ಕರ್ನಾಟಕ

karnataka

ತುಮಕೂರು: ನೀರಿನ ರಭಸಕ್ಕೆ ಬೈಕ್​ ಸಮೇತ ಕೊಚ್ಚಿಕೊಂಡು ಹೋದ ಯುವಕ

By

Published : Aug 28, 2022, 4:21 PM IST

ತುಮಕೂರು: ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಟಗೆರೆ - ವಡ್ಡಗೆರೆ ಮುಖ್ಯ ರಸ್ತೆಯ ಮಲಪ್ಪನಹಳ್ಳಿ ಗ್ರಾಮದ ದೊಡ್ಡ ಹಳ್ಳ ತುಂಬಿ ರಸ್ತೆ ಮೇಲೆ ಹರಿಯುತ್ತಿತ್ತು. ಈ ನೀರಿನಲ್ಲಿ ಬೈಕ್​ ಜೊತೆ ಹೋಗುತ್ತಿದ್ದ ಯುವಕ, ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿದ್ದ. ಬಳಿಕ ಸ್ಥಳೀಯರು ಯುವಕನನ್ನು ರಕ್ಷಣೆ ಮಾಡಿದ್ದು, ಬೈಕ್​ ಕೊಚ್ಚಿಕೊಂಡು ಹೋಗಿದೆ.

ABOUT THE AUTHOR

...view details