ಕರ್ನಾಟಕ

karnataka

ಶೂಟ್‌ ಮಾಡ್ಬಿಡಿ, ಕ್ರೀಡೆಯಲ್ಲಿರುವ ಮಕ್ಕಳನ್ನೇ ನೇಮಿಸಿಕೊಳ್ಳಿ.. ಅತ್ಯಾಚಾರ ನನ್‌ ಮಕ್ಕಳು ಮಾಡಿದರೂ ಅದು ನೀಚತನವೇ..

By

Published : Sep 22, 2021, 9:45 PM IST

ರೈಫಲ್‌ ಶೂಟಿಂಗ್‌ನಲ್ಲಿ ಸಾಕಷ್ಟು ಮಕ್ಕಳು ಪರಿಣಿತರಿದಾರೆ. ಇಂಥಾ ಶೂಟರ್‌ಗಳನ್ನ ಪೊಲೀಸ್‌ ಇಲಾಖೆಯಲ್ಲಿ ನೇಮಕ ಮಾಡಿಕೊಳ್ಳಬೇಕು. ಅತ್ಯಾಚಾರಿಗಳ ವಿರುದ್ಧ ಕ್ರೀಡಾ ಇಲಾಖೆಯ ಶೂಟರ್‌ಗಳನ್ನ ಬಳಸಿಕೊಳ್ಳಬೇಕು ಅಂತಾ ಬಿಜೆಪಿ ಸದಸ್ಯೆ ತೇಜಸ್ವಿನಿ ಶ್ರೀರಮೇಶ್‌ ಒತ್ತಾಯಿಸಿದರು. ವ್ಯಕ್ತಿತ್ವದಿಂದ ಯಾರು ಸುಂದರವಾಗಿರುತ್ತಾರೆಯೋ ಅವರೇ ಸೌಂದರ್ಯವುಳ್ಳ ವ್ಯಕ್ತಿ. ಈ ಬಗ್ಗೆ ಶಿಕ್ಷಣ ನೀಡಬೇಕು ಅಂತಾ ಬಿಜೆಪಿಯ ಸದಸ್ಯೆ ಭಾರತಿ ಶೆಟ್ಟಿ ಹೇಳಿದರು. ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ಕೂಡ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪರಿಷತ್‌ನಲ್ಲಿ ಈ ಮೂವರು ನಾರಿಮಣಿಗಳು ಅತ್ಯಾಚಾರ ಪ್ರಕರಣಗಳ ಹೆಚ್ಚಳದ ವಿರುದ್ಧ ಆರ್ಭಟಿಸಿದರು..

ABOUT THE AUTHOR

...view details