ಸುರಪುರ(ಯಾದಗಿರಿ):ತಾಲೂಕಿನ ರತ್ತಾಳ ಮಾರ್ಗ ಮಧ್ಯದಲ್ಲಿರುವ ಬಾವಿಯಲ್ಲಿ ತಾಯಿ ಹಾಗೂ ಮಗುವಿನ ಮೃತದೇಹ ಪತ್ತೆಯಾಗಿದೆ. ಇವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮೃತರನ್ನು ದೇವಮ್ಮ (25) ಹಾಗೂ ಬೀರಲಿಂಗ(4) ಎಂದು ಗುರುತಿಸಲಾಗಿದೆ. ಹಸನಾಪುರದ ನಿವಾಸಿಯಾಗಿರುವ ಮೃತ ಮಹಿಳೆಯು ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರಂತೆ. ಗಂಡನಿಗೆ ಮಾತು ಕೂಡ ಬರುತ್ತಿರಲಿಲ್ಲ. ಸಾಲ ಪಡೆದು ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎನ್ನಲಾಗುತ್ತಿದೆ.