ಚಿಕ್ಕೋಡಿ: ದಸರಾ ಅಂದಾಗ ಎಲ್ಲರಿಗೂ ಮೊದಲು ಆನೆಯ ಮೇಲೆ ಅಂಬಾರಿ, ಚಾಮುಂಡಿ ದೇವಿಗೆ ಪೂಜೆ, ಸಕಲ ಸಾಂಸ್ಕೃತಿಕ ಕಲಾ ಮೇಳಗಳನೊಳ್ಳಗೊಂಡ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಮೈಸೂರು ದಸರಾ ವೈಭವ ನೆನಪಿಗೆ ಬರುತ್ತೆ. ಅದರಂತೆ ಬೆಳಗಾವಿಯ ಗಡಿಭಾಗ ಅಂದರೆ ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದಲ್ಲೂ ಕೂಡ ನವರಾತ್ರಿಯನ್ನ ವಿಶೇಷವಾಗಿ ಆಚರಿಸಲಾಗುತ್ತದೆ. ಮೈಸೂರಿಗೆ ಚಾಮುಂಡಿ ನಾಡದೇವತೆಯಾದರೆ ಶ್ರೀ ಪದ್ಮಾವತಿ ದೇವಿ, ಉಗಾರದ ಗ್ರಾಮ ದೇವತೆ.