ಕರ್ನಾಟಕ

karnataka

ಎಸ್​ಇಪಿ, ಟಿಎಸ್​ಪಿ ಹಣ ಬಳಕೆ ಬಗ್ಗೆ ಬಿಜೆಪಿಯವರಿಗೆ ಕೇಳುವ ನೈತಿಕತೆ ಇಲ್ಲ: ಸಿಎಂ ಸಿದ್ದರಾಮಯ್ಯ - Lok Sabha Election 2024

By ETV Bharat Karnataka Team

Published : May 2, 2024, 7:09 AM IST

Updated : May 2, 2024, 8:30 AM IST

ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳಿಗೆ ಮೀಸಲಿಟ್ಟ ಹಣವನ್ನು ಅವರಿಗೆ ತಲುಪಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮೋದಿ ಆರೋಪಿಸಿದ್ದರು.

CM Siddaramaiah spoke.
ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಕಲಬುರಗಿ:ಎಸ್​ಇಪಿ ಹಾಗೂ ಟಿಎಸ್​ಪಿ ಕಾಯ್ದೆ ಮೀಸಲು ಹಣ ಬೇರೆ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬೆರಳು ಮಾಡುವ ನೈತಿಕ ಹಕ್ಕು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಬುಧವಾರ ರಾತ್ರಿ ಜೇವರ್ಗಿ ಪಟ್ಟಣದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳಿಗೆ ಮೀಸಲಿಟ್ಟ ಹಣವನ್ನು ಅವರಿಗೆ ತಲುಪಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮೋದಿ ಹೇಳುತ್ತಿದ್ದಾರೆ. ಈ ಬಗ್ಗೆ ಜಾಹೀರಾತು ನೀಡಿದ್ದಾರೆ. ರಾಜ್ಯದ ಕಡೆ ಬೆರಳು‌ ಮಾಡುವ ಮೋದಿಯವರೇ ಹತ್ತು ವರ್ಷದಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನೀವು ಈ ಕಾಯ್ದೆಯನ್ನು ಜಾರಿಗೆ ತಂದಿದ್ದೀರಾ? ಎಂದು ಸಿಎಂ‌ ಪ್ರಶ್ನೆ ಮಾಡಿದ್ದರು.

ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಹಿತದೃಷ್ಟಿಯಿಂದ 2013ರಲ್ಲಿ ರಾಜ್ಯದಲ್ಲಿ ನಾವು ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಬಿಜೆಪಿ ಆಡಳಿತದಲ್ಲಿರುವ ಯಾವುದಾದರೂ ಒಂದು ರಾಜ್ಯದಲ್ಲಿಯಾದ್ರೂ ಎಸ್​​​ಇಪಿ ಟಿಎಸ್ಪಿ ಕಾಯ್ದೆ ಜಾರಿಯಲ್ಲಿದೆಯಾ? ಎಂದು ಸಿಎಂ ಮರುಪ್ರಶ್ನೆ ಮಾಡಿದರು.

ದಲಿತರ ಅಭಿವೃದ್ಧಿ ಬಗ್ಗೆ ಬದ್ಧತೆ ಕಾಳಜಿ ಇಲ್ಲದೇ ಇರುವ ನೀವು ಕರ್ನಾಟಕದಲ್ಲಿ ಕಾಯ್ದೆ ಬಗ್ಗೆ ಹಣದ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗಿದೆಯಾ ಎಂದು ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಸುಳ್ಳು ಆಡಿದ್ದೆ ಬಂತು ಯಾವದು ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ.

ಭಾವನಾತ್ಮಕವಾಗಿ ಮಾತನಾಡಿ ಜನರ ದಾರಿ ತಪ್ಪಿಸಿ ಮತ ಪಡೆದು ಆಡಳಿತ ನಡೆಸಿದ್ದಾರೆ. ಆದರೆ ಈ ಬಾರಿ ಮೋದಿ ಸುಳ್ಳಿನ ಆಟ ಜನರಿಗೆ ಗೊತ್ತಾಗಿದೆ. ಜನ ಮತ ಕೊಡದಿರಲು ನಿರ್ಧರಿಸಿದ್ದಾರೆ. ಮತ ಬರುವುದಿಲ್ಲ ಅನ್ನೋದು ಅರಿತು ಮೋದಿ ಹತಾಶೆಯಗೊಂಡಿದ್ದು, ಈಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿಯನ್ನು ಬೈದಾಡಿಕೊಂಡು ತಿರುಗುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂಓದಿ:ನನ್ನೊಂದಿಗೆ ಸ್ವತಃ ಸಿದ್ದರಾಮಯ್ಯನವರೇ ಕೈ ಜೋಡಿಸಿದ್ದರು: ಜನಾರ್ದನ ರೆಡ್ಡಿ - Janardhana Reddy

Last Updated : May 2, 2024, 8:30 AM IST

ABOUT THE AUTHOR

...view details