ಕರ್ನಾಟಕ

karnataka

ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ ಪ್ರಧಾನಿ: 'ಆರತಿ' ವೇಳೆ ಸೇನಾ ಹೆಲಿಕಾಪ್ಟರ್‌ಗಳಿಂದ ಪುಷ್ಪವೃಷ್ಟಿ

By ANI

Published : Jan 22, 2024, 1:08 PM IST

Updated : Jan 22, 2024, 2:35 PM IST

Sriram Pran Pratishtha: ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ 'ಆರತಿ' ವೇಳೆ ಅಯೋಧ್ಯೆಯ ಮೇಲೆ ಸೇನಾ ಹೆಲಿಕಾಪ್ಟರ್‌ಗಳಿಂದ ಪುಷ್ಪವೃಷ್ಟಿ ಸುರಿಸಲಾಯಿತು.

Pran Pratishtha  ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ  ಸೇನಾ ಹೆಲಿಕಾಪ್ಟರ್‌ಗಳಿಂದ ಪುಷ್ಪವೃಷ್ಟಿ  ಪುಷ್ಪವೃಷ್ಟಿ  Army helicopters showered flowers
ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ: 'ಆರತಿ' ವೇಳೆ ಅಯೋಧ್ಯೆಯ ಮೇಲೆ ಸೇನಾ ಹೆಲಿಕಾಪ್ಟರ್‌ಗಳಿಂದ ಪುಷ್ಪವೃಷ್ಟಿ

ಅಯೋಧ್ಯೆ (ಉತ್ತರ ಪ್ರದೇಶ):ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿತ ಸಮಯದಲ್ಲಿ ಮೂರ್ತಿಯ ಪ್ರತಿಷ್ಠಾಪನೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಮಧ್ಯಾಹ್ನದ ಅಭಿಜಿತ ಮುಹೂರ್ತದಲ್ಲಿ ಎಲ್ಲಾ ಶಾಸ್ತ್ರೀಯ ನಿಯಮಾವಳಿಗಳನ್ನು ಅನುಸರಿಸಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಈ ಜರುಗಿತು. ಸಾಮಾನ್ಯವಾಗಿ, ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಏಳು ಅಧಿವಾಸಗಳಿದ್ದು, ಕನಿಷ್ಠ ಮೂರು ಅಧಿವಾಸಗಳು ಆಚರಣೆಯಲ್ಲಿರುತ್ತವೆ. 121 ಆಚಾರ್ಯರು ಧಾರ್ಮಿಕ ವಿಧಿಗಳನ್ನು ನಡೆಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಾಹ್ನ 12 ಗಂಟೆಗೆ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಶ್ರೀ ರಾಮಲಲ್ಲಾ ಅವರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಐತಿಹಾಸಿಕ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ದೇಶದ ಎಲ್ಲಾ ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪಂಥಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ವಿವಿಧ ಬುಡಕಟ್ಟು ಸಮುದಾಯಗಳ ಪ್ರತಿನಿಧಿಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು ಅನುಷ್ಠಾನದ ಎಲ್ಲಾ ಪ್ರಕ್ರಿಯೆಗಳ ಮೇಲ್ವಿಚಾರಣೆ, ಸಮನ್ವಯ ಮತ್ತು ನಿರ್ದೇಶನವನ್ನು ನೋಡಿಕೊಂಡರು. ಪ್ರಧಾನ ಆಚಾರ್ಯರಾಗಿ ಕಾಶಿಯ ಲಕ್ಷ್ಮೀಕಾಂತ್ ದೀಕ್ಷಿತ್ ನಿರ್ವಹಿಸಿದರು. ಪ್ರಧಾನಿ ಮೋದಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶದ ಗವರ್ನರ್ ಆನಂದಿಬೆನ್ ಪಟೇಲ್, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

'ಆರತಿ' ವೇಳೆ ಅಯೋಧ್ಯೆಯ ಮೇಲೆ ಸೇನಾ ಹೆಲಿಕಾಪ್ಟರ್‌ಗಳಿಂದ ಪುಷ್ಪವೃಷ್ಟಿ ಸುರಿಸಲಾಯಿತು. ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಆರತಿ ಸಮಯದಲ್ಲಿ 30 ಕಲಾವಿದರು ದೇವಾಲಯದ ಆವರಣದಲ್ಲಿ ವಿವಿಧ ಭಾರತೀಯ ಸಂಗೀತ ವಾದ್ಯಗಳನ್ನು ನುಡಿಸಿದರು.

ಎಲ್ಲಾ ಅತಿಥಿಗಳಿಗೆ ಆರತಿಯ ಸಮಯದಲ್ಲಿ ಅವರು ಬಾರಿಸುವ ಗಂಟೆಗಳನ್ನು ನೀಡಲಾಗುತ್ತದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದರು. 30 ಸಂಗೀತಗಾರರು ಕೆಲವು ಸಮಯದಲ್ಲಿ ತಮ್ಮ ವಾದ್ಯಗಳನ್ನು ಏಕಕಾಲದಲ್ಲಿ ನುಡಿಸಿದರು.

ಭಾರತೀಯ ಆಧ್ಯಾತ್ಮಿಕತೆಯ ಎಲ್ಲಾ ಶಾಲೆಗಳ ಆಚಾರ್ಯರು, ಧರ್ಮ, ಪಂಗಡ, ಆರಾಧನಾ ವ್ಯವಸ್ಥೆ ಹಾಗೂ 150ಕ್ಕೂ ಹೆಚ್ಚು ಸಂಪ್ರದಾಯಗಳ ಸಂತರು, ಮಹಾಮಂಡಲೇಶ್ವರರು, ಮಂಡಲೇಶ್ವರರು, ಶ್ರೀಮಹಾಂತರು, ಮಹಂತರು, ನಾಗಸಾಧುಗಳು, ಹಾಗೆಯೇ 50ಕ್ಕೂ ಹೆಚ್ಚು ಆದಿವಾಸಿಗಳು, ಗಿರಿವಾಸಿಗಳು, ತಾತವಾಸಿಗಳ ಪ್ರಮುಖರು, ದ್ವಿಪವಾಸಿ ಬುಡಕಟ್ಟು ಸಂಪ್ರದಾಯಗಳ ಮುಖಂಡರು, ಭವ್ಯ ಶ್ರೀರಾಮ ಜನ್ಮಭೂಮಿ ಮಂದಿರದ ಆವರಣದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಕಣ್ತುಂಬಿಕೊಂಡರು.

ಸಂಪ್ರದಾಯಗಳಾದ ಶೈವ, ವೈಷ್ಣವ, ಶಾಕ್ತ, ಗಣಪತ್ಯ, ಪತ್ಯ, ಸಿಖ್, ಬೌದ್ಧ, ಜೈನ, ದಶನಂ, ಶಂಕರ್, ರಮಾನಂದ, ರಾಮಾನುಜ್, ನಿಂಬಾರ್ಕ, ಮಾಧ್ವ, ವಿಷ್ಣು ನಾಮಿ, ರಾಮಸನೇಹಿ, ಘೀಸಾಪಂಥ್, ಗರೀಬ್ದಾಸಿ, ಗೌಡಿಯ, ಕಬೀರಪಂಥಿ, ವಾಲ್ಮೀಕಿ, ಶಂಕರದೇವ (ಅಸ್ಸಾಂ) ಹಾಗೂ ಮಾಧವ್ ದೇವ್, ಇಸ್ಕಾನ್, ರಾಮಕೃಷ್ಣ ಮಿಷನ್, ಚಿನ್ಮಯ ಮಿಷನ್, ಭಾರತ ಸೇವಾಶ್ರಮ ಸಂಘ, ಗಾಯತ್ರಿ ಪರಿವಾರ, ಅನುಕೂಲ್ ಚಂದ್ರ, ಠಾಕೂರ್ ಪರಂಪರಾ, ಒಡಿಶಾದ ಮಹಿಮಾ ಸಮಾಜ, ಅಕಾಲಿ, ನಿರಂಕಾರಿ, ಪಂಜಾಬ್‌ನ ನಾಮಧಾರಿ, ರಾಧಾಸೋಮಿ, ಮತ್ತು ಸ್ವಾಮಿನಾರಾಯಣ, ವಾರಕರಿ, ವೀರ ಶೈವದ ಪ್ರಮುಖರು ಉಪಸ್ಥಿತರಿದ್ದರು.

ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಎಲ್ಲಾ ವಿಧಿವಿಧಾನಗಳು ಮುಗಿದ ನಂತರ ಎಲ್ಲಾ ಪ್ರಮುಖರು ಕ್ರಮವಾಗಿ ದರ್ಶನ ಪಡೆಯಲಿದ್ದಾರೆ. ಭವ್ಯವಾದ ಶ್ರೀ ರಾಮ ಜನ್ಮಭೂಮಿ ಮಂದಿರವನ್ನು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರ ಉದ್ದ (ಪೂರ್ವ-ಪಶ್ಚಿಮ) 380 ಅಡಿ, ಅಗಲ 250 ಅಡಿ ಮತ್ತು ಎತ್ತರ 161 ಅಡಿ ಮತ್ತು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಒಳಗೊಂಡಿದೆ. ದೇವಾಲಯದ ಕಂಬಗಳು ಮತ್ತು ಗೋಡೆಗಳು ಹಿಂದೂ ದೇವತೆಗಳು, ದೇವರುಗಳು ಮತ್ತು ದೇವತೆಗಳ ಸಂಕೀರ್ಣವಾದ ಕೆತ್ತನೆಯ ಚಿತ್ರಣಗಳನ್ನು ಪ್ರದರ್ಶಿಸುತ್ತವೆ.

ನೆಲ ಮಹಡಿಯಲ್ಲಿರುವ ಮುಖ್ಯ ಗರ್ಭಗುಡಿಯಲ್ಲಿ ಭಗವಾನ್ ರಾಮಲಲ್ಲಾನ ವಿಗ್ರಹ ಇರಿಸಲಾಗಿದೆ. ಮಂದಿರದ ಮುಖ್ಯ ದ್ವಾರವು ಪೂರ್ವ ಭಾಗದಲ್ಲಿ ನೆಲೆಗೊಂಡಿದೆ. ಮಂದಿರದಲ್ಲಿ ಒಟ್ಟು ಐದು ಮಂಟಪಗಳಿವೆ- ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮಂಟಪ ಮತ್ತು ಕೀರ್ತನ ಮಂಟಪ ಇದೆ. ಮಂದಿರದ ಬಳಿ ಒಂದು ಐತಿಹಾಸಿಕ ಬಾವಿ (ಸೀತಾ ಕೂಪ್) ಇದೆ. ಮಂದಿರ ಸಂಕೀರ್ಣದ ನೈಋತ್ಯ ಭಾಗದಲ್ಲಿ, ಕುಬೇರ್ ತಿಲಾದಲ್ಲಿ, ಭಗವಾನ್ ಶಿವನ ಪುರಾತನ ಮಂದಿರವನ್ನು ಪುನಃಸ್ಥಾಪಿಸಲಾಗಿದೆ. ಜೊತೆಗೆ ಜಟಾಯುವಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ:ಜೈಲು ಗುಡಿಸಿ ಸಂಗ್ರಹಿಸಿದ ಹಣವನ್ನು ರಾಮ ಮಂದಿರಕ್ಕೆ ನೀಡಿದ ಮುಸ್ಲಿಂ ಯುವಕ

Last Updated : Jan 22, 2024, 2:35 PM IST

ABOUT THE AUTHOR

...view details