ಕರ್ನಾಟಕ

karnataka

ವಿಜಯಪುರ : ಬಸ್ ನಿಲ್ದಾಣದಲ್ಲಿ ಸರಗಳ್ಳತನ ಮಾಡಿದ್ದ ಆರೋಪಿ ಬಂಧನ

By

Published : Sep 11, 2021, 9:53 PM IST

ಸರಗಳ್ಳತನ ಮಾಡಿದ್ದ ಆರೋಪಿ ಬಂಧನ
ಸರಗಳ್ಳತನ ಮಾಡಿದ್ದ ಆರೋಪಿ ಬಂಧನ ()

ತಾಳಿಕೋಟೆ ಬಸ್ ನಿಲ್ದಾಣದಲ್ಲಿ ಮಹಿಳೆ ಕುಳಿತಾಗ ಸರ ಎಗರಿಸಿಕೊಂಡು ಪರಾರಿಯಾಗಿದ್ದ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.‌ ಸುಮಾರು 35 ಗ್ರಾಂ ತೂಕವಿರುವ ಬಂಗಾರದ ಸರದ ಮೌಲ್ಯ 1.70 ಲಕ್ಷ ರೂ. ಎಂದು ಅಂದಾಜಿಸಲಾಗಿತ್ತು. ಕಳ್ಳತನ ವಾದ ಸರವನ್ನ ಜಪ್ತಿ ಮಾಡಲಾಗಿದೆ..

ವಿಜಯಪುರ :ತಾಳಿಕೋಟೆ ಬಸ್ ನಿಲ್ದಾಣದಲ್ಲಿ ಬಸ್​​ಗಾಗಿ ಕಾಯುತ್ತಿದ್ದ ಮಹಿಳೆಯ ಸರವನ್ನ ಹೊಂಚು ಹಾಕಿ ಸರಗಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿ ಬಂಧನ

ಸುರಪುರ ತಾಲೂಕಿನ‌ ಸತ್ಯನಪೇಟೆಯ ನಿವಾಸಿ ಅಮರೇಶ‌ ಭೀಮ್ಮಣ್ಣ ಕ್ವಾಟಿ(20) ಎಂಬಾತ ಬಂಧಿತ ಆರೋಪಿ. ತಾಳಿಕೋಟೆ ಸಮೀಪದ ಮೂಕಿಹಾಳ‌ ಕ್ರಾಸ್ ಬಳಿ ಸಂಶಯಾಸ್ಪದವಾಗಿ ಸುತ್ತಾಡುತ್ತಿದ್ದ. ಪೊಲೀಸರು ವಿಚಾರಣೆ ನಡೆಸಿದ ನಂತರ ಸರಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ತಾಳಿಕೋಟೆ ಬಸ್ ನಿಲ್ದಾಣದಲ್ಲಿ ಮಹಿಳೆ ಕುಳಿತಾಗ ಸರ ಎಗರಿಸಿಕೊಂಡು ಪರಾರಿಯಾಗಿದ್ದ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.‌ ಸುಮಾರು 35 ಗ್ರಾಂ ತೂಕವಿರುವ ಬಂಗಾರದ ಸರದ ಮೌಲ್ಯ 1.70 ಲಕ್ಷ ರೂ. ಎಂದು ಅಂದಾಜಿಸಲಾಗಿತ್ತು. ಕಳ್ಳತನ ವಾದ ಸರವನ್ನ ಜಪ್ತಿ ಮಾಡಲಾಗಿದೆ. ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರಿಗೆ ಎಸ್ಪಿ ಆನಂದಕುಮಾರ ಪ್ರಶಂಸೆ ಪತ್ರ ನೀಡಿ ಗೌರವಿಸಿದ್ದಾರೆ.

ಇದನ್ನೂ ಓದಿ : VIDEO; ಹಾಡಹಗಲೇ ಬಸ್ ನಿಲ್ದಾಣದಲ್ಲಿ ಚಿನ್ನದ ಸರ ಎಗರಿಸಿದ ಖದೀಮ

ABOUT THE AUTHOR

...view details