 2024, 8:35 PM IST

ಹೈದರಾಬಾದ್‌ ಮೂಲದ ಎ.ಆರ್ ಮಹೇಶ್ ಮತ್ತು ರಾಧಿಕಾ ರೆಡ್ಡಿ ದಂಪತಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ 75 ಲಕ್ಷ ಮೌಲ್ಯದ ಚಿನ್ನದ ಪ್ರಭಾವಳಿ ಅರ್ಪಿಸಿದ್ದಾರೆ.

devotee gave gold to Kukke Subrahmanya temple
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ 75 ಲಕ್ಷ ಮೌಲ್ಯದ ಚಿನ್ನದ ಪ್ರಭಾವಳಿ ಅರ್ಪಿಸಿದ ಭಕ್ತ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಹೈದರಾಬಾದ್‌ನ ದಾನಿಗಳಾದ ಎ.ಆರ್ ಮಹೇಶ್- ರಾಧಿಕಾ ರೆಡ್ಡಿ ದಂಪತಿ ಚಿನ್ನದ ಪ್ರಭಾವಳಿಯನ್ನು ಕೊಡುಗೆ ರೂಪದಲ್ಲಿ ಸಮರ್ಪಿಸಿದರು. ಇದರ ಒಟ್ಟು ತೂಕ 3 ಕೆಜಿ 400ಗ್ರಾಂ ಇದ್ದು, ಇದರಲ್ಲಿ 1 ಕೆಜಿ 200 ಗ್ರಾಂ ಚಿನ್ನ ಹಾಗೂ 3 ಕೆಜಿ 200ಗ್ರಾಂ ಬೆಳ್ಳಿ ಸೇರಿದಂತೆ ಒಟ್ಟು ತಯಾರಿಕಾ ಮೊತ್ತ 75 ಲಕ್ಷ ರೂಪಾಯಿ ಖರ್ಚಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ 75 ಲಕ್ಷ ಮೌಲ್ಯದ ಚಿನ್ನದ ಪ್ರಭಾವಳಿ ಅರ್ಪಿಸಿದ ಭಕ್ತ

ಮಾತ್ರವಲ್ಲದೇ ಅವರು ಶ್ರೀ ಕ್ಷೇತ್ರಕ್ಕೆ 4 ರಿಂದ 5ಲಕ್ಷ ರೂ. ಮೊತ್ತದ ಹೂವಿನ ಉಡುಗೊರೆ ನೀಡಿದ್ದಾರೆ. ಈ ಹಿಂದೆ ಇವರು ಶ್ರೀ ಕ್ಷೇತ್ರಕ್ಕೆ ನಾಲ್ಕು ಪುಗಂನೂರು ಗೋವುಗಳು, ಭೋಜನ ಶಾಲೆಗೆ ಅಡುಗೆ ತಯಾರಿಸಲು ಬೇಕಾಗುವ ಪರಿಕರಗಳನ್ನು ನೀಡಿದ್ದರು. ಪ್ರಸ್ತುತ ಸಮರ್ಪಿಸಿದ ಚಿನ್ನದ ಪ್ರಭಾವಳಿಯನ್ನು ಪ್ರಸಿದ್ಧ ಶಿಲ್ಪಿಗಳಾದ ಅಲಗ್ ರಾಜ್ ಸ್ಥಪತಿ ಪದ್ಮಾಲಯ ಆರ್ಟ್ ಹಾಗೂ ಕ್ರಾಫ್ಟ್ ರಾಜೇಶ್ವರಿನಗರ ಬೆಂಗಳೂರು ಇವರಿಂದ ಮಾಡಿಸಲಾಗಿದ್ದು, ಬಹಳ ಸುಂದರವಾಗಿ ಮೂಡಿ ಬಂದಿದೆ. ಕುಕ್ಕೆ ಸುಬ್ರಹ್ಮಣ್ಯ ಮಾತ್ರವಲ್ಲದೇ ಇತರೆ ಪುಣ್ಯ ಕ್ಷೇತ್ರಗಳಾದ ಧರ್ಮಸ್ಥಳ, ಕೊಲ್ಲೂರು, ಶಿರಡಿ, ರಾಜರಾಜೇಶ್ವರಿ ಬೆಂಗಳೂರು ಸೆರಿದಂತೆ ಮುಂತಾದ ಹಲವಾರು ಪುಣ್ಯ ಕ್ಷೇತ್ರಗಳಲ್ಲಿ ಚಿನ್ನದ ಕೆತ್ತನೆಯ ಕೆಲಸವನ್ನು ಮಾಡಿದ ಅನುಭವ ಇವರಿಗಿದೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ 75 ಲಕ್ಷ ಮೌಲ್ಯದ ಚಿನ್ನದ ಪ್ರಭಾವಳಿ ಅರ್ಪಿಸಿದ ಭಕ್ತ

ಈ ಸಂದರ್ಭದಲ್ಲಿ ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ನಿಂಗಯ್ಯ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ಸದಸ್ಯರುಗಳಾದ ಪಿ.ಎಸ್.ಎನ್ ಪ್ರಸಾದ್, ಮನಮೋಹನ್ ರೈ, ಶ್ರೀ ವತ್ಸ ಬೆಂಗಳೂರು, ವನಜಾ ವಿ ಭಟ್, ಪ್ರಸನ್ನ ದರ್ಬೆ, ಶೋಭಾ ಗಿರಿಧರ್, ಲೋಕೇಶ್ ಮಂಡೋಕಜೆ, ಮನೋಜ್, ಸತೀಶ್ ಕೂಜುಕೊಡು, ಶ್ರೀ ಕುಮಾರ್, ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ:ಸಕಲ ಸರ್ಕಾರಿ ಗೌರವದೊಂದಿಗೆ ನಾಳೆ ರಾಜಾ ವೆಂಕಟಪ್ಪ ನಾಯಕ ಅಂತ್ಯಸಂಸ್ಕಾರ: ಸರ್ಕಾರದ ಆದೇಶ

ABOUT THE AUTHOR

...view details