ಕರ್ನಾಟಕ

karnataka

ವಿಜಯಪುರದಲ್ಲಿ ಚಳಿಯ ತೀವ್ರತೆಗೆ ವೃದ್ಧ ಬಲಿ

By

Published : Dec 10, 2022, 12:58 PM IST

ಮದ್ಯದಂಗಡಿ ಬಳಿ ಮಲಗಿದ್ದ ವೃದ್ಧನನ್ನು ಸಾರ್ವಜನಿಕರು ಎಬ್ಬಿಸಲು ಹೋದಾಗ ಅವರು ಸಾವನ್ನಪ್ಪಿರುವ ವಿಷಯ ತಿಳಿದು ಬಂದಿದೆ.

old-man-died-due-to-extreme-cold-in-vijayapur
ವಿಜಯಪುರದಲ್ಲಿ ಚಳಿಯ ತೀವ್ರತೆಗೆ ವೃದ್ಧ ಬಲಿ

ವಿಜಯಪುರ:ಚಳಿಯ ತೀವ್ರತೆಗೆ ವೃದ್ಧರೊಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಪಟ್ಟಣದ ಬಸವೇಶ್ವರ ವೃತ್ತದ ಬಳಿ ಇರುವ ನವರತ್ನ ಬಾರ್ ಹಾಗೂ ರೆಸ್ಟೋರೆಂಟ್ ಮುಂದೆ ನೇತಾಜಿ ನಗರದ ನಿವಾಸಿ ಭೀಮಪ್ಪ ಹಾದಿಮನಿ(75) ಎಂಬವರು ಸಾವನ್ನಪ್ಪಿದ್ದಾರೆ. ಮದ್ಯದಂಗಡಿಗೆ ಬೆಳಗ್ಗೆ ಬಂದಿದ್ದ ವೃದ್ಧ ಕೈಯ್ಯಲ್ಲಿ ಒಂದಿಷ್ಟು ಹಣ ಹಿಡಿದುಕೊಂಡು ಪ್ರಣಾಮ ಮಾಡುವ ಸ್ಥಿತಿಯಲ್ಲಿ ಮಲಗಿದ್ದಾರೆ. ಅಂಗಡಿ ಬಳಿ ಸಾರ್ವಜನಿಕರು ಎಬ್ಬಿಸಲು ಹೋದಾಗ ಅವರು ಸಾವನ್ನಪ್ಪಿರುವ ವಿಷಯ ತಿಳಿದು ಬಂದಿದೆ.

ಮುದ್ದೇಬಿಹಾಳ ಪೊಲೀಸ್​ ಸಿಬ್ಬಂದಿ ಸಂಜು ಜಾಧವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೈ ಮುಷ್ಟಿ ಮಾಡಿ ಗಟ್ಟಿಯಾದ ಸ್ಥಿತಿಯಲ್ಲಿ ವ್ಯಕ್ತಿ ಇರುವುದು ಗಮನಿಸಿದಾಗ ಬೆಳಗಿನ ಚಳಿಯ ತೀವ್ರತೆ ತಾಳದೇ ಸಾವನ್ನಪ್ಪಿದ್ದಾರೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕೊರಟಗೆರೆ: ಇರಕಸಂದ್ರ ಕಾಲೋನಿಯಲ್ಲಿ ಬಾಲಕರ ಮೇಲೆ ಚಿರತೆ ದಾಳಿ

ABOUT THE AUTHOR

...view details