ಚಿತ್ರದುರ್ಗ: ಕೊರೊನಾ ಭೀತಿಯಿಂದ ಭಾರತ ಲಾಕ್ಡೌನ್ ಆದ ಬಳಿಕ ಹಲವಾರು ಜನರು, ಆಹಾರ ಹಾಗೂ ನೀರಿಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ. ಅಂತಹ ಬಡವರಿಗೆ ಮುರುಘಾಮಠ ಆಹಾರ ಕಲ್ಪಿಸುತ್ತಿದೆ. ಪ್ರತಿ ದಿನ ಎರಡು ಹೊತ್ತು ಆಹಾರವನ್ನು ಇಂದಿನಿಂದ ನೀಡುತ್ತಿದೆ. ಈ ಅನ್ನದಾಸೋಹದ ಕುರಿತು ಈಟಿವಿ ಭಾರತನೊಂದಿಗೆ ಮುರುಘಾಶ್ರೀಗಳು ಮಾತನಾಡಿದ್ದಾರೆ.