ಕರ್ನಾಟಕ

karnataka

ರಥದ ಚಕ್ರಕ್ಕೆ ಸಿಲುಕಿದ್ದ ಯುವಕ ಸಾವು: ವಿಡಿಯೋ ವೈರಲ್​

By

Published : Mar 13, 2021, 12:39 AM IST

ಇದೇ ತಿಂಗಳ 5ನೇ ತಾರೀಖಿನಂದು ಅಗ್ನಿ ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರೆ ನಡೆಸಲಾಗುತಿತ್ತು. ಮೊದಲ ಬಾರಿ ಕಟ್ಟಿಗೆ ರಥದ ಮೂಲಕ ಈ ಬಾರಿ ರಥೋತ್ಸವ ನಡೆಸಲಾಗಿತ್ತು.ಈ ವೇಳೆ ಗ್ರಾಮದ ರಮೇಶ್​ ಸಾಸನೂರ ರಥದ ಚಕ್ರದಡಿ ಸಿಲುಕಿ ಗಂಭೀರ ಗಾಯಗೊಂಡಿದ್ದ.

A man died who stucked in rathchakra at surapura
ರಥದ ಚಕ್ರಕ್ಕೆ ಸಿಲುಕಿದ್ದ ಯುವಕ ಸಾವು

ಸುರಪುರ: ತಾಲೂಕಿನ ಅಗ್ನಿ ಗ್ರಾಮದಲ್ಲಿ ಗ್ರಾಮದೇವತೆ ಜಾತ್ರೆ ರಥೋತ್ಸವದ ವೇಳೇ ಚಕ್ರದಡಿ ಸಿಲುಕಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.

ಸಾವಿಗೀಡಾದ ಯುವಕ

ಇದೇ ತಿಂಗಳ 5ನೇ ತಾರೀಖಿನಂದು ಅಗ್ನಿ ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರೆ ನಡೆಸಲಾಗುತಿತ್ತು. ಮೊದಲ ಬಾರಿ ಕಟ್ಟಿಗೆ ರಥದ ಮೂಲಕ ಈ ಬಾರಿ ರಥೋತ್ಸವ ನಡೆಸಲಾಗಿತ್ತು . ಈ ವೇಳೆ ಗ್ರಾಮದ ರಮೇಶ್​ ಸಾಸನೂರ ರಥದ ಚಕ್ರದಡಿ ಸಿಲುಕಿ ಗಂಭೀರ ಗಾಯಗೊಂಡಿದ್ದ. ನಂತರ ರಮೇಶ್​ನನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ‌ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ.

ರಥದ ಚಕ್ರಕ್ಕೆ ಸಿಲುಕಿದ್ದ ಯುವಕ ಸಾವು

ರಥೋತ್ಸವ ಸಂದರ್ಭದಲ್ಲಿ ರಮೇಶ್​ ರಥದ ಚಕ್ರದಡಿ ಸಿಲುಕಿದ್ದರೂ ಭಕ್ತರು ಮಾನವೀಯತೆ ಮರೆತು ಹಾಗೆ ಆತನನ್ನು ತುಳಿಯುತ್ತಾ ರಥೋತ್ಸವದಲ್ಲಿ ಭಾಗಿಯಾಗಿದ್ದಾರೆ. ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾದ ಪೊಲೀಸರು ನಿಷ್ಕಾಳಜಿ ವಹಿಸಿದ ಹಿನ್ನೆಲೆ ಈ ದುರ್ಘಟನೆ ನಡೆದಿದೆ ಎಂದು ಆರೋಪಿಸಲಾಗುತ್ತಿದೆ. ಕೆಂಭಾವಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ABOUT THE AUTHOR

...view details