ಕರ್ನಾಟಕ

karnataka

ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬೈಕ್​ಗಳಿಗೆ ಗುದ್ದಿ ದುಷ್ಕರ್ಮಿಗಳು ಪರಾರಿ-ವಿಡಿಯೋ​

By

Published : May 22, 2023, 1:24 PM IST

ಅಪಘಾತದ ದೃಶ್ಯ

ಆನೇಕಲ್ (ಬೆಂಗಳೂರು): ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇನ್ನೋವಾ ಕಾರೊಂದನ್ನು ಪೊಲೀಸರು ಅಡ್ಡಗಟ್ಟಲು ಮುಂದಾದಾಗ ಬೈಕ್​ಗಳಿಗೆ ಡಿಕ್ಕಿ ಹೊಡೆಸಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಆನೇಕಲ್ ತಾಲೂಕಿನ ಬಳ್ಳೂರು ಗ್ರಾಮದ ಬಳಿ ನಡೆದಿದೆ. ಭಾನುವಾರ ರಾಜ್ಯದ ಗಡಿ ತಮಿಳುನಾಡಿನ ಜೂಜುವಾಡಿ ಬಳಿ ಶಂಕಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಕಾರನ್ನು ತಮಿಳುನಾಡು ಪೊಲೀಸರು ಅಡ್ಡಗಟ್ಟಿದ್ದಾರೆ. ಕಾರಿನಲ್ಲಿ 4 ರಿಂದ 5 ಮಂದಿ ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಚೇಸ್​ ಮಾಡಲು ಮುಂದಾಗಿದ್ದು, ತಪ್ಪಿಸಿಕೊಳ್ಳಲು ಕಾರು ನಿಲ್ಲಿಸದೆ ಬಳ್ಳೂರು ಗ್ರಾಮದ ಮೂಲಕ ಎಸ್ಕೇಪ್ ಆಗಲು ಯತ್ನಿಸಿದ್ದಾರೆ.  

ಈ ಸಂದರ್ಭದಲ್ಲಿ ಬಳ್ಳೂರು ಗ್ರಾಮಕ್ಕೆ ಅಡ್ಡಲಾಗಿ ಬರುತ್ತಿದ್ದ ಬೈಕ್​ಗಳಿಗೆ ಗುದ್ದಿ ಇನ್ನೋವಾ ಕಾರಿನಲ್ಲಿ ಎಸ್ಕೇಪ್ ಆಗಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಅಪಘಾತದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದರು ಎನ್ನುವ ಶಂಕೆ ವ್ಯಕ್ತವಾಗಿದೆ. ಪೊಲೀಸರಿಂದ ತನಿಖೆ ನಡೆಯುತ್ತಿದೆ. ಅತ್ತಿಬೆಲೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details