ಕರ್ನಾಟಕ

karnataka

ಕೋಟಾದಲ್ಲಿ ನೀಟ್​ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ - NEET STUDENT SUICIDE

By ETV Bharat Karnataka Team

Published : Apr 29, 2024, 8:32 AM IST

ಈ ವರ್ಷ ಕೋಚಿಂಗ್ ವಿದ್ಯಾರ್ಥಿಗಳ ಆರನೇ ಆತ್ಮಹತ್ಯೆ ಪ್ರಕರಣ ಕೋಟಾದಲ್ಲಿ ಬೆಳಕಿಗೆ ಬಂದಿದೆ. ಹರಿಯಾಣದ ವಿದ್ಯಾರ್ಥಿಯೊಬ್ಬ ಕೋಟಾದಲ್ಲಿರುವ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿಗೆ ಮೇ 5 ರಂದು ನೀಟ್ ಪರೀಕ್ಷೆ ಇತ್ತು. ಬಹುಶಃ ಪರೀಕ್ಷೆಯ ಒತ್ತಡದಿಂದ ಈ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

HARYANA NEET STUDENT SUICIDE  NEET STUDENT COMMITS SUICIDE  Student suicide in Kota  NEET exam
ಕೋಟಾದಲ್ಲಿ ನೀಟ್​ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ

ಕೋಟಾ (ರಾಜಸ್ಥಾನ):ನಗರದ ಕುನ್ಹಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಲ್ಯಾಂಡ್‌ಮಾರ್ಕ್ ಕೋಚಿಂಗ್ ಏರಿಯಾದಲ್ಲಿ ಮತ್ತೊಬ್ಬ ಕೋಚಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾರ್ಥಿಯು ವೈದ್ಯಕೀಯ ಪ್ರವೇಶ ಪರೀಕ್ಷೆಯ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (NEET UG 2024) ತಯಾರಿ ನಡೆಸಲು ಹರಿಯಾಣದ ರೋಹ್ಟಕ್‌ನಿಂದ ಕೋಟಾ ನಗರಕ್ಕೆ ಬಂದಿದ್ದನು.

ಹಾಸ್ಟೆಲ್ ಕೊಠಡಿಯಲ್ಲಿಯೇ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಪೊಲೀಸರು ವಿದ್ಯಾರ್ಥಿಯ ಮೃತದೇಹವನ್ನು ವಶಕ್ಕೆ ಪಡೆದು ಎಂಬಿಎಸ್ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ. ಭಾನುವಾರ ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ II ರಾಜೇಶ್ ಕುಮಾರ್ ಸೋನಿ ತಿಳಿಸಿದ್ದಾರೆ.

ಲ್ಯಾಂಡ್‌ಮಾರ್ಕ್ ಪ್ರದೇಶದ ಉತ್ತಮ್ ರೆಸಿಡೆನ್ಸಿಯಲ್ಲಿ ವಾಸಿಸುತ್ತಿರುವ ವಿಜಯಪಾಲ್ ಅವರ ಪುತ್ರ ಸುಮಿತ್ ಕುಮಾರ್ (19) ಎಂಬ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಳೆದ ಒಂದು ವರ್ಷದಿಂದ ಕೋಟಾದಲ್ಲಿ ನೆಲೆಸಿದ್ದರು. ಘಟನೆಯ ನಂತರ ಪೊಲೀಸರು ಆತನ ಹಾಸ್ಟೆಲ್ ಕೊಠಡಿಯನ್ನು ಸೀಲ್ ಮಾಡಿದ್ದಾರೆ. ಜೊತೆಗೆ ಕುಟುಂಬದ ಸದಸ್ಯರಿಗೂ ಸಂಪೂರ್ಣ ವಿಷಯವನ್ನು ತಿಳಿಸಲಾಗಿದೆ. ಕುಟುಂಬ ಸದಸ್ಯರ ಆಗಮನದ ನಂತರ, ಮರಣೋತ್ತರ ಪರೀಕ್ಷೆ ಮತ್ತು ಇತರ ಪ್ರಕ್ರಿಯೆಗಳು ಇಂದು (ಸೋಮವಾರ) ನಡೆಯಲಿವೆ. ಕೋಟಾ ನಗರದಲ್ಲಿ ಇದು ಈ ವರ್ಷದ ಆರನೇ ಆತ್ಮಹತ್ಯೆ ಪ್ರಕರಣವಾಗಿದೆ.

ಸುಮಿತ್ ಆತ್ಮಹತ್ಯೆ ಮಾಡಿಕೊಂಡಿರುವ ಉತ್ತಮ್ ರೆಸಿಡೆನ್ಸಿಯ ಕೊಠಡಿಯಲ್ಲಿ ಯಾವುದೇ ಆ್ಯಂಟಿ ಹ್ಯಾಂಗಿಂಗ್ ಸಾಧನ ಅಳವಡಿಸಿರಲಿಲ್ಲ. ಆದರೆ, ಕೋಟಾದಲ್ಲಿ ಎಲ್ಲ ಹಾಸ್ಟೆಲ್ ಮತ್ತು ಪಿಜಿ ನಿರ್ವಾಹಕರು, ಕೊಠಡಿಗಳಲ್ಲಿ ಆತ್ಮಹತ್ಯೆ ವಿರೋಧಿ ರಾಡ್‌ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಮತ್ತೊಂದೆಡೆ, ಸುಮಿತ್ ಮೇ 5 ರಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸಿದ NEET UG 2024 ಪರೀಕ್ಷೆಗೆ ಹಾಜರಾಗಬೇಕಾಗಿತ್ತು. ಬಹುಶಃ ಅವರು ಪರೀಕ್ಷೆಯ ಒತ್ತಡದಲ್ಲಿದ್ದರುವ ಸಾಧ್ಯತೆ ಇದೆ. ಇದರಿಂದ ಅವರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಜಮ್ಮು - ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ಗ್ರಾಮ ರಕ್ಷಣಾ ಸಿಬ್ಬಂದಿ ಸಾವು - Terror Attack

ABOUT THE AUTHOR

...view details