ಕರ್ನಾಟಕ

karnataka

ವಿಜಯಪುರದಲ್ಲಿ ಮತ್ತೆ ಭೂಕಂಪನ.. 2.9ರಷ್ಟು ತೀವ್ರತೆ ದಾಖಲು

By

Published : Oct 5, 2021, 7:20 PM IST

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ 2.9 ತೀವ್ರತೆ (ರಿಕ್ಟರ್ ಮಾಪಕ)ಯ ಭೂಕಂಪ ಸಂಭವಿಸಿದೆ.

Earthquake in Vijayapura district
ವಿಜಯಪುರದ ಬಸವನ ಬಾಗೇವಾಡಿಯಲ್ಲಿ ಭೂಕಂಪನ

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ಬಳಿ ಇಂದು ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 2.9 ತೀವ್ರತೆ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭೂಕಂಪನದ ತೀವ್ರತೆ ಬಹಳ ಕಡಿಮೆ ಇದೆ. ಭೂಕಂಪನ ಕೇಂದ್ರಬಿಂದುವಿನಿಂದ 5-7 ಕಿ.ಮೀ ಅಂತರದವರೆಗೆ ಭೂಮಿ ಕಂಪಿಸಿದ ಅನುಭವ ಆಗಿರಬಹುದು ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಸಮಿತಿಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ರಾಜನ್ ತಿಳಿಸಿದ್ದಾರೆ.

ಯಾವುದೇ ಹಾನಿಯಾಗಿಲ್ಲ:

ಭೂಕಂಪನದಿಂದ ಯಾವುದೇ ಜೀವ ಹಾನಿ ಅಥವಾ ಆಸ್ತಿ-ಪಾಸ್ತಿಗೆ ಹಾನಿಯಾಗಿಲ್ಲ. ಈ ರೀತಿಯ ಭೂಕಂಪಗಳು ಯಾವುದೇ ಹಾನಿ ಉಂಟುಮಾಡುವುದಿಲ್ಲ. ಸ್ಥಳೀಯವಾಗಿ "ಸ್ವಲ್ಪ ಕಂಪಿಸುವಿಕೆ" ಕಂಡುಬಂದಿದೆ ಎಂದು ರಾಜನ್ ಹೇಳಿದರು. ಯಾರೂ ಕೂಡ ಭಯಪಡುವ ಅಗತ್ಯವಿಲ್ಲ. ತೀವ್ರತೆಯು ತುಂಬಾ ಕಡಿಮೆ ಇದೆ, ಇದು ಅಪಾಯಕಾರಿಯಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ವಿಜಯಪುರದಲ್ಲಿ ಕಂಪಿಸಿದ ಭೂಮಿ: ಅನುಭವ ಬಿಚ್ಚಿಟ್ಟ ಸ್ಥಳೀಯರು

ಅಕ್ಟೋಬರ್ 1 ರಂದು ಜಿಲ್ಲೆಯಲ್ಲಿ 2.5 ತೀವ್ರತೆಯ ಭೂಕಂಪ ಸಂಭವಿಸಿತ್ತು.

ABOUT THE AUTHOR

...view details