ಕರ್ನಾಟಕ

karnataka

ಕೇಂದ್ರ ಸಚಿವ ಇದ್ದ ವೇದಿಕೆಯ ಮೇಲೆ ವಿದ್ಯಾರ್ಥಿ ಸಂಘದ ಅಧ್ಯಕ್ಷನ ಮೇಲೆ ಹಲ್ಲೆ... ವಿಡಿಯೋ

By

Published : Jan 23, 2023, 10:07 PM IST

Updated : Feb 3, 2023, 8:39 PM IST

ಜೈಪುರ್​(ರಾಜಸ್ಥಾನ):ವಿದ್ಯಾರ್ಥಿ ಸಂಘದ ಕಚೇರಿಯನ್ನು ಉದ್ಘಾಟಿಸಲು ಇಲ್ಲಿಯ ಮಹಾರಾಣಿ ಕಾಲೇಜಿಗೆ ಕೇಂದ್ರ ಸಚಿವಗಜೇಂದ್ರ ಸಿಂಗ್​ ಶೇಖಾವತ್ ಆಗಮಿಸಿದ್ದರು. ಈ ವೇಳೆ ಅವರಿದ್ದಂತಹ ವೇದಿಕೆಯ ಮೇಲೆಯೇ ರಾಜಸ್ಥಾನ ವಿಶ್ವವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ಅರವಿಂದ್​ ಜಾಜ್ಡಾ ಎಂಬುವವರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿರ್ಮಲ್​ ಚೌಧರಿ ಎಂಬುವರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ನಿರ್ಮಲ್​ ಚೌಧರಿ ವೇದಿಕೆ ಮೇಲೆ ಹತ್ತಿ ವಿದ್ಯಾರ್ಥಿಗಳತ್ತ ಕೈ ಬೀಸುತ್ತ ಸಾಗಿದಾಗ ಹಿಂದಿದ್ದ ಅರವಿಂದ್​ ಜಾಜ್ಡಾ ಅವರ ತಲೆಯ ಭಾಗಕ್ಕೆ ಹೊಡೆದು ವೇದಿಕೆಯಿಂದ ತಳ್ಳಿದ್ದಾರೆ. ಅಲ್ಲೇ ಇದ್ದಂತಹ ನಿರ್ಮಲ್​ ಚೌಧರಿ ಬೆಂಬಲಿಗರು ಅರವಿಂದ್​ ಮೇಲೆ ದಾಳಿ ನಡೆಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.       

ಬಳಿಕ ಇಬ್ಬರ ಬೆಂಬಲಿಗರ ನಡುವೆ ಗಲಾಟೆ ಏರ್ಪಟ್ಟಿದೆ. ಪೊಲೀಸರು ಮಧ್ಯಪ್ರವೇಶಿಸಿ ಜಗಳವನ್ನು ಶಾಂತಗೊಳಿಸಿದ್ದಾರೆ. ಇನ್ನು, ವೇದಿಕೆ ಮೇಲೆ ನಿರ್ಮಲ್​ ಚೌಧರಿ ಬೆಂಬಲಿಗರು ಅರವಿಂದ್​ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಕಾರ್ಯಕ್ರಮಕ್ಕೂ ಮುಂಚೆ ನಿರ್ಮಲ್​ ಚೌಧರಿ ಮತ್ತು ಅರವಿಂದ್​ ಜಾಜ್ಡಾ ನಡುವೆ ಯಾವುದೋ ವಿಷಯಕ್ಕೆ ಜಗಳವಾಗಿತ್ತು. ಈ ಹಿನ್ನೆಲೆ ಕೇಂದ್ರ ಸಚಿವರು ಇದ್ದಂತಹ ವೇದಿಕೆ ಮೇಲೆ ಅರವಿಂದ್​ ಜಾಜ್ಡಾ ನಿರ್ಮಲ ಚೌಧರಿಯನ್ನು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. 

Last Updated : Feb 3, 2023, 8:39 PM IST

ABOUT THE AUTHOR

...view details