ಕರ್ನಾಟಕ

karnataka

ಸಿಎಂ ಅವರಿಂದಲೇ ಪಂಚಮಸಾಲಿಗಳ ಹೋರಾಟ ಹತ್ತಿಕ್ಕುವ ತಂತ್ರ: ಬಿರಾದಾರ ಆರೋಪ

By

Published : Feb 20, 2021, 8:29 AM IST

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಿದರೆ ಸಿಎಂಗೆ ಸನ್ಮಾನಿಸುತ್ತೇವೆ. ಇಲ್ಲದಿದ್ದರೆ ಅವರನ್ನು ಖುರ್ಚಿಯಿಂದ ಕೆಳಗಿಳಿಸುವುದು ನಿಶ್ಚಿತ ಎಂದು ಕಾಮರಾಜ ಬಿರಾದಾರ ಹೇಳಿದ್ದಾರೆ.

kamraj biradar alligation against cm bsy over panchamsali protest
ಯಡಿಯೂರಪ್ಪ ವಿರುದ್ಧ ಆರೋಪ

ಮುದ್ದೇಬಿಹಾಳ: 2ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮಾಜದಿಂದ ನಡೆದಿರುವ ಹೋರಾಟವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವೇ ಹತ್ತಿಕ್ಕುವ ತಂತ್ರ ನಡೆಸಿದ್ದಾರೆ ಎಂದು ಓಬಿಸಿ 2ಎ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮರಾಜ ಬಿರಾದಾರ ಆರೋಪಿಸಿದ್ದಾರೆ.

ಸಿಎಂ ಯಡಿಯೂರಪ್ಪ ವಿರುದ್ಧ ಆರೋಪ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಂಜೆ ನಡೆದ 'ಈಟಿವಿ ಭಾರತ'ದೊಂದಿಗೆ ಅವರು ಮಾತನಾಡಿದರು. ಪಂಚಮಸಾಲಿಗಳು ಪ್ರಬಲರಾದರೆ ತಮ್ಮ ಹಾಗೂ ಕುಟುಂಬದ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆ ಬಂದೀತು ಎಂಬ ಕಾರಣಕ್ಕೆ ಯಡಿಯೂರಪ್ಪ, ಕೆಲವು ಎಂಎಲ್​ಎಗಳನ್ನು ಬಿಟ್ಟು ಪಂಚಮಸಾಲಿಗಳ ಹೋರಾಟವನ್ನು ಹತ್ತಿಕ್ಕುವ ಕುತಂತ್ರವನ್ನು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಿದರೆ ಸಿಎಂಗೆ ಸನ್ಮಾನಿಸುತ್ತೇವೆ, ಇಲ್ಲದಿದ್ದರೆ ಅವರನ್ನು ಖುರ್ಚಿಯಿಂದ ಕೆಳಗಿಳಿಸುವುದು ನಿಶ್ಚಿತ ಎಂದು ಎಚ್ಚರಿಕೆ ರವಾನಿದರು.
ಸಮಾಜದ ಅಧ್ಯಕ್ಷ ಅಮರೇಶ ಗೂಳಿ ಮಾತನಾಡಿ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.21ರಂದು ನಡೆಯಲಿರುವ ಪಂಚಮಸಾಲಿ ಸಮಾವೇಶಕ್ಕೆ ವಿಜಯಪುರ ಜಿಲ್ಲೆಯಿಂದ ಅಂದಾಜು 60 ಸಾವಿರ ಜನರು ತೆರಳಲಿದ್ದಾರೆ. ಪಂಚಮಸಾಲಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿರುವ ಊರುಗಳಿಂದ ಬಸ್‌ಗಳು, ಟ್ರ್ಯಾಕ್ಟರ್​ಗಳನ್ನು ಮಾಡಿಕೊಂಡು ಸಮಾವೇಶಕ್ಕೆ ತೆರಳಲಾಗುತ್ತಿದ್ದು ಬಸ್‌ಗಳ ವ್ಯವಸ್ಥೆಯನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಶೈಲ ದೊಡಮನಿ, ಗ್ರಾ.ಪಂ. ಮಾಜಿ ಸದಸ್ಯ ಗುರುಲಿಂಗಪ್ಪ ಸುಲ್ಲಳ್ಳಿ, ಸಂಗಮೇಶ ಹಾರಿವಾಳ ಮತ್ತಿತರರು ಇದ್ದರು.

ABOUT THE AUTHOR

...view details